Home / ಕವನ / ಕವಿತೆ / ಕಿಡಕಿಯಾಚೆ ಕಣ್ಣುಕೀಲಿಸಿ

ಕಿಡಕಿಯಾಚೆ ಕಣ್ಣುಕೀಲಿಸಿ

ನಡು ಸಮುದ್ರದ ನೆತ್ತಿಯ ಮೇಲೆ
ನಡು ಸೂರ್ಯನ ಉರಿಬಿಸಿಲ ಕೆಳಗೆ
ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ

ಕಿಡಕಿಯಾಚೆ ಕೆಳಗೆ ಇಣುಕಿದರೆ
ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ
ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು
ಅರಬ್ಬಿ ಸಾಗರದ ದೈತ್ಯ.
ಅಲ್ಲಲ್ಲಿ ತೊನೆದಾಡುವ ನೊರೆ ತೆರೆ
ಮತ್ತೆ ಮತ್ತೆ ಕಣ್ಣು ಕೋರೈಸಿ
ಸಮುದ್ರ ರಾಜನ ಅಪ್ಪುಗೆಯ ಹಿಡಿತ ಬಿಡಿಸಿ
ಮಿಂಚಿ ಮಾಯವಾಗುತ ಓಡುವ
ಬಿಂಕ ಬಿನ್ನಾಣದ ಹುಡುಗಿಯರು.

ಕಾಣಲು ಏಕಾಂಗಿ ಸಂಚಾರಿಯೆಂಬಂತೆ
ಹೊರಟ ಹಡಗದ ಹೊಟ್ಟೆ ಬಲ್ಲೆ
ಒಳಗೆ ನೂರಾರು ಜೀವಿಗಳ ಜಗತ್ತು
ನೋಡುತಿರಬೇಕವರು
ನನ್ನಂತೆಯೇ ಕಿಡಿಕಿಯಾಚೆ
ಕೈ ಬೀಸುವೆವು ಸಹಪಯಣಿಗರು
ಸುಖದಿ ದಡ ಸೇರಲು

ಸಮುದ್ರ ರಾಜನ ರಾಜ ಸೂರ್ಯ ಎನ್ನಲೇಬೇಕಿಲ್ಲ
ಅವನ ಗತ್ತು ಗಮ್ಮತ್ತು ಧಿಮಾಕುಗಳಿಗೆ
ಕಾಲನ ಚಕ್ರದ ಹಿಡಿತ
ಅವನಿಗಲ್ಲದೆ ಇನ್ನಾರಿಗೆ
ಅಜ್ಜ ಮುತ್ತಜ್ಜರ ನೂರಾರು ತಲೆಮಾರು ನೋಡಿದಾತ
ಅವರ ಸಾಕ್ಷಿಗೆ ನೀನೆನ್ನುತ್ತಾನೆ
ನಮಸ್ಕರಿಸುವುದಷ್ಟೇ ನನ್ನ ಕೆಲಸ
ಸಾಕ್ಷಾತ್ ದೇವರು

ಮೇಲೆ ಸೂರ್ಯ ಕೆಳಗೆ ಸಮುದ್ರ
ನಡುವೆ ನನ್ನ ಪಯಣ
ಎಲ್ಲವೂ ನಿಂತಂತೆಯೇ
ಒಂದಕ್ಕೊಂದು ಮಾತುಕತೆಯಲ್ಲಿ ತೊಡಗಿದಂತೆ
ಹೀಗೆ….. ಕಣ್ಣಕೀಲಿಸಿ ಸಡಗರಿಸುವಾಪರಿ
ನಿಧಾನಕೆ ಹಡಗು ಸರಿದು
ಸೂರ್ಯ ಇಳಿದು…..
ವಿಮಾನ ವೇಗದ ಮೋಡಿಗೆ
ಬೆಪ್ಪು ಬೆರಗಾಗುವ ರೀತಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...