ಮನೆ

ಭೂಮಿ ಮೇಲೆ ಅದೆಷ್ಟು
ಜಾತಿ ಮತ ಧರ್ಮಗಳ ಹಗೆತನ
ಕೊಲೆ ಭಯೋತ್ಪಾದನೆಗಳ ಅಟ್ಟಹಾಸ.
ಆಕಾಶ ಮಾರ್ಗ ಅದೆಷ್ಟು ಹೊಚ್ಚ ಹೊಸತನ
ಬಾನಂಗಳ ಅದೆಷ್ಟು ಸುಂದರ
ನನ್ನ ಕಿಡಕಿಯಾಚೆ ಅದೇನು ನಯನಮನೋಹರ
ಇಲ್ಲೊಂದು ಪುಟ್ಟ ಮನೆ ಕಟ್ಟುವಾಸೆ.
ಕಲ್ಲು ಮಣ್ಣಿನ ಇಟ್ಟಿಗೆ ಸಿಮೆಂಟಿನ
ಮನೆ ಬೇಡ-
ಅದಕೆ ಬಾಗಿಲು, ಕಿಟಕಿ, ಕೋಣೆ, ಬಾಲ್ಕನಿ ಎನುತ
ತಲೆ ಕೆಡಿಸಿಕೊಳ್ಳುವುದು ಬೇಡ
ಕಟ್ಟಿಗೆ ಹುಲ್ಲು ಹೊದಿಕೆಯ
ಗುಡಿಸಲವೂ ಬೇಡ-
ಭದ್ರತೆಗೆ ನಾಯಿ ನರಿ
ಆಳು ಕಾಳುಗಳೇನೂ ಬೇಡವೇಬೇಡ

ಇದ್ದೂ ಇಲ್ಲದಂತಿರುವ
ಇಲ್ಲದೆಯೂ ಇದ್ದಂತಿರುವ
ಶುದ್ಧ ಪರಿಶುದ್ಧ ಮೋಡಿನಾ ಹಂಜಿ ಹಿಂಜಿ
ನಿರ್ಭೀತಿಯ ಮನೆ ಕಟ್ಟಿ ಆಕಾಶದಲೆಗಳ ನಡುವೆ
ಗಾಳಿ ಬೆಳಕಿನಾ ಆಹಾರ ಸೇವಿಸುತಾ
ಕರಿಗಿಬಿಡಬೇಕೀ ಮನೆಯಲ್ಲೇ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಾದಿ
Next post ಪ್ರಶ್ನೆ ಉತ್ತರ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…