ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ
ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ
ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ
ಜೇಡನ ಸಮೇತ ಕಿತ್ತೆಸೆದಿರುವೆ
ಬರುವುದಾದರೆ ಇಂದೆ ಬಂದುಬಿಡು
ತೋರಣವಿಲ್ಲ ಬಾಗಿಲಿಗೆ
ಹೊಸಿಲಲ್ಲಿಲ್ಲ ರಂಗೋಲಿ
ಎಂದೆಲ್ಲ ಸಬೂಬುಬೇಡ
ನೀ ಬಂದೇ ಬರುವೆಯಾದರೆ
ಆಸೆಗಳ ಧೂಪದಾರತಿ ಎತ್ತಿ
ಕನಸುಗಳನ್ನೆಲ್ಲ ಹೆಣೆದು
ಮಾಲೆ ಮಾಡಿ ಕಾಯುವೆ
ಇಂದೋ, ನಾಳೆಯೋ ಅನುಮಾನಿಸದೆ
ಬಂದೇ ಬಿಡು ಈ ಗಳಿಗೆಯೇ
ನೀ ಬಂದಾಕ್ಷಣವೇ
ಹೊಸದಿನ, ಹೊಸತನ
ಹೊಸಮನ, ಹೊಸತು
ಎಲ್ಲವೂ ಹೊಚ್ಚಹೊಸತು
ವಿದಾಯ ನೆನ್ನೆಗೆ, ನೋವಿಗೆ, ಹತಾಶೆಗೆ
ಪ್ರತೀಕ್ಷೆಯಲ್ಲಿಯೇ ಕಳೆದಾಯಿತು
ಯುಗ ಯುಗವೆಲ್ಲ
ಇನ್ನಾದರೂ ಬಂದು ಬಿಡು
ಕಾಯಿಸದೇ, ವಿಳಂಬಿಸದೆ
*****
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…