Home / ಕವನ / ಕವಿತೆ / ಕಿಡಕಿಯಾಚೆ ಕಣ್ಣುಕೀಲಿಸಿ

ಕಿಡಕಿಯಾಚೆ ಕಣ್ಣುಕೀಲಿಸಿ

ನಡು ಸಮುದ್ರದ ನೆತ್ತಿಯ ಮೇಲೆ
ನಡು ಸೂರ್ಯನ ಉರಿಬಿಸಿಲ ಕೆಳಗೆ
ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ

ಕಿಡಕಿಯಾಚೆ ಕೆಳಗೆ ಇಣುಕಿದರೆ
ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ
ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು
ಅರಬ್ಬಿ ಸಾಗರದ ದೈತ್ಯ.
ಅಲ್ಲಲ್ಲಿ ತೊನೆದಾಡುವ ನೊರೆ ತೆರೆ
ಮತ್ತೆ ಮತ್ತೆ ಕಣ್ಣು ಕೋರೈಸಿ
ಸಮುದ್ರ ರಾಜನ ಅಪ್ಪುಗೆಯ ಹಿಡಿತ ಬಿಡಿಸಿ
ಮಿಂಚಿ ಮಾಯವಾಗುತ ಓಡುವ
ಬಿಂಕ ಬಿನ್ನಾಣದ ಹುಡುಗಿಯರು.

ಕಾಣಲು ಏಕಾಂಗಿ ಸಂಚಾರಿಯೆಂಬಂತೆ
ಹೊರಟ ಹಡಗದ ಹೊಟ್ಟೆ ಬಲ್ಲೆ
ಒಳಗೆ ನೂರಾರು ಜೀವಿಗಳ ಜಗತ್ತು
ನೋಡುತಿರಬೇಕವರು
ನನ್ನಂತೆಯೇ ಕಿಡಿಕಿಯಾಚೆ
ಕೈ ಬೀಸುವೆವು ಸಹಪಯಣಿಗರು
ಸುಖದಿ ದಡ ಸೇರಲು

ಸಮುದ್ರ ರಾಜನ ರಾಜ ಸೂರ್ಯ ಎನ್ನಲೇಬೇಕಿಲ್ಲ
ಅವನ ಗತ್ತು ಗಮ್ಮತ್ತು ಧಿಮಾಕುಗಳಿಗೆ
ಕಾಲನ ಚಕ್ರದ ಹಿಡಿತ
ಅವನಿಗಲ್ಲದೆ ಇನ್ನಾರಿಗೆ
ಅಜ್ಜ ಮುತ್ತಜ್ಜರ ನೂರಾರು ತಲೆಮಾರು ನೋಡಿದಾತ
ಅವರ ಸಾಕ್ಷಿಗೆ ನೀನೆನ್ನುತ್ತಾನೆ
ನಮಸ್ಕರಿಸುವುದಷ್ಟೇ ನನ್ನ ಕೆಲಸ
ಸಾಕ್ಷಾತ್ ದೇವರು

ಮೇಲೆ ಸೂರ್ಯ ಕೆಳಗೆ ಸಮುದ್ರ
ನಡುವೆ ನನ್ನ ಪಯಣ
ಎಲ್ಲವೂ ನಿಂತಂತೆಯೇ
ಒಂದಕ್ಕೊಂದು ಮಾತುಕತೆಯಲ್ಲಿ ತೊಡಗಿದಂತೆ
ಹೀಗೆ….. ಕಣ್ಣಕೀಲಿಸಿ ಸಡಗರಿಸುವಾಪರಿ
ನಿಧಾನಕೆ ಹಡಗು ಸರಿದು
ಸೂರ್ಯ ಇಳಿದು…..
ವಿಮಾನ ವೇಗದ ಮೋಡಿಗೆ
ಬೆಪ್ಪು ಬೆರಗಾಗುವ ರೀತಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...