ಹುಟ್ಟಿ ಬಾ ಗಾಂಧೀ ಮತ್ತೊಮ್ಮೆ

ಜೋಪಡಿಯ ಒಳಗಿಂದ
ಖಾಲಿ ಮಡಕೆಯ ಮುಂದೆ
ಅಳುವ ಕಂದನ ಕೂಗು
ಕೇಳಿರುವೆ.

ಸತ್ತ ನಗರದ ರಾಜರಸ್ತೆಯ
ಓಣಿಯಲಿ
ರಾತ್ರಿ ರಾಣಿಯರ ಬೇಹಾರ
ಕಂಡಿರುವೆ.

ನೆಟ್ಟ ಫಸಲಿಗೆ ಕಟ್ಟದ ಬೆಲೆ
ಹೊಟ್ಟೆಗೆ ಒದ್ದೆ ಬಟ್ಟೆ,
ಕಟ್ಟಿ ಮಲಗಿದ ರೈತನ ಕಣ್ಣೀರು
ನೋಡಿರುವೆ.

ಧರ್ಮ ಭೋಧಿಸಿ,
ಪುಷ್ಕಲ ತಿಂದು
ಹಾಯಾಗಿ ಪವಡಿಸಿದ
ಧರ್ಮಾತ್ಮರ ಗೊರಕೆ ಶಬ್ದಕ್ಕೆ
ಬೆದರಿರುವೆ.

ಮೊಣಕೈಗೆ ಸವರಿದ ಬೆಲ್ಲ
ಗದ್ದುಗೆಯ ಮೇಲೇರಿದ ಮಲ್ಲ
ಪುಳ್ಳ ಪುಢಾರಿಯ ರಾಜ ಠೀವಿಗೆ
ಬೆರಗಾಗಿರುವೆ.

ಎಲ್ಲ ನೋವಿನ ಮಧ್ಯೆ
ನೋವ ಕಣ್ಗಳ ಸೆಳೆತ
ಆರಿದ ಗಂಟಲೊಳಗಿಂದ
ಗೀರಲು ಶಬ್ಧ.

ಉಳಿದದ್ದು ಒಂದೇ
ಕೊನೆಗೊಮ್ಮೆ
ಹುಟ್ಟಿ ಬಾ ಗಾಂಧೀ,
ಮತ್ತೊಮ್ಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್ಮಸಂಸ್ಥಾಪನಾರ್ಥಾಯ
Next post ಭಯೋತ್ಪಾದನೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…