ತಿರುವನಂತಪುರ ೭೧

ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ
ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ
ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ
ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ
ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು
ಇಳಿದುಕೊಳ್ಳುವುದಕ್ಕೆ ರೂಮು ಆನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ

ನಡೆದು ಆಶ್ರಯಕ್ಕಾಗಿ ತಿರುಗಿ
ಜನಸ್ತೋಮ ರಣಹೋಮ ಘೋಷ ತಿರುಗಿ
ಡಬಲ್ ಡೆಕ್ಕರ್ ಘೋಷ ಟರ್ಮಿನಸ್ ಘೋಷ
ಹಿಪ್ಪಿಯಿಪ್ಪಿ ಹರೇಕೃಷ್ಣ ಸೈರನ್ ಘೋಷ
ಸತ್ಯಾಗ್ರಹ ಸಮರ ಘೋಷ ತಿರುವನಂತಪುರ
ಶ್ರೀ ಪದ್ಮನಾಭ ಮಂತ್ರಘೋಷ
ಮತ್ತೆ ನನ್ನೀ ವೇಷ ಅಸಹಾಯಕ ರೋಷ
ದಾಮರಿನಂತೆ ಕುದಿದು ರೋಷ
ಚಪ್ಪಡಿಗಳೆಡೆಯಿಂದ ಬೊಕ್ಕೆ ಏಳುತ್ತಾ ಚಪ್ಪಡಿಗಳೆಡೆಯಿಂದ
ಇಂಗಿ ಹೋಗುತ್ತಾ ಹೋದೆ ತಿರುಗಿ

ವರ್ಷಗಳ ಹಿಂದೆ ಇದೇ ಬೀದಿಗಳಲ್ಲಿ ನಡೆದಿದ್ದೆ ಹೀಗೆ
ಇದೇ ಬೀದಿಗಳಲ್ಲಿ ಪಾರ್ಕುಗಳಲ್ಲಿ ಬೀದಿಗಳಲ್ಲಿ ಹೋಟೆಲುಗಳಲ್ಲಿ
ಬೀದಿಗಳಲ್ಲಿ ಅಂಗಡಿಗಳಲ್ಲಿ ಬೀದಿಗಳಲ್ಲಿ ಬೀದಿಗಳಲ್ಲಿ
ನಡೆದಿದ್ದೆ ನಡೆದಿದ್ದರೂ ವ್ಯವಹರಿಸಿದ್ದರೂ
ಪರಿಚಯ ಅನಿಸಿದ್ದರೂ ಈ
ಮೂಲ ಕಣಗಳು ಆಗಂತುಕವಾಗಿ ಬಿದ್ದಿದ್ದಾವೆ ಈಗ ಕಣ
ಕಣಗಳೂ ಎಂದಾಗ ಈ ತಿರುವ
ನಂತಪುರ ನಂತಪುರ ನಂತಪುರನಗರ ನಂತಪುರ ನಗರ
ದೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಗಿದ ಅಧ್ಯಾಯ
Next post ಓ ಗೆಳತಿಯೇ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…