ಅಮೃತಕೆ – ಮಂಥನ

ಹೆಪ್ಪಿಟ್ಟ ಕೆನೆ ಮೊಸರು
ಹುಳಿಯಾಗುವ ಮುನ್ನ
ನಿರಂತರ ಕಡೆಯಬೇಕು!

ಉಕ್ಕಲಿ ನೊರೆನೊರೆಯ
ಹಾಲಾಹಲ!
ಏಕೆ ಕೋಲಾಹಲ?

ಮೇಲೆಲ್ಲವೂ ಕಾರ್ಕೋಟಕ ವಿಷವೇ
ಆಳಕ್ಕಿಳಿದಷ್ಟೂ ಅಮರತ್ವದ
ಅಮೃತವೇ!

ಎಷ್ಟು ಮಹಾ
ಉಕ್ಕೀತು ವಿಷ?
ಆಪೋಶಿಸಿದರೊಂದೇ ಗುಟುಕು
ಕಣ್ತೆರೆಯಲು ಸಾಕು
ಒಂದೇ ಮಿಟುಕು!

ಕಣ್ಮುಚ್ಚಿದರೆ ಕತ್ತಲು
ಕಣ್ತೆರೆದರೆ ಬೆಳಕು
ಕಣ್ಣೂ ನಮ್ಮದೇ
ಆಯ್ಕೆಯೂ ನಮ್ಮದೇ!

ಬೆಳಕು ಬೇಕೆಂದರೆ
ಏನು ಪಣಕೊಡ್ಡಿದರೂ ಸರಿ
ಮುಚ್ಚಿದ ಒಳಗಣ್ಣು
ತೆರೆಯಬೇಕು
ಸಿಹಿಸಿಹಿಯ
ನವನೀತಕಾಗಿ
ಮತ್ತೆ ಮತ್ತೆ
ಕಡೆಯಬೇಕು!

ಯಾವ ವಿಷವಾದರೂ
ಉಕ್ಕುಕ್ಕಿ ಬರಲಿ
ತಳಕಿಲ್ಲವೇ ಅಮೃತ
ಮಂಥಿಸುವ ಸತತ
ಆ ಸುಧೆಗಾಗಿ
ಕಾಯುವ ನಿರತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಬಾಳ್ವೆ
Next post ಕುಂಟಾಪಿಲ್ಲೆಯಾಟ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…