ಪ್ರಜ್ಞೆ

ಹೊಗೆಯ ಮೇಲೆ ಇಬ್ಬನಿ ಇಳಿದು
ಇರುಳ ಮಬ್ಬು ಬೆಳಕಿಗೆ ಟ್ರಾನ್ಸ್ ಪೆರೆನ್ಸ್
ಹಿಡಿದಂತೆ
ಛಾವಣಿ ಬಿದ್ದ ಹಳೆ ಮನೆಯ ಒಳಗೆ
ಮುರಿದ ತೊಲೆಗಳಲಿ ತಲೆಕೆಳಗಾಗಿ
ತೊನೆವ ಬಾವಲಿಗಳ ಹಾಗೆ
ಜೇಡನ ಬಲೆಯ ಗಂಭೀರತೆಯ ಮೇಲೆ
ಬಿಸಿಲು ಮಳೆ ಸುರಿದು ಗುಂಯ್ ಗುಟ್ಟುವಂತೆ
ಪದರಗಳು
ಈ ಮಹಾ ಸರೋವರದ ಮೇಲೆ
ಎಣ್ಣೆ ಬಿಂದುಗಳಂತೆ
ಹೊಸ ಅನುಭವಗಳಿಳಿದು
ಹೊಸ ಚಿತ್ರಗಳ ಬಿಡಿಸುವುದೇಕೆ?
ಶಿಲಾಯುಗದ ತೋಳು ಅಗೆದು ಹಾಕಿದ ಗಡ್ಡೆ
ಮಲ್ಟಿ ವಿಟಾಮಿನಿನ ಗುಳಿಗೆಯಾಗಿ ನುಂಗುವಾಗ,
ಯುಗಾಂತರಗಳ ಹಿಂದೆ
ನಿದ್ದೆ ಹೋದ ಜೀವ
ಕೈಚೀಲದಲಿ ಎದ್ದು ಅಳುವಾಗ
ಸ್ಪಂದಿಸುವುದೇನು?
ಆಡಮಿನ ನರಮಂಡಲದಿಂದ ಹುರಿತೆಗೆದು
ಬಿಗಿದು ಮಿಡಿಯುತಿಹೆವಲ್ಲ
ಯುಗಾದಿಗಳ ಹಾಡು-
ಡೈಡೋಳ ದುಃಖ, ಬುದ್ಧನ ಮರುಕ,
ರಾಮಾದಲ್ಲಿ ರೇಚಲ್-

ಅಸ್ತವ್ಯಸ್ತದ ಈ ಪ್ರಾಕಾರದಲ್ಲಿ
ನಿನ್ನೆ
ಇಂದು
ನಾಳೆಗಳನ್ನು
ಮೌನವಾಗಿ ನುಂಗಿ ಹಾಕುತ್ತ
ಬಂದಿದೆ ನನ್ನ ಪ್ರಜ್ಞೆ
ಒಮ್ಮೆ ಟೈರೀಸಿಯಸ್ ನ ನಿಲಿಸಿ
ಕೇಳಬೇಕು:
ಇದೆಲ್ಲ ಏನು?
ಮತ್ತು ಎಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟಾಪಿಲ್ಲೆಯಾಟ
Next post ನಿನ್ನದೇ ಎಲ್ಲ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys