ನಿನ್ನ ಪತ್ರ

ನೀ ಮೊನ್ನೆ ಅಚಾನಕ್ಕಾಗಿ
ಪತ್ರ ಬರೆದೆ ಅದರ ತೇವ
ನನ್ನ ತೋಯಿಸಿತು ಕಣ್ಣು
ನೀರಿನ ಕೊಳವಾಯ್ತು ಮಂಕಾದೆ.

ಯಾಕೆ ಹೀಗೆ ಮೋಡದಲಿ ತೇಲಿ
ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ
ಮನೆ ಮಠ ಮನಸ್ಸನ್ನೆಲ್ಲಾ
ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ.

ಗಾಳಿ ಮಳೆ ಚಳಿ ಬಿಸಿಲಿಗೆ
ಮೈ ಮನ ಮರಗಟ್ಟಿ ಹೋಗಿ
ನಡೆದ ದಾರಿಯ ಮರೆತಿದ್ದೆ
ಒಣಧೂಳಿನ ಓಣಿ ದಾಟಿ ಓಲೆ ಬಂತು.

ಓಡಿ ಪಾರಾಗಲು ಸಾಧ್ಯವಾಗದೇ
ನಿನ್ನಕ್ಷರಗಳು ಸಿಲುಕಿ ಒದ್ದಾಡಿದೆ
ನೀ ನನ್ನ ಇಷ್ಟೊಂದು ಕ್ರೂರವಾಗಿ
ಶಿಕ್ಷಿಸಬಾರದಾಗಿತ್ತು ದಾರುಣವಾಗಿ
ಒಂದು ಸಣ್ಣ ಗಲಿಬಿಲಿ ಸಾಕು ಶಾಶ್ವತವಾದ
ಸೋಲು ಅನುಭವಿಸಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯದಲಿ ಕೂಡಿಯಾಡುವ ಹೋಳಿ
Next post ಅಕ್ಕನ ಭಾವಗೀತೆ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…