Home / ಕವನ / ಕವಿತೆ / ತಿರುವನಂತಪುರ ೭೧

ತಿರುವನಂತಪುರ ೭೧

ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ
ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ
ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ
ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ
ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು
ಇಳಿದುಕೊಳ್ಳುವುದಕ್ಕೆ ರೂಮು ಆನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ

ನಡೆದು ಆಶ್ರಯಕ್ಕಾಗಿ ತಿರುಗಿ
ಜನಸ್ತೋಮ ರಣಹೋಮ ಘೋಷ ತಿರುಗಿ
ಡಬಲ್ ಡೆಕ್ಕರ್ ಘೋಷ ಟರ್ಮಿನಸ್ ಘೋಷ
ಹಿಪ್ಪಿಯಿಪ್ಪಿ ಹರೇಕೃಷ್ಣ ಸೈರನ್ ಘೋಷ
ಸತ್ಯಾಗ್ರಹ ಸಮರ ಘೋಷ ತಿರುವನಂತಪುರ
ಶ್ರೀ ಪದ್ಮನಾಭ ಮಂತ್ರಘೋಷ
ಮತ್ತೆ ನನ್ನೀ ವೇಷ ಅಸಹಾಯಕ ರೋಷ
ದಾಮರಿನಂತೆ ಕುದಿದು ರೋಷ
ಚಪ್ಪಡಿಗಳೆಡೆಯಿಂದ ಬೊಕ್ಕೆ ಏಳುತ್ತಾ ಚಪ್ಪಡಿಗಳೆಡೆಯಿಂದ
ಇಂಗಿ ಹೋಗುತ್ತಾ ಹೋದೆ ತಿರುಗಿ

ವರ್ಷಗಳ ಹಿಂದೆ ಇದೇ ಬೀದಿಗಳಲ್ಲಿ ನಡೆದಿದ್ದೆ ಹೀಗೆ
ಇದೇ ಬೀದಿಗಳಲ್ಲಿ ಪಾರ್ಕುಗಳಲ್ಲಿ ಬೀದಿಗಳಲ್ಲಿ ಹೋಟೆಲುಗಳಲ್ಲಿ
ಬೀದಿಗಳಲ್ಲಿ ಅಂಗಡಿಗಳಲ್ಲಿ ಬೀದಿಗಳಲ್ಲಿ ಬೀದಿಗಳಲ್ಲಿ
ನಡೆದಿದ್ದೆ ನಡೆದಿದ್ದರೂ ವ್ಯವಹರಿಸಿದ್ದರೂ
ಪರಿಚಯ ಅನಿಸಿದ್ದರೂ ಈ
ಮೂಲ ಕಣಗಳು ಆಗಂತುಕವಾಗಿ ಬಿದ್ದಿದ್ದಾವೆ ಈಗ ಕಣ
ಕಣಗಳೂ ಎಂದಾಗ ಈ ತಿರುವ
ನಂತಪುರ ನಂತಪುರ ನಂತಪುರನಗರ ನಂತಪುರ ನಗರ
ದೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...