ಕಾವೇರಿ ಕಾವು; ಸರ್ಕಾರ ನಿರ್ಲಕ್ಷ

ಕಾವೇರಿ ಕಾವು; ಎಲ್ಲೆಲ್ಲೂ ವಿವಾದ
ಭಾರತಾಂಬೆಯ ಶ್ರೇಷ್ಠ ಮಗಳಾಗಿ
ನಮ್ಮೆಲ್ಲರ ಮಾನವರ ತಾಯಿಯಾಗಿ
ಕಾವೇರಿ ತಾ ನದಿಯಾಗಿ ಹರಿಯುತ್ತಿದ್ದಾಳೆ.

ನೀರಿಗಾಗಿಯೇ ಎಲ್ಲೆಲ್ಲೂ ಆಹಾಕಾರ
ಕಾವೇರಿ ನದಿಗಾಗಿ ವಾದ-ವಿವಾದ
ರಾಜಕೀಯದ ಪಕ್ಷಗಳ ಮತಭೇದ
ರಾಜ್ಯ ರಾಜ್ಯಗಳ ಮಧ್ಯ ಸಂಘರ್ಷ

ಕರ್ನಾಟಕದ ಪ್ರಮುಖ ನದಿಯಾಗಿ
ಕಂಗೊಳಿಸುವಳು ತಾ ರೇಷ್ಮೆ ಜರತಾರಿಯಂತೆ
ಕಾವೇರಿಗಾಗಿ ಸದನದಲ್ಲಿ ಚರ್ಚೆ
ತಡೆಯಲಾರದೆ ಮುಂದೂಡುವ ಕಲಾಪಗಳು

ಕಾವೇರಮ್ಮಗಾಗಿ ಎಲ್ಲೆಲ್ಲೂ ಆಗ್ರಹ ಪ್ರತಿಭಟನೆ
ಕಛೇರಿ ಮುಂದೆ ಸರದಿ ಉಪವಾಸ
ಸತ್ಯಾಗ್ರಹಿಯನ್ನು ನಿರ್ಲಕ್ಷ ಮಾಡಿ
ರಕ್ಷಣೆ ಮಾಡಲಾರದು ಈ ನಮ್ಮ ಸರ್ಕಾರ

ಕಾವೇರಿ ವಾದ-ವಿವಾದ ತಡೆಯದೆ
ರಾಜ್ಯಕ್ಕೆ ಸರ್ಕಾರ ರಾಜೀನಾಮೆ
ಸರ್ಕಾರಕ್ಕೆ ಸಂಪುಟ ರಾಜೀನಾಮೆ
ಸಂಪುಟಕ್ಕೆ ಸದಸ್ಯರು ರಾಜೀನಾಮೆ

ಸದಸ್ಯರು ಪಕ್ಷಕ್ಕೆ ರಾಜೀನಾಮೆ
ಎಲ್ಲೆಲ್ಲೂ ರಾಜೀನಾಮೆ ಸಿದ್ದಿ
ಯಾರು ಕಾಣದಂತಹ ನಾಡಿದು
ಯಾರು ಅಳಿಸದಂತಹ ವಾದ-ವಿವಾದವಿದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾರ್ಟಿ ಕಳೆದ ಮೇಲೆ
Next post ಆರೋಪ – ೩

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…