ಹುಟ್ಟಿ ಬಾ ಗಾಂಧೀ ಮತ್ತೊಮ್ಮೆ

ಜೋಪಡಿಯ ಒಳಗಿಂದ
ಖಾಲಿ ಮಡಕೆಯ ಮುಂದೆ
ಅಳುವ ಕಂದನ ಕೂಗು
ಕೇಳಿರುವೆ.

ಸತ್ತ ನಗರದ ರಾಜರಸ್ತೆಯ
ಓಣಿಯಲಿ
ರಾತ್ರಿ ರಾಣಿಯರ ಬೇಹಾರ
ಕಂಡಿರುವೆ.

ನೆಟ್ಟ ಫಸಲಿಗೆ ಕಟ್ಟದ ಬೆಲೆ
ಹೊಟ್ಟೆಗೆ ಒದ್ದೆ ಬಟ್ಟೆ,
ಕಟ್ಟಿ ಮಲಗಿದ ರೈತನ ಕಣ್ಣೀರು
ನೋಡಿರುವೆ.

ಧರ್ಮ ಭೋಧಿಸಿ,
ಪುಷ್ಕಲ ತಿಂದು
ಹಾಯಾಗಿ ಪವಡಿಸಿದ
ಧರ್ಮಾತ್ಮರ ಗೊರಕೆ ಶಬ್ದಕ್ಕೆ
ಬೆದರಿರುವೆ.

ಮೊಣಕೈಗೆ ಸವರಿದ ಬೆಲ್ಲ
ಗದ್ದುಗೆಯ ಮೇಲೇರಿದ ಮಲ್ಲ
ಪುಳ್ಳ ಪುಢಾರಿಯ ರಾಜ ಠೀವಿಗೆ
ಬೆರಗಾಗಿರುವೆ.

ಎಲ್ಲ ನೋವಿನ ಮಧ್ಯೆ
ನೋವ ಕಣ್ಗಳ ಸೆಳೆತ
ಆರಿದ ಗಂಟಲೊಳಗಿಂದ
ಗೀರಲು ಶಬ್ಧ.

ಉಳಿದದ್ದು ಒಂದೇ
ಕೊನೆಗೊಮ್ಮೆ
ಹುಟ್ಟಿ ಬಾ ಗಾಂಧೀ,
ಮತ್ತೊಮ್ಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್ಮಸಂಸ್ಥಾಪನಾರ್ಥಾಯ
Next post ಭಯೋತ್ಪಾದನೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys