ಕಾಮತರ ಹೋಟೆಲು

ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ
ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ!
ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ
ಬೆಳೆದೂ ಬೆಳೆಯದಂತಿದೆ

ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ
ನನ್ನ ನಂಬಿಕೆಯನ್ನು ಹೆಚ್ಚಿಸಿದೆ
ಎಲ್ಲಾ ಕಳೆದು ಹೋಯಿತು ಎಂದಾಗ
ಇಲ್ಲ ಇನ್ನೂ ಇಲ್ಲ ಎನ್ನುವಂತೆ

ಬಾಣಲೆಯಲ್ಲಿ ಪೂರಿಗಳು ಕುಣಿದಾಡುತ್ತವೆ
ಭಜಿಗಳು ಕರಿಯುತ್ತವೆ–ಮುಳುಕಗಳು
ಮುಳುಗಿ ಏಳುತ್ತವೆ! ಅವು
ನಮ್ಮೆದುರು ಬರುವುದನ್ನೆ ಕಾಯುತ್ತೇವೆ

ವೇಣು, ಗಂಗಾಧರ ಹಾಗೂ ತಿಂಡಿಪೋತ ಶಂಕರ!
ಗಂಗಾಧರನ ಬಳಿ ನಿನ್ನೆಯಿಂದಲೂ
ಅತ ರಚಿಸತೊಡಗಿದ ಕವಿತೆ-ಅದರ ಅಕ್ಷರಗಳು ಸಹ
ಹಸಿವಿನಿಂದ ಎದ್ದು ಕುಳಿತಂತಿವೆ!

ನನ್ನ ಜೇಬಿನಲ್ಲೊಂದು ಹತ್ತರ ನೋಟು-ಮೊದಲ
ಪದ್ಯಕ್ಕೆ ಬಂದ ದುಡ್ಡು ! ಕಾಮತರ
ಗಲ್ಲಾ ಪೆಟ್ಟಿಗೆ ಯಾವಾಗ ಸೇರುವೆನೋ
ಎಂದು ಕಾತರದಿಂದಿದೆ!

ಕಾಮತರು ಮಾತ್ರ ಇದೆಲ್ಲದರ ಮಧ್ಯೆ
ಬುದ್ಧನಂತಿದ್ದಾರೆ ಎತ್ತರದ ಪೀಠದ ಮೇಲೆ
ನಾವು ತಿಳಿದಾಗಿನಿಂದಲೂ
ಹೀಗೆಯೇ ಇದ್ದಾರೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸೂಯೆ
Next post ಒಂದೇ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…