ಕ್ಷಮಿಸು ನೀನು

ಕ್ಷಮಿಸು ನೀನು
ಇನ್ನೆಂದೂ ನಾನು
ಕುಡಿಯುವುದಿಲ್ಲ|
ಕ್ಷಮಿಸು ನೀನು
ಮದುವೆಗೆ ಮುನ್ನ
ಯಾವ ಚಟವಿಲ್ಲವೆಂದು
ಸುಳ್ಳುಹೇಳಿ ಮದುವೆಯಾದೆ ನಿನ್ನ||

ನಿನ್ನ ಪ್ರೀತಿ ಮಮತೆಗಿಂತ
ಹಿರಿದಲ್ಲ ಈ ಚಟ
ನಿನ್ನ ಸನಿಹವಿರುವುದಕಿಂತ
ಸುಖವೇನಿಲ್ಲ ಈ ಚಟ|
ನಿನ್ನ ಪೇಮದಮಲಿಗಿಂತ
ಮಜವೇನಿಲ್ಲ|
ಸಹವಾಸ ದೋಷ
ಆ ಒಂಟಿತನ ಜೊತೆಗೂಡಿ
ಸೆಳೆಯಿತೆನ್ನ ಸೆರೆಗೆ ಆಗ||

ನಮಗೆ ಹುಟ್ಟಲಿರುವ
ಮಗುವ ಮೇಲಾಣೆ
ನಾನ್ನಿನ್ನೆಂದೂ ಕುಡಿಯುವುದಿಲ್ಲ|
ದಿನಾ ಸಂಜೆ ನಾ ಬರುವಾಗ
ನಿನಗೆ ತರುವೆ ಮಲ್ಲಿಗೆ|
ಪ್ರೀತಿ ಮಮತೆಯಿಂದಲಿ
ನಿನ್ನಾರೈಕೆ ಮಾಡಿ|
ತಿಂಗಳು ತುಂಬಿದ ಬಳಿಕ
ಚೊಚ್ಚಲ ಹೆರಿಗೆಗೆ
ನಾನೇ ಗಾಡಿ ಹೂಡಿ
ತೌರಿಗೆ ಕಳುಹಿಸಲು ಬರುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದು ನ್ಯಾಯವೇ?
Next post ನಿನೇಕೆ ಸ್ವಾರ್ಥಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys