Home / ಕವನ / ಕವಿತೆ / ಪಾರ್ಟಿ ಕಳೆದ ಮೇಲೆ

ಪಾರ್ಟಿ ಕಳೆದ ಮೇಲೆ

ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ
ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು
ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ
ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು
ಟೇಬಲಿನ ಸುತ್ತ ಸೋಫಾದ ಸುತ್ತ ಪಿಯಾನೋದ ಸುತ್ತ
ವಿವಿಧ ಲಯಗಳಲ್ಲಿ ತಾಳಗಳಲ್ಲಿ ಮೇಳಗಳಲ್ಲಿ ಸುತ್ತಿದವರು
ಸುತ್ತಿ ಸುಳಿಸುಳಿಯಾಗಿ ಈ ಕೋಣೆಯೊಳಗೆ ಸುತ್ತ ಮುತ್ತ
ಸುತ್ತಿ ರಾತ್ರಿ ಬೆಳೆದಂತೆ ಆಕಳಿಕೆಯಿಂದ ತೂಕಡಿಸಿದವರು
ಎಲ್ಲರೂ ಎದ್ದು ಹೋದರೂ ಬೆಳಕು ಮಂಕಾದರೂ ಇಲ್ಲಿ
ನಾಲ್ಕು ಗೋಡೆಯೊಳಗೆ ಕೋಣೆ ಏಕಾಕಿಯಾದರೂ ಕೂಡ
ಇವರ ಈ ಹೋದವರ ಮಾತುಕತೆ ಮತ್ತೆ ಉದ್ಗಾರಗಳು
ಉದ್ದುದ್ದ ಚರ್ಚೆಯ ಟೊಳ್ಳುಗಳು ಇವರ ಹೆಂಡಂದಿರ ಒಜ್ಜೆಯ
ಒಯ್ಯಾರದ ಶಬ್ದಗಳು ಅವರ ಆಭರಣದ ಥಳಕುಗಳು
ಮೈ ಎಡೆಯ ಗಂಧಗಳು ಬೆಳೆದ ಕೊಬ್ಬಿನ ಬೇಸರಗಳು
ಇಲ್ಲಿ ಲಯವಾದ ಸ್ವರಗಳು ಕಪ್ಪು ಸಾಸರುಗಳು ತಲೆಕೂದಲುಗಳು
ಸಿಕ್ಕಿಕೊಂಡ ಹೂವಿನ ಚೂರುಗಳು ಮತ್ತು ಉಗಿದ ಮೂಳೆಯ ತುಂಡುಗಳು
ಹೋಮಿಸಿ ಉಳಿದ ಮಂತ್ರಗಳಂತೆ ಸಮಿತ್ತುಗಳಂತೆ ಹವಿಸ್ಸುಗಳಂತೆ
ಏನನ್ನೊ ಬಿಟ್ಟು ಹೋಗಿವೆ ಮಾತು ಕಳೆದ ಧ್ವನಿಗಳಿರಬಹುದು
ಸ್ವರೂಪ ಕಳೆದ ಆಕಾರಗಳಿರಬಹುದು ಅಸ್ತಿತ್ವ ಕಳೆದ ಭೂತಗಳಿರಬಹುದು
ಅಸ್ವಸ್ಥತೆಯಿಂದ ಹೊರಳುತ್ತಿವೆ ಖಾಲಿತನದಲ್ಲಿ ನರಳುತ್ತಿವೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...