ಅಶರೀರ ಜೀವ

ಹಲವುಳಿದ ಅಶರೀರ ಹೆಣ್ಣು ಭ್ರೂಣಗಳ ಆಕ್ರಂದನ
ಮಿಡಿವ ಎದೆ ನರಳಿ, ಮಿಕ್ಕವರಿಗೆ ಖಾಲಿ ಮೌನ
ಅಮ್ಮಾ… ಅಮ್ಮಾ… ಗಾಳಿಯೊಡಲು ಸೀಳಿ
ತೇಲಿ ಬರುವ ನೂರಾರು ಹೆಣ್ಣು ಉಲಿ.

ಗರ್ಭದೊಳಗೇ ಜೀವ ಅಸ್ಪಷ್ಟ ರೂಪವಾದಂತೆ
ಕೊಬ್ಬಿದ ಕುರಿಯ ಕಟುಕ ಕಚಕ್ಕನೆ ಕತ್ತರಿಸಿದಂತೆ
ಮೃತ್ಯುರೂಪ ನಿರ್ದಾಕ್ಷಿಣ್ಯದಿ ಜೀವ ತುಂಡರಿಸಿ
ಎದೆಯೊಳಗಿನ ಭಾವಗಳ ನಿಮಿಷಾರ್ಧದಿ ಒರೆಸಿ

ಗಾಜಿನ ಮೇಲೆ ಬಿದ್ದ ಮಳೆಹನಿಯ
ಒರೆಸಿಬಿಡುವ ವೈಪರ್‌ನ ಕಾಯ
ಪದರು ಪದರಾಗಿ ಹೆಣೆದ ಸೃಷ್ಟಿ ವಿಶೇಷ ಕಸದಲ್ಲಿ!
ಮೊಟ್ಟೆ ಮಾಗಿ ಒಡೆದು ಜೀವವಾಗುವುದೆಲ್ಲಿ?

ಹಸಿಹಸಿ ಮೊಟ್ಟೆ ಕುಡಿದು ಜೀವ ಬಸಿವ
ನರರಾಕ್ಷಸರ ಈ ರುದ್ರತಾಂಡವ!
ಹೆಣ್ಣು ಭ್ರೂಣಗಳು ಹೆಣವಾಗಿ, ಮಣ್ಣಾಗಿ
ಗಂಡು ಭ್ರೂಣಗಳು ಹಣ್ಣಾಗಿ, ಮಾಗಿ

ಜೀವಂತ ಗಂಡು ಜೀವಕ್ಕೆ
ಅಶರೀರ ಹೆಣ್ಣು ಮರೀಚಿಕೆ
ಉತ್ತರವಿಲ್ಲದೇ ಈ ಘೋರಕೆ ಪ್ರಕೃತಿಯೊಳಗೆ?
ಕಾಲವೇ ಕ್ರಾಂತಿಮಂತ್ರ ಈ ಇಳೆಗೆ!?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸವಿಗನಸು
Next post ಸ್ವಾಗತ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys