ತಿರುವನಂತಪುರ ೭೧

ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ
ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ
ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ
ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ
ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು
ಇಳಿದುಕೊಳ್ಳುವುದಕ್ಕೆ ರೂಮು ಆನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ

ನಡೆದು ಆಶ್ರಯಕ್ಕಾಗಿ ತಿರುಗಿ
ಜನಸ್ತೋಮ ರಣಹೋಮ ಘೋಷ ತಿರುಗಿ
ಡಬಲ್ ಡೆಕ್ಕರ್ ಘೋಷ ಟರ್ಮಿನಸ್ ಘೋಷ
ಹಿಪ್ಪಿಯಿಪ್ಪಿ ಹರೇಕೃಷ್ಣ ಸೈರನ್ ಘೋಷ
ಸತ್ಯಾಗ್ರಹ ಸಮರ ಘೋಷ ತಿರುವನಂತಪುರ
ಶ್ರೀ ಪದ್ಮನಾಭ ಮಂತ್ರಘೋಷ
ಮತ್ತೆ ನನ್ನೀ ವೇಷ ಅಸಹಾಯಕ ರೋಷ
ದಾಮರಿನಂತೆ ಕುದಿದು ರೋಷ
ಚಪ್ಪಡಿಗಳೆಡೆಯಿಂದ ಬೊಕ್ಕೆ ಏಳುತ್ತಾ ಚಪ್ಪಡಿಗಳೆಡೆಯಿಂದ
ಇಂಗಿ ಹೋಗುತ್ತಾ ಹೋದೆ ತಿರುಗಿ

ವರ್ಷಗಳ ಹಿಂದೆ ಇದೇ ಬೀದಿಗಳಲ್ಲಿ ನಡೆದಿದ್ದೆ ಹೀಗೆ
ಇದೇ ಬೀದಿಗಳಲ್ಲಿ ಪಾರ್ಕುಗಳಲ್ಲಿ ಬೀದಿಗಳಲ್ಲಿ ಹೋಟೆಲುಗಳಲ್ಲಿ
ಬೀದಿಗಳಲ್ಲಿ ಅಂಗಡಿಗಳಲ್ಲಿ ಬೀದಿಗಳಲ್ಲಿ ಬೀದಿಗಳಲ್ಲಿ
ನಡೆದಿದ್ದೆ ನಡೆದಿದ್ದರೂ ವ್ಯವಹರಿಸಿದ್ದರೂ
ಪರಿಚಯ ಅನಿಸಿದ್ದರೂ ಈ
ಮೂಲ ಕಣಗಳು ಆಗಂತುಕವಾಗಿ ಬಿದ್ದಿದ್ದಾವೆ ಈಗ ಕಣ
ಕಣಗಳೂ ಎಂದಾಗ ಈ ತಿರುವ
ನಂತಪುರ ನಂತಪುರ ನಂತಪುರನಗರ ನಂತಪುರ ನಗರ
ದೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಗಿದ ಅಧ್ಯಾಯ
Next post ಓ ಗೆಳತಿಯೇ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys