ಕುಂಟಾಪಿಲ್ಲೆಯಾಟ

ಚಂಗನೆ ಚಿಮ್ಮಿ
ಗಕ್ಕನೆ ದಾಟಿ
ಗೆರೆ ಮುಟ್ಟದ ಜಾಣ್ಮೆ
ಕನಸಿನಂಗಳವ ಮುಟ್ಟಿ
ದಾಟಿದೆ ಮನೆಯಿಂದ ಮನೆಗೆ
ನನ್ನ ಫೇವರೇಟ್ ಬಚ್ಚೆ
ಮನ ಭಾರವನೊಮ್ಮೆ ಇಳಿಸಿ
ಗೆದ್ದ ಹೆಮ್ಮೆ ಮಿನುಗಿದೆ
ಕಣ್ಬೆಳಕು ಥಳಥಳ
ನಕ್ಷತ್ರಗಳ ಗೊಂಚಲು
ಅದೆಷ್ಟು ಗಳಿಗೆ
ಈ ಹಮ್ಮುಬಿಮ್ಮು
ಕುಂಟುತ್ತಾ ಜಿಗಿಯುತ್ತ
ಕಾಲನ ಛಾಯೆ
ಹೆಜ್ಜೆಯಿಂದ ಹೆಜ್ಜೆಗೆ
ದಣಿವು, ಏದುಸಿರು
ಕನರಾಯ್ತು ಕಸರಾಯ್ತು
ಬದುಕಿನ್ನು ಮಬ್ಬು
ಚಿಮ್ಮಿದೆ ಫೇವರಟ್‌ಬಿಲ್ಲೆ
ಅದೆಲ್ಲೊ,
ಚಿತ್ತ ಚಿತ್ತರಾದ ಬದುಕ
ಕದ್ದೊಯ್ದಿದೆ ರಣಹದ್ದು
ಮನೆ ಬಿದ್ದಿತೇ, ಮನ ಬಿದ್ದಿತೇ
ಕನಲಿದ್ದ ಮನಕೆ
ಕಡ್ಡಾದ ಕಣ, ಮುಗಿಯಿತಿನ್ನು
ಎಲ್ಲಾ ಬಣ ಬಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮೃತಕೆ – ಮಂಥನ
Next post ಪ್ರಜ್ಞೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…