Home / ಕವನ / ಕವಿತೆ / ಪಾರ್ಟಿ ಕಳೆದ ಮೇಲೆ

ಪಾರ್ಟಿ ಕಳೆದ ಮೇಲೆ

ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ
ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು
ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ
ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು
ಟೇಬಲಿನ ಸುತ್ತ ಸೋಫಾದ ಸುತ್ತ ಪಿಯಾನೋದ ಸುತ್ತ
ವಿವಿಧ ಲಯಗಳಲ್ಲಿ ತಾಳಗಳಲ್ಲಿ ಮೇಳಗಳಲ್ಲಿ ಸುತ್ತಿದವರು
ಸುತ್ತಿ ಸುಳಿಸುಳಿಯಾಗಿ ಈ ಕೋಣೆಯೊಳಗೆ ಸುತ್ತ ಮುತ್ತ
ಸುತ್ತಿ ರಾತ್ರಿ ಬೆಳೆದಂತೆ ಆಕಳಿಕೆಯಿಂದ ತೂಕಡಿಸಿದವರು
ಎಲ್ಲರೂ ಎದ್ದು ಹೋದರೂ ಬೆಳಕು ಮಂಕಾದರೂ ಇಲ್ಲಿ
ನಾಲ್ಕು ಗೋಡೆಯೊಳಗೆ ಕೋಣೆ ಏಕಾಕಿಯಾದರೂ ಕೂಡ
ಇವರ ಈ ಹೋದವರ ಮಾತುಕತೆ ಮತ್ತೆ ಉದ್ಗಾರಗಳು
ಉದ್ದುದ್ದ ಚರ್ಚೆಯ ಟೊಳ್ಳುಗಳು ಇವರ ಹೆಂಡಂದಿರ ಒಜ್ಜೆಯ
ಒಯ್ಯಾರದ ಶಬ್ದಗಳು ಅವರ ಆಭರಣದ ಥಳಕುಗಳು
ಮೈ ಎಡೆಯ ಗಂಧಗಳು ಬೆಳೆದ ಕೊಬ್ಬಿನ ಬೇಸರಗಳು
ಇಲ್ಲಿ ಲಯವಾದ ಸ್ವರಗಳು ಕಪ್ಪು ಸಾಸರುಗಳು ತಲೆಕೂದಲುಗಳು
ಸಿಕ್ಕಿಕೊಂಡ ಹೂವಿನ ಚೂರುಗಳು ಮತ್ತು ಉಗಿದ ಮೂಳೆಯ ತುಂಡುಗಳು
ಹೋಮಿಸಿ ಉಳಿದ ಮಂತ್ರಗಳಂತೆ ಸಮಿತ್ತುಗಳಂತೆ ಹವಿಸ್ಸುಗಳಂತೆ
ಏನನ್ನೊ ಬಿಟ್ಟು ಹೋಗಿವೆ ಮಾತು ಕಳೆದ ಧ್ವನಿಗಳಿರಬಹುದು
ಸ್ವರೂಪ ಕಳೆದ ಆಕಾರಗಳಿರಬಹುದು ಅಸ್ತಿತ್ವ ಕಳೆದ ಭೂತಗಳಿರಬಹುದು
ಅಸ್ವಸ್ಥತೆಯಿಂದ ಹೊರಳುತ್ತಿವೆ ಖಾಲಿತನದಲ್ಲಿ ನರಳುತ್ತಿವೆ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...