Home / ಕವನ / ಕವಿತೆ / ಗ್ರಹಣ

ಗ್ರಹಣ

ಅಂಗಳಕ್ಕಿಳಿದು ತಮ್ಮಟೆ ಬಾರಿಸಿ
ಶಂಖ ಊದಿ
ದೇವರ ಬಲ ಹೆಚ್ಚಲಿ
ಹಾವಿನ ಬಲ ಕುಂದಲಿ ಹರಿಯೋ ಹರಿ
ಎನ್ನುತ್ತಾ ಸುತ್ತಿದರು
ಮುಳುಗಿ ಮಿಂದು ಉಂಡು ಮಲಗಿದರು
ಅಂದಿಗೆ ಧನ್ಯತೆ

ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ
ಹಿರೋಶಿಮಾ ಅಣಬೆಗಳ ಪಾಷಾಣ ಮೋಡಗಳ
ಕೆಳಗೆ ಮಂದಿ ಮೇಲಕ್ಕೆ ನೋಡಿ
ಮಳೆ ಬೆಳೆಯ ಭವಿಷ್ಯ ಗುಣಿಸಿದರು
ಚಂದ್ರ ವರ್ಷಾಧಿಪತಿ ಶನಿ ಮಂತ್ರಾಧಿಪತಿ ಇತ್ಯಾದಿ
ಮತ್ತೆ ಈ ಸಂಕ್ರಾಂತಿ ರಕ್ತವಸ್ತ್ರಾಲಂಕೃತೆ ಶ್ವೇತಾಶ್ವವೇರಿ
ಕಂಚಿನ ಪಾತ್ರೆಯಲ್ಲಿ ಪಾಯಸ ಮೆಲ್ಲುತ್ತ
ದಕ್ಷಿಣಕ್ಕೆ ಹೋಗುತ್ತಾಳೆ.
ಬೆಲೆಗಳು ಏರುವುದುಂಟು
ರೋಗ ರುಜಿನಗಳ ಪೀಡೆಯುಂಟು
ಸರ್ವನಾಶಕ್ಕೆ ಎಡೆಯುಂಟು
ಇವರಿಗೆ ಪರಿಶಾಂತಿ ಮಂತ್ರಗಳಲ್ಲಿ ವಿಶ್ವಾಸವುಂಟು

ಕಾಲೇಜಿನ ಗಂಟೆಯ ಸದ್ದು ಅನುರಣಿಸುತ್ತದೆ
ಮನಸ್ಸಿನ ಅಗಾಧ ಜಗತ್ತಿನಲ್ಲಿ ನೋವು ಚಡಪಡಿಸುತ್ತಿದೆ
ದಿನನಿತ್ಯ ವ್ಯಾಪಾರ ವ್ಯವಹಾರ ಪ್ರವರ್ತನೆ ಆವರ್ತನೆ
ಪಾಠ ಹೇಳುವುದು
ಶಬ್ದಕ್ಕೆ ಶಬ್ದ ಜೋಡಿಸುವುದು
ಉದ್ದೇಶರಹಿತ ಮಾತು ಬೆಳೆಸುವುದು
ಹತ್ತು ಜನರಲ್ಲಿ ಬೆರೆತು ನಗುವುದು
ಗುಂಪಿನಿಂದ ತಲೆಮರೆಸಿ ಅಳುವುದು
ಕ್ಷಣಕ್ಷಣಕ್ಕೂ ಸಾಯುವುದು

ಒಂದೊಂದೇ ನಂಬಿಕೆಗಳು ಕಳೆದು
ಬಂಧಗಳು ತುಂಡಿರಿಸಿಕೊಂಡು ತಿರಸ್ಕರಿಸಿ
ಲಿಮೊಸಿನುಗಳಂತೆ ಹಾದು ಹೋದಾಗ-
ಹೇಳಿದ ಮಾತು, ಕೊಟ್ಟ ಭಾಷೆ, ಬರೆದ ಕವಿತೆ, ಚಿಂತಿಸಿದ ಮನಸ್ಸು,
ಹಿಡಿದ ಕೈ ಬಿಟ್ಟಮೇಲೆ
ಸಾವು ಬದುಕಿನ ನಡುವೆ ಯಾವುದನ್ನೂ ಆರಿಸಲಾರದೆ
ಉಳಿದಿರುವುದು ಇದು ಘೋರ

ಈ ಸಹಿಸಲಾಗದ ಯಾತನೆ ಯಾರಿಗೆ ತಾನೆ ತಲುಪುತ್ತದೆ?
ತಲುಪಿದರೂ ಅದರಿಂದ ತಾನೆ ಏನು?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ