Home / ಕವನ / ಕವಿತೆ / ಪಾರ್ಟಿ ಕಳೆದ ಮೇಲೆ

ಪಾರ್ಟಿ ಕಳೆದ ಮೇಲೆ

ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ
ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು
ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ
ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು
ಟೇಬಲಿನ ಸುತ್ತ ಸೋಫಾದ ಸುತ್ತ ಪಿಯಾನೋದ ಸುತ್ತ
ವಿವಿಧ ಲಯಗಳಲ್ಲಿ ತಾಳಗಳಲ್ಲಿ ಮೇಳಗಳಲ್ಲಿ ಸುತ್ತಿದವರು
ಸುತ್ತಿ ಸುಳಿಸುಳಿಯಾಗಿ ಈ ಕೋಣೆಯೊಳಗೆ ಸುತ್ತ ಮುತ್ತ
ಸುತ್ತಿ ರಾತ್ರಿ ಬೆಳೆದಂತೆ ಆಕಳಿಕೆಯಿಂದ ತೂಕಡಿಸಿದವರು
ಎಲ್ಲರೂ ಎದ್ದು ಹೋದರೂ ಬೆಳಕು ಮಂಕಾದರೂ ಇಲ್ಲಿ
ನಾಲ್ಕು ಗೋಡೆಯೊಳಗೆ ಕೋಣೆ ಏಕಾಕಿಯಾದರೂ ಕೂಡ
ಇವರ ಈ ಹೋದವರ ಮಾತುಕತೆ ಮತ್ತೆ ಉದ್ಗಾರಗಳು
ಉದ್ದುದ್ದ ಚರ್ಚೆಯ ಟೊಳ್ಳುಗಳು ಇವರ ಹೆಂಡಂದಿರ ಒಜ್ಜೆಯ
ಒಯ್ಯಾರದ ಶಬ್ದಗಳು ಅವರ ಆಭರಣದ ಥಳಕುಗಳು
ಮೈ ಎಡೆಯ ಗಂಧಗಳು ಬೆಳೆದ ಕೊಬ್ಬಿನ ಬೇಸರಗಳು
ಇಲ್ಲಿ ಲಯವಾದ ಸ್ವರಗಳು ಕಪ್ಪು ಸಾಸರುಗಳು ತಲೆಕೂದಲುಗಳು
ಸಿಕ್ಕಿಕೊಂಡ ಹೂವಿನ ಚೂರುಗಳು ಮತ್ತು ಉಗಿದ ಮೂಳೆಯ ತುಂಡುಗಳು
ಹೋಮಿಸಿ ಉಳಿದ ಮಂತ್ರಗಳಂತೆ ಸಮಿತ್ತುಗಳಂತೆ ಹವಿಸ್ಸುಗಳಂತೆ
ಏನನ್ನೊ ಬಿಟ್ಟು ಹೋಗಿವೆ ಮಾತು ಕಳೆದ ಧ್ವನಿಗಳಿರಬಹುದು
ಸ್ವರೂಪ ಕಳೆದ ಆಕಾರಗಳಿರಬಹುದು ಅಸ್ತಿತ್ವ ಕಳೆದ ಭೂತಗಳಿರಬಹುದು
ಅಸ್ವಸ್ಥತೆಯಿಂದ ಹೊರಳುತ್ತಿವೆ ಖಾಲಿತನದಲ್ಲಿ ನರಳುತ್ತಿವೆ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ