Home / ಕವನ / ಕವಿತೆ / ಭಯೋತ್ಪಾದನೆ

ಭಯೋತ್ಪಾದನೆ

ಅವರು ಗಲಾಟೆ ಮಾಡುತ್ತ
ಸರಿದು ಹೋದರು ಓಣಿತುಂಬ
ತೊಟ್ಟಿಲಲಿ ಮಲಗಿದ ಕಂದ
ಚಟ್ಟನೇ ಚೀರಿತು, ಅಂಗಳದ
ತುಂಬ ಗಿಡಗಳು ಕಾಣದಂತೆ ಧೂಳು,
ತಲ್ಲಣ ಆವರಿಸಿದ ಮುಂಜಾವು.

ಅವರು ಬಾಯಿ ಮಾಡುತ್ತ ಬಂದರು,
ಜೊತೆಯಲಿ ತುಂಬ ಜನರ ತಂದರು,
ಎಲ್ಲಾ ಹೂಗಳು ಬಳ ಬಳ ಬಿಚ್ಚಿ ವಿಕಾಳ
ಹೊರ ಮರೆತು ಒಳ ಇಣುಕಿದ ಕಿಡಿ ಬಿಂಬ
ಎಲ್ಲರ ಕಣ್ಣ ತುಂಬ ಕರಿ ದಿಗಿಲು.

ಅವರು ಕೈಕಾಲು ಆಡಿಸುತ್ತ ಹೋಗಿ
ಹೋಗಿ ಬಂದರು, ಮತ್ತೆ ಉಗಿಯಾಗಿ
ಹೊಗೆಯಾಗಿ ಹರಡಿದರು, ಎಲ್ಲರ ಎದುರು
ಚಚ್ಚಿದರು, ಬಿಚ್ಚಿದರು, ಕೊಚ್ಚಿದರು, ಹೂಂಕಾರ
ಸ್ಥಬ್ಧಗೊಂಡವು ಉಸಿರುಗಳು ಓಣಿತುಂಬ.

ಅವರು ತಮ್ಮಷ್ಟಕೇ ತಾವೇ ಕಲ್ಪಿಸಿ ವಕ್ರದಾರಿ
ಹಿಡಿದರು ನಡೆಯಲಾಗದೇ ಕುಸಿದರು
ಎಲ್ಲವೂ ಆಯಿತೆಂಬ ಭ್ರಮೆಯಲಿ ಎದೆಗೆ
ಒದ್ದು ನಿಂತರು. ಆಕಾರ ವಿಕಾರಗಳು!
ಚಿಲ್ಲನೇ ರಕ್ತದೋಕುಳಿ ಎಲ್ಲೆಲ್ಲೂ ಹೆರಿಗೆ ಮನೆ.

ಅವರು ಮತ್ತೆ ತಂದೆ ತಾಯಿಯರ ಹೆಸರು
ಮರೆತರು ಉನ್ಮತ್ತ ಚಕಮಕಿಯ ಬೆಂಕಿಯಲಿ
ಉರಿದರು ಪತಂಗಗಳಾಗಿ ನಡೆದ ದಾರಿ
ತುಂಡು ತುಂಡಾಗಿ ಬಯಲ ದಾರಿ ಸಿಗದಾಗಿ
ನಿಂತಲ್ಲೇ ಕುಸಿದರು ಬಂಧವಾಗಲೇ ಇಲ್ಲ ಬಳ್ಳಿ ಬಳಗದಲಿ.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...