ಕ್ಷಮಿಸು ನೀನು

ಕ್ಷಮಿಸು ನೀನು
ಇನ್ನೆಂದೂ ನಾನು
ಕುಡಿಯುವುದಿಲ್ಲ|
ಕ್ಷಮಿಸು ನೀನು
ಮದುವೆಗೆ ಮುನ್ನ
ಯಾವ ಚಟವಿಲ್ಲವೆಂದು
ಸುಳ್ಳುಹೇಳಿ ಮದುವೆಯಾದೆ ನಿನ್ನ||

ನಿನ್ನ ಪ್ರೀತಿ ಮಮತೆಗಿಂತ
ಹಿರಿದಲ್ಲ ಈ ಚಟ
ನಿನ್ನ ಸನಿಹವಿರುವುದಕಿಂತ
ಸುಖವೇನಿಲ್ಲ ಈ ಚಟ|
ನಿನ್ನ ಪೇಮದಮಲಿಗಿಂತ
ಮಜವೇನಿಲ್ಲ|
ಸಹವಾಸ ದೋಷ
ಆ ಒಂಟಿತನ ಜೊತೆಗೂಡಿ
ಸೆಳೆಯಿತೆನ್ನ ಸೆರೆಗೆ ಆಗ||

ನಮಗೆ ಹುಟ್ಟಲಿರುವ
ಮಗುವ ಮೇಲಾಣೆ
ನಾನ್ನಿನ್ನೆಂದೂ ಕುಡಿಯುವುದಿಲ್ಲ|
ದಿನಾ ಸಂಜೆ ನಾ ಬರುವಾಗ
ನಿನಗೆ ತರುವೆ ಮಲ್ಲಿಗೆ|
ಪ್ರೀತಿ ಮಮತೆಯಿಂದಲಿ
ನಿನ್ನಾರೈಕೆ ಮಾಡಿ|
ತಿಂಗಳು ತುಂಬಿದ ಬಳಿಕ
ಚೊಚ್ಚಲ ಹೆರಿಗೆಗೆ
ನಾನೇ ಗಾಡಿ ಹೂಡಿ
ತೌರಿಗೆ ಕಳುಹಿಸಲು ಬರುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದು ನ್ಯಾಯವೇ?
Next post ನಿನೇಕೆ ಸ್ವಾರ್ಥಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…