ಗ್ರಹಣ

ಅಂಗಳಕ್ಕಿಳಿದು ತಮ್ಮಟೆ ಬಾರಿಸಿ
ಶಂಖ ಊದಿ
ದೇವರ ಬಲ ಹೆಚ್ಚಲಿ
ಹಾವಿನ ಬಲ ಕುಂದಲಿ ಹರಿಯೋ ಹರಿ
ಎನ್ನುತ್ತಾ ಸುತ್ತಿದರು
ಮುಳುಗಿ ಮಿಂದು ಉಂಡು ಮಲಗಿದರು
ಅಂದಿಗೆ ಧನ್ಯತೆ

ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ
ಹಿರೋಶಿಮಾ ಅಣಬೆಗಳ ಪಾಷಾಣ ಮೋಡಗಳ
ಕೆಳಗೆ ಮಂದಿ ಮೇಲಕ್ಕೆ ನೋಡಿ
ಮಳೆ ಬೆಳೆಯ ಭವಿಷ್ಯ ಗುಣಿಸಿದರು
ಚಂದ್ರ ವರ್ಷಾಧಿಪತಿ ಶನಿ ಮಂತ್ರಾಧಿಪತಿ ಇತ್ಯಾದಿ
ಮತ್ತೆ ಈ ಸಂಕ್ರಾಂತಿ ರಕ್ತವಸ್ತ್ರಾಲಂಕೃತೆ ಶ್ವೇತಾಶ್ವವೇರಿ
ಕಂಚಿನ ಪಾತ್ರೆಯಲ್ಲಿ ಪಾಯಸ ಮೆಲ್ಲುತ್ತ
ದಕ್ಷಿಣಕ್ಕೆ ಹೋಗುತ್ತಾಳೆ.
ಬೆಲೆಗಳು ಏರುವುದುಂಟು
ರೋಗ ರುಜಿನಗಳ ಪೀಡೆಯುಂಟು
ಸರ್ವನಾಶಕ್ಕೆ ಎಡೆಯುಂಟು
ಇವರಿಗೆ ಪರಿಶಾಂತಿ ಮಂತ್ರಗಳಲ್ಲಿ ವಿಶ್ವಾಸವುಂಟು

ಕಾಲೇಜಿನ ಗಂಟೆಯ ಸದ್ದು ಅನುರಣಿಸುತ್ತದೆ
ಮನಸ್ಸಿನ ಅಗಾಧ ಜಗತ್ತಿನಲ್ಲಿ ನೋವು ಚಡಪಡಿಸುತ್ತಿದೆ
ದಿನನಿತ್ಯ ವ್ಯಾಪಾರ ವ್ಯವಹಾರ ಪ್ರವರ್ತನೆ ಆವರ್ತನೆ
ಪಾಠ ಹೇಳುವುದು
ಶಬ್ದಕ್ಕೆ ಶಬ್ದ ಜೋಡಿಸುವುದು
ಉದ್ದೇಶರಹಿತ ಮಾತು ಬೆಳೆಸುವುದು
ಹತ್ತು ಜನರಲ್ಲಿ ಬೆರೆತು ನಗುವುದು
ಗುಂಪಿನಿಂದ ತಲೆಮರೆಸಿ ಅಳುವುದು
ಕ್ಷಣಕ್ಷಣಕ್ಕೂ ಸಾಯುವುದು

ಒಂದೊಂದೇ ನಂಬಿಕೆಗಳು ಕಳೆದು
ಬಂಧಗಳು ತುಂಡಿರಿಸಿಕೊಂಡು ತಿರಸ್ಕರಿಸಿ
ಲಿಮೊಸಿನುಗಳಂತೆ ಹಾದು ಹೋದಾಗ-
ಹೇಳಿದ ಮಾತು, ಕೊಟ್ಟ ಭಾಷೆ, ಬರೆದ ಕವಿತೆ, ಚಿಂತಿಸಿದ ಮನಸ್ಸು,
ಹಿಡಿದ ಕೈ ಬಿಟ್ಟಮೇಲೆ
ಸಾವು ಬದುಕಿನ ನಡುವೆ ಯಾವುದನ್ನೂ ಆರಿಸಲಾರದೆ
ಉಳಿದಿರುವುದು ಇದು ಘೋರ

ಈ ಸಹಿಸಲಾಗದ ಯಾತನೆ ಯಾರಿಗೆ ತಾನೆ ತಲುಪುತ್ತದೆ?
ತಲುಪಿದರೂ ಅದರಿಂದ ತಾನೆ ಏನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈಡಿಪಸ್‌ಗೊಂದು ಪ್ರಶ್ನೆ
Next post ಮಂಗಳಾರುತಿ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…