ಮುಗಿದ ಅಧ್ಯಾಯ

ನನ್ನ ಎದೆಯ ಮೀಟಿಮೀಟಿ
ಏನ ಹುಡುಕತಲಿರುವೆ
ಅಲ್ಲಿಲ್ಲ ಯಾವ ಲೋಹದದಿರು
ಹೊನ್ನ ಹೊಂಗನಸು, ಬೆಳ್ಳಿನವಿರು
ಪಚ್ಚೆ ಹವಳದ ಭಾವಗಳು
ಬರಿದು ಬರಿದು, ಈಗಿನ್ನೇನು
ಅಲ್ಲಿಹುದು

ನೀನಿದ್ದೆ ಅಂದು ಅಲ್ಲಿ
ಬರಿ ಛಾಯೆ ಇಂದು ಇಲ್ಲಿ
ಈ ಮನವ ಬಗೆದು ಬಗೆದು
ನೆತ್ತರವ ಹರಿಸಿ
ಏನ ಪಡೆದುಕೊಂಡೆನೇ
ನೀ ಮೊಗೆದಷ್ಟು ಉಕ್ಕಲು
ನಾನೇನು ಶರಧಿಯೇ

ನೀನೇ ಅಳಿಸಿದ ನಿನ್ನ ಚಿತ್ರವ
ಮತ್ತೇ ಬರೆಯುವ ಹುಂಬತನವೇ
ಈ ಹೃದಯವೀಗ
ಬಿಳಿ ಹಾಳೆಯಲ್ಲ

ಯಾಕಿನ್ನು ವ್ಯರ್ಥ ಪ್ರತಾಪ
ಸುಮ್ಮನಿರು ಸಾಕಿನ್ನು
ಗೊಸುಂಬೆಯಂತಹ ಮನಕೆ
ಬೆರಗಾಗಲಾರೆ

ಮುಗಿದ ಅಧ್ಯಾಯವ
ತೆರೆಯಲಾರೆ
ತೊಟ್ಟ ಬಾಣತೊಡದ
ಅವನಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಹೇಳಿದ್ದು
Next post ತಿರುವನಂತಪುರ ೭೧

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys