ನಿನೇಕೆ ಸ್ವಾರ್ಥಿ

ಮಾನವ ನೀನೇಕೆ ಆದೆ ಸ್ವಾರ್ಥಿ
ಕ್ಷಣಿಕ ಸುಖಾಸೆಗೆ ಫಕೀರನಾದೆ
ಬಿದ್ದು ಹೋಗುವ ದೇಹಕ್ಕೆ ಮೋಹಿಸಿದೆ
ನಿನ್ನ ಭೋಗಲಾಲಸೆಗೆ ಪರಾಧೀನನಾಂದೆ

ನಿನ್ನ ಸಂಚಯನಕೆ ಕೊನೆ ಮೊದಲಿಲ್ಲ
ನಿನ್ನ ಬಯಕೆಗಳಿಗೆ ಕೊನೆಗಾಲವಿಲ್ಲ
ದೇವರ ನಾಮವೆ ನಿನಗೆ ವಿಷವಾನ
ದಾನವೆಂಬುದು ನೀನು ಅರಿತಿಲ್ಲ

ಚಂದ್ರ ಸೂರ್‍ಯ ತಾರೆ ಕಂಡಿಲ್ಲವೆ
ಬೆಳಕನ್ನು ನೀಡುತ್ತಿರೆ ಮೌನವಾಗಿ
ಭೂಮಿ ವೃಕ್ಷ ಸಾಗರ ಕಂಡಿಲ್ಲವೆ
ಧಾನ್ಯ ಫಲ ಜಲ ಧಾರೆ ಮೌನವಾಗಿ

ಹರಿ ನೀನು ನೀಡಿದನ್ನೆ ನಾ ಕೊಡಲಾರೆ
ಕಂಡು ಕಂಡು ಬಾವಿಗೆ ಬೀಳುತ್ತಿರುವೆ
ಇದೆಲ್ಲವೂ ನಾಟಕ ಯಾರು ನಿನ್ನವರಲ್ಲ
ಮಾಣಿಕ್ಯ ವಿಠಲನಾಗಿ ಕೇಳುತ್ತಿರುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಮಿಸು ನೀನು
Next post ಬೆಳುದಿಂಗಳಲ್ಲಿ ಸೂರ್ಯಕಾಂತಿಯ ನೆರಳು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…