ಈಡಿಪಸ್‌ಗೊಂದು ಪ್ರಶ್ನೆ

ಓ ಈಡಿಪಸ್ ನಿನ್ನೆದೆಂತಹ ಬದುಕು
ಅಮಾನುಷ ವಿಧಿಬರಹಕೆ ಈಡಾಗಿ
ಅರಿಯದೆ ಹಿಂದೆಂದೂ ನಡೆಯದಿದ್ದ
ಮುಂದೆಂದೂ ನಡೆಯದಿರುವ
ಘನಘೋರ ದುರಂತಕ್ಕೆ ಬಲಿಯಾದೆ

ನವಮಾಸಗಳು ತನ್ನೊಡಲಲಿ
ನಿನ್ನನಿರಿಸಿಕೊಂಡ ಹೆತ್ತವಳಿಗೆ
ಮಾಲೆ ಹಾಕಿ ಅವಳೊಡೆಯನಾದೆ
ಅವಳ ನಗ್ನತೆಯಲಿ ಸುಖವುಂಡು
ನೀ ಸೃಷ್ಟಿಯಾದಲ್ಲಿಯೇ ನಿನ್ನ ಭ್ರೂಣವನ್ನೂ
ಸೃಷ್ಟಿಸಿ ಹೇಯದಾಖಲೆಯ ಪಿತನಾದೆ

ದುರ್ದೈವ ಈಡಿಪಸ್ ಗೊತ್ತಿತ್ತೇ
ನಿನ್ನೆದೆಂತಹ ಹೀನಬದುಕೆಂದು
ಯುಗ ಯುಗ ಕಳೆದರೂ
ಸೂರ್ಯ ಚಂದ್ರರಿರುವ ತನಕವೂ
ನಿನ್ಹೆಸರು ಅಳಿಯದೆಂದು
ಹೆತ್ತವಳನ್ನೇ ಭೋಗಿಸಿದ ಕೀರ್ತಿ ನಿನ್ನದೆಂದು

ಓ ಈಡಿಪಸ್ ಘನ ಘೋರ ಸತ್ಯಕೆ
ಬೆಚ್ಚಿ, ಜನನಿಯ ನಗ್ನತೆ ಕಂಡ
ಈ ಕಣ್ಣುಗಳಿರಬಾರದೆಂದು ಕುರುಡಾದೆ
ಆದರೇನು ಮರೆಯಾದಿತೇ ಆ ದೃಶ್ಯ
ನಿನ್ನ ಅಂತರಂಗದ ಅಂತರಾಳದಲಿ
ಅಮ್ಮ ಎಂದವಳ ಕರೆಯಬಲ್ಲೆಯ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಜಿ ಮತ್ತು ಅವಳು
Next post ಗ್ರಹಣ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys