ಅನಾದಿ

ಯಾವುದು ಮೊದಲೊ,
ಮೊದಲಿಗ ರಾರೋ,
ಭಾವವಿಸಂಗತ,
ಅಲೇಖ್ಯ ನಂದನಕೆ,

ಕೊನೆ ಎಲ್ಲಿಯದೊ,
ಕೊನೆಯಿಸುವವರಾರೋ,
ಭೂರಮೆ ಭಾಗ್ಯದ,
ಬಾಂದಳದಂಗಳಕೆ,

ಅಂಕುರವಾವುದೋ
ಅಂದಣದ್ಹೇರಿಗೆ?
ಅಂಕುಶವೆಲ್ಲಿಯೊ
ಮುಂದಣ ಯಾನೆಗೆ?

ನಿಃ ಶಬ್ದದಿ ದನಿಸಿದ
ಇನಿದನಿಯಾವುದೊ,
ಯುಗ-ಯುಗಾಂತರ
ಜಾಲ-ಜಾಲದಲಿ,

ಶಬ್ದ-ಶಬ್ದಾಬ್ದಿಯ
ಶಾಬ್ದಿಕದಕ್ಕರ,
ಜಗ-ಜಗ ಜಾತರ
ಲೀಲಾ ಮಾಲೆಯಲಿ,

ಪಲ್ಲವ-ಪಲ್ಲವಿ
ಚರಣದ ಚಾರಣ,
ವಲ್ಲರಿ ಗಾನ ಗಾಯನ
ಸರ ಸ್ವರ ರಿಂಗಣ,

ಪ್ರಕೃತಿ ಪುರುಷನೊ
ಪುರುಷ-ಪ್ರಕೃತಿಯೋ,
ಪರುಷದಂಟಿನ ನಂಟಿನ
ಭಾಗ್ಯೋದಯಕೆ,

ಏಕದೊಳನೇಕವೋ,
ಅನೇಕದೊಳೇಕವೊ,
ಏಕೀ ಭವಿಸಲೋಲೈಸುವ,
ಏಕಾಂಕ ಜೀವನದಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯೋತ್ಪಾದನೆ
Next post ಮನೆ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys