ಬಣ್ಣಗೆಟ್ಟ ಇರುಳುಗಳ ನಡುನಡುವೆ
ಹೊರಳಿ ನರಳಿವೆ ವಿರಹದುರಿಯ
ದಳ್ಳುರಿ, ಎಲ್ಲಿ? ಎಲ್ಲಿ?
ಹೋದವೆಲ್ಲಿ ಮುಗಿಲ ಪಡೆ?
ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ
ಬಾಯಾರಿವೆ, ತೊನೆಯುವ ಬಯಕೆ
ಆಸೆಗಳ ಚೆಲ್ಲಾಟದಲಿ ಮೂಕಸಂಕಟ
ಯಾರಿಗೆ ಬೇಕಾಗಿತ್ತು ನೂರು ಹೆಣ್ಣುಗಳ
ನಡುವಿನ ರಾಣಿ ಪಟ್ಟ
ಅನುದಿನವೂ ನವತಾರುಣ್ಯವ
ಮೀಸಲು ಮುರಿವ ಮೃಷ್ಟಾನ್ನದ
ನಡುವೆ ಉಂಡೆಸೆದ ಬಾಳೆಲೆಯ
ನೆನಪೇ ಬರಿ ಕನಸು
ಅರಮನೆ ವಾಸ ಸೆರೆಯಾಳಿನಂತೆ
ಕಣ್ಕಟ್ಟು ಬಿಗಿದು ಬಯಲೊಳಗೆ
ಓಡುವಾಟ ಮುಗ್ಗರಿಕೆ
ಕಾಣದ ಹಾದಿ ಮುಳ್ಳಿನಬೇಲಿ
ಕಾಲ್ತೊಡಕು, ಬೊಗಸೆ ತುಂಬ ನೆತ್ತರು
ಸಿರ್ರನೆದ್ದು ಹಿಂಡುವ ಬಿರುಗಾಳಿ
ಸುಳಿಸುತ್ತಿ ಹಿಂಡುವ
ಕಬಂದ ಬಾಹುಗಳ ಸೆಣಸಾಟದಲಿ
ಬಳಲಿಕೆ, ಹೊರಬರಲಾರದ ಬಿಕ್ಕು
ದಿಕ್ಕು ತಪ್ಪಿದ ಮೋಡಗಳ ಹಿಂಡು
ತಂಪೆರೆಯಲಿಲ್ಲ ಕೊನೆಗೂ
ಬೇಗುದಿ ತಾಪ ನಿಟ್ಟುಸಿರು
ಲೆಕ್ಕವಿಡದ ಬಿಸಿಯುಸಿರು
ರಾಚಿದೆ ಗಪ್ಪನೆ ಕತ್ತಲೆ ಬೆಂಕಿಗೆ
ಸುಟ್ಟು ಕರಕಾದ ಭಾವಗಳ
ಬೂದಿ ಬಂಗಾರದ ಕರಂಡಿಕೆಯೊಳಗೆ
*****
Related Post
ಸಣ್ಣ ಕತೆ
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…