ಈಡಿಪಸ್‌ಗೊಂದು ಪ್ರಶ್ನೆ

ಓ ಈಡಿಪಸ್ ನಿನ್ನೆದೆಂತಹ ಬದುಕು
ಅಮಾನುಷ ವಿಧಿಬರಹಕೆ ಈಡಾಗಿ
ಅರಿಯದೆ ಹಿಂದೆಂದೂ ನಡೆಯದಿದ್ದ
ಮುಂದೆಂದೂ ನಡೆಯದಿರುವ
ಘನಘೋರ ದುರಂತಕ್ಕೆ ಬಲಿಯಾದೆ

ನವಮಾಸಗಳು ತನ್ನೊಡಲಲಿ
ನಿನ್ನನಿರಿಸಿಕೊಂಡ ಹೆತ್ತವಳಿಗೆ
ಮಾಲೆ ಹಾಕಿ ಅವಳೊಡೆಯನಾದೆ
ಅವಳ ನಗ್ನತೆಯಲಿ ಸುಖವುಂಡು
ನೀ ಸೃಷ್ಟಿಯಾದಲ್ಲಿಯೇ ನಿನ್ನ ಭ್ರೂಣವನ್ನೂ
ಸೃಷ್ಟಿಸಿ ಹೇಯದಾಖಲೆಯ ಪಿತನಾದೆ

ದುರ್ದೈವ ಈಡಿಪಸ್ ಗೊತ್ತಿತ್ತೇ
ನಿನ್ನೆದೆಂತಹ ಹೀನಬದುಕೆಂದು
ಯುಗ ಯುಗ ಕಳೆದರೂ
ಸೂರ್ಯ ಚಂದ್ರರಿರುವ ತನಕವೂ
ನಿನ್ಹೆಸರು ಅಳಿಯದೆಂದು
ಹೆತ್ತವಳನ್ನೇ ಭೋಗಿಸಿದ ಕೀರ್ತಿ ನಿನ್ನದೆಂದು

ಓ ಈಡಿಪಸ್ ಘನ ಘೋರ ಸತ್ಯಕೆ
ಬೆಚ್ಚಿ, ಜನನಿಯ ನಗ್ನತೆ ಕಂಡ
ಈ ಕಣ್ಣುಗಳಿರಬಾರದೆಂದು ಕುರುಡಾದೆ
ಆದರೇನು ಮರೆಯಾದಿತೇ ಆ ದೃಶ್ಯ
ನಿನ್ನ ಅಂತರಂಗದ ಅಂತರಾಳದಲಿ
ಅಮ್ಮ ಎಂದವಳ ಕರೆಯಬಲ್ಲೆಯ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಜಿ ಮತ್ತು ಅವಳು
Next post ಗ್ರಹಣ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…