Home / ಕವನ / ಕವಿತೆ / ಭಯೋತ್ಪಾದನೆ

ಭಯೋತ್ಪಾದನೆ

ಅವರು ಗಲಾಟೆ ಮಾಡುತ್ತ
ಸರಿದು ಹೋದರು ಓಣಿತುಂಬ
ತೊಟ್ಟಿಲಲಿ ಮಲಗಿದ ಕಂದ
ಚಟ್ಟನೇ ಚೀರಿತು, ಅಂಗಳದ
ತುಂಬ ಗಿಡಗಳು ಕಾಣದಂತೆ ಧೂಳು,
ತಲ್ಲಣ ಆವರಿಸಿದ ಮುಂಜಾವು.

ಅವರು ಬಾಯಿ ಮಾಡುತ್ತ ಬಂದರು,
ಜೊತೆಯಲಿ ತುಂಬ ಜನರ ತಂದರು,
ಎಲ್ಲಾ ಹೂಗಳು ಬಳ ಬಳ ಬಿಚ್ಚಿ ವಿಕಾಳ
ಹೊರ ಮರೆತು ಒಳ ಇಣುಕಿದ ಕಿಡಿ ಬಿಂಬ
ಎಲ್ಲರ ಕಣ್ಣ ತುಂಬ ಕರಿ ದಿಗಿಲು.

ಅವರು ಕೈಕಾಲು ಆಡಿಸುತ್ತ ಹೋಗಿ
ಹೋಗಿ ಬಂದರು, ಮತ್ತೆ ಉಗಿಯಾಗಿ
ಹೊಗೆಯಾಗಿ ಹರಡಿದರು, ಎಲ್ಲರ ಎದುರು
ಚಚ್ಚಿದರು, ಬಿಚ್ಚಿದರು, ಕೊಚ್ಚಿದರು, ಹೂಂಕಾರ
ಸ್ಥಬ್ಧಗೊಂಡವು ಉಸಿರುಗಳು ಓಣಿತುಂಬ.

ಅವರು ತಮ್ಮಷ್ಟಕೇ ತಾವೇ ಕಲ್ಪಿಸಿ ವಕ್ರದಾರಿ
ಹಿಡಿದರು ನಡೆಯಲಾಗದೇ ಕುಸಿದರು
ಎಲ್ಲವೂ ಆಯಿತೆಂಬ ಭ್ರಮೆಯಲಿ ಎದೆಗೆ
ಒದ್ದು ನಿಂತರು. ಆಕಾರ ವಿಕಾರಗಳು!
ಚಿಲ್ಲನೇ ರಕ್ತದೋಕುಳಿ ಎಲ್ಲೆಲ್ಲೂ ಹೆರಿಗೆ ಮನೆ.

ಅವರು ಮತ್ತೆ ತಂದೆ ತಾಯಿಯರ ಹೆಸರು
ಮರೆತರು ಉನ್ಮತ್ತ ಚಕಮಕಿಯ ಬೆಂಕಿಯಲಿ
ಉರಿದರು ಪತಂಗಗಳಾಗಿ ನಡೆದ ದಾರಿ
ತುಂಡು ತುಂಡಾಗಿ ಬಯಲ ದಾರಿ ಸಿಗದಾಗಿ
ನಿಂತಲ್ಲೇ ಕುಸಿದರು ಬಂಧವಾಗಲೇ ಇಲ್ಲ ಬಳ್ಳಿ ಬಳಗದಲಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...