ಕಾಮತರ ಹೋಟೆಲು

ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ
ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ!
ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ
ಬೆಳೆದೂ ಬೆಳೆಯದಂತಿದೆ

ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ
ನನ್ನ ನಂಬಿಕೆಯನ್ನು ಹೆಚ್ಚಿಸಿದೆ
ಎಲ್ಲಾ ಕಳೆದು ಹೋಯಿತು ಎಂದಾಗ
ಇಲ್ಲ ಇನ್ನೂ ಇಲ್ಲ ಎನ್ನುವಂತೆ

ಬಾಣಲೆಯಲ್ಲಿ ಪೂರಿಗಳು ಕುಣಿದಾಡುತ್ತವೆ
ಭಜಿಗಳು ಕರಿಯುತ್ತವೆ–ಮುಳುಕಗಳು
ಮುಳುಗಿ ಏಳುತ್ತವೆ! ಅವು
ನಮ್ಮೆದುರು ಬರುವುದನ್ನೆ ಕಾಯುತ್ತೇವೆ

ವೇಣು, ಗಂಗಾಧರ ಹಾಗೂ ತಿಂಡಿಪೋತ ಶಂಕರ!
ಗಂಗಾಧರನ ಬಳಿ ನಿನ್ನೆಯಿಂದಲೂ
ಅತ ರಚಿಸತೊಡಗಿದ ಕವಿತೆ-ಅದರ ಅಕ್ಷರಗಳು ಸಹ
ಹಸಿವಿನಿಂದ ಎದ್ದು ಕುಳಿತಂತಿವೆ!

ನನ್ನ ಜೇಬಿನಲ್ಲೊಂದು ಹತ್ತರ ನೋಟು-ಮೊದಲ
ಪದ್ಯಕ್ಕೆ ಬಂದ ದುಡ್ಡು ! ಕಾಮತರ
ಗಲ್ಲಾ ಪೆಟ್ಟಿಗೆ ಯಾವಾಗ ಸೇರುವೆನೋ
ಎಂದು ಕಾತರದಿಂದಿದೆ!

ಕಾಮತರು ಮಾತ್ರ ಇದೆಲ್ಲದರ ಮಧ್ಯೆ
ಬುದ್ಧನಂತಿದ್ದಾರೆ ಎತ್ತರದ ಪೀಠದ ಮೇಲೆ
ನಾವು ತಿಳಿದಾಗಿನಿಂದಲೂ
ಹೀಗೆಯೇ ಇದ್ದಾರೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸೂಯೆ
Next post ಒಂದೇ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys