Home / ಕಥೆ / ಸಣ್ಣ ಕಥೆ / ಹಮ್ ನಹಿಂ ಗದ್ಧಾ

ಹಮ್ ನಹಿಂ ಗದ್ಧಾ

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂಟ್’ ಸಾಹೇಬರ ‘ಬಂಗ್ಲಗಿಂತಲೂ’ ಎತ್ತರದಲ್ಲಿ ಇದ್ದುವು. ಈ ಮೂವರು ‘ಆಫೀಸರರ’ ಬಟ್ಟೆಗಳನ್ನೆಲ್ಲಾ ಒಗೆಯುವ ಆಗಸನು ಒಬ್ಬನೇ. ಜನರಲ್ ಸಾಹೇಬರ ಮತ್ತು ಕರ್ನೆಲ್ ಸಾಹೇಬರ ‘ಬಂಗ್ಲೆಗಳು’ ಎತ್ತರದಲ್ಲಿ ಕಟ್ಟಿದುದರಿಂದ, ಆಗಸನು ಅವರ ವಸ್ತಗಳನ್ನು ಒಯ್ಯುವುದಕ್ಕೆ ಕತೆಯನ್ನು ಇಟ್ಟುಕೊಳ್ಳ ಬೇಕಾಯಿತು. ಆದರೆ ಲಫ್ಟೆನೆಂಟ್ ಸಾಹೇಬರ ಬಟ್ಟೆಗಳಿಗೆ ತನ್ನ ಬೆನ್ನನ್ನೇ ವಾಹನವಾಗಿ ಕೊಡುತಿದ್ದನು. ಇದರಲ್ಲಿ ನೂತನವೇನೂ ಇರಲಿಲ್ಲವೆಂದು ತಾನಾಗಿಯೇ ತೋರುವುದು. ಆದರೆ ಆಗಸನ ಈ ನಡತೆಯನ್ನು ನೋಡಿ ಲೆಫ್ಟೆನೆಂಟ್ ಸಾಹೇಬರು ರೇಗಿ ಬಿದ್ದರು. ಜನರಲ್ ಮತ್ತು ಕರ್ನಲ್ ಸಾಹೇಬರುಗಳ ವಸ್ತ್ರಗಳನ್ನು ಕತ್ತೆಯ ಮೇಲೂ, ತನ್ನ ವಸ್ತ್ರಗಳನ್ನು ಮಾತ್ರ ಬೆನ್ನ ಮೇಲೂ ಏಕೆ ಕೊಂಡುಹೋಗುತ್ತಿದ್ದನು ಎಂದು ಸಾಹೇಬರ ಬುದ್ಧಿಗೆ ತಿಳಿಯಲಿಲ್ಲ. ತನಗೆ ಇದೊಂದು ಬಗೆಯ ಅವಮಾನವೆಂದು ತಿಳಿದು, ಸಾಹೇಬರು ಆ ಬಡ ಪಾಪಿಗೆ ಬುದ್ಧಿ ಕಲಿಸಬೇಕೆಂದು ನಿಶ್ಚಯ ಮಾಡಿದರು.

ಸಾಹೇಬರು ಕಾರಣಾಂತರದಿಂದ ಅನೇಕ ಮಂದಿ ಸ್ನೇಹಿತರನ್ನು ಮನೆಗೆ ಒಂದು ದಿನ ಸಾಯಂಕಾಲ ಆಮಂತ್ರಿಸಿದ್ದರು. ಅತಿಥಿಗಳಲ್ಲಾ ಮನೆಯೊಳಗೆ ಕೂಡುತ್ತಲೇ ಸಾಹೇಬರ ಬಟ್ಟೆಗಳನ್ನು ಎಂದಿನಂತೆ ಬೆನ್ನ ಮೇಲೆ ಹೊತ್ತುಕೊಂಡು ‘ಡೋಭಿಯು’ ಒಳಕ್ಕೆ ಬಂದನು. ಅತಿಥಿಗಳ ಸಮಕ್ಷಮದಲ್ಲಿ ಅಗಸನು ತನಗೆ ತೋರಿಸಿದ ಈ ಅತ್ಯಾಚಾರವನ್ನು ನೋಡಿ, ಸಾಹೇಬರು ಉರಿದು ಬಿದ್ದರು. ಅದಲ್ಲದ ತಾನು ದೇಶಭಾಷಯಲ್ಲಿ ಎಷ್ಟರ ಮಟ್ಟಿಗೆ ಅಭ್ಯಾಸ ಮಾಡಿರುವನೆಂದು ತನ್ನ ಮಿತ್ರಮಂಡಳಿಗೆ ತೋರಿಸುವುದಕ್ಕೆ ಸಾಹೇಬರು ಕಾಂಕ್ಷಿತರಾಗಿ, ಅಗಸನಿಗೆ “ಕಂ ಹಿಯರ್ ಯು ನಿಗ್ಗರ್” ಎಂದು ಓದರಿದರು.

ಬಡ ಅಗಸನು ನಡುನಡುಗಿ ಮುಂದುಹೋಗಿ ದೊಡ್ಡ ಸಲಾಂ ಮಾಡಿದನು.

“ವ್ಹಾಯ್ ಜನರಲ್ ಸಾಹೀಬ್ ಎಂಡ್ ಕರ್ನೆಲ್ ಸಾಹೆಬ್ ತುಂ ಗಿವ್ ಗದ್ಧಾ ಎಂಡ್ ಹಂ ನಹಿ?” ಎಂದು ಸಾಹೇಬರು ಕುಪಿತಸ್ವರದಿಂದ ಹೇಳಿದರು.

ಅಗಸನ ಬುದ್ಧಿ ಅಡಿಮೇಲಾಯಿತು; ಅವನಿಗೆ ಈ ಸಿಟ್ಟು ಮಾತಿನ ಅರ್ಥವೇನೆಂದು ತಿಳಿದುಬರಲಿಲ್ಲ. ಅವನು ಮೌನದಿಂದ ಇರುವುದೇ ಲೇಸಂದು ತಿಳಿದು ನಿರುತ್ತರನಾದನು. ಆದರಿ ಅವನ ನಿರುತ್ತರದಿಂದ ಸಾಹೇಬರು ಇನ್ನೂ ಕೆರಳಿದಂತಾಗಿ “ಡೆಯರ್ ಯೂ ಡಿನ್ಯಾ ಇಟ್, ಅಯ್ಲ್ ಬ್ರೇಕ್ ಎವೆರಿ ಬೋನ್ ಫೊರ್ ಯೂ-ಮಾಲುಂ?” ಎಂದರು.

“ಖುದಾವಂದ್! ಆಪ್ ಕ್ಯಾ ಕಹತೇ ಹೈ ಮೈ ಸಮಜ್ತಾ ನಹಿಂ? ಎಂದು ‘ಢೋಬಿ’ ಯು ಉತ್ತರಿಸಿದನು.

“ಸಮಜ್ತೆ ನೈ? ಒಲ್ ರ್‍ಯಾಟ್, ಆಯ್ ವಿಲ್ ಎಕ್ಸ್‍ಪ್ಲೇನ್ ಟು ಯೂ, ದೇಖೊ.”

“ಜೀ ಹುಜೂರ್”

“ದೇಕ್ಹೋ! ಕರ್ನಲ್ಸಾಹಬ್ ಗದ್ಧಾ, ಜನರಲ್ ಸಾಹಬ್ ಗದ್ಭಾ; ಹಂ ಗದ್ಧಾ ನಹಿ”

ಇದಕ್ಕೆ ಅಗಸನು ಸುಮ್ಮನಿರಲಾರದೆ “ನಹಿ ಸಾಹೆಬ್, ಆಪ್ ಕೈಸಾ ಗದ್ಧಾ? ಆಪ್ ಗದ್ಧಾ ನಹಿ” ಎಂದನು.

ಇದನ್ನು ಕೇಳುತಲೇ ಸಾಹೇಬರು ಕ್ರೋಧದಿಂದ “ಯೂ ಸ್ಟುಪಿಡ್ ಅಸ್ಸ್, ಯು ಡೆಯರ್ ಡಿನೈ ಮಿ ಯುವರ್ ಡೊಂಕಿ? ವೊಟ್ ಡು ಯು ಮೀನ್? ಹಂ ಗದ್ಧಾ, ಒಫ್ ಕೋರ್ಸ್, ಹಂ ಗದ್ಧಾ.”

ಸಾಹೇಬರ ಮನಸ್ಸು ನೆಟ್ಟಗಾದ ಸ್ಥಿತಿಯಲ್ಲಿ ಇರಲಾರದೆಂದು ಸಾಹೇಬರ ಈ ಮಾತುಗಳಿಂದ ಬಡ ಅಗಸನು ನಿಶ್ಚಯಿಸಿದನು; ತಾನು ಕತ್ತೆ ಎಂದು ಹೇಳಿಸಿಕೊಳ್ಳುವ ಹಟವನ್ನು ಸಾಹೇಬರು ಏಕೆ ಹಿಡಿದಿರುವರು ಎಂದು ಅವನಿಗೆ ತಿಳಿಯಲಿಲ್ಲ. ಅಲ್ಲಿ ನೆರದಿದ್ದ ಅತಿಥಿಗಳೆಲ್ಲರೂ ಸಾಹೇಬರ ನುಡಿಗಳಿಂದ ವಿನೋದಗೊಂಡರು. ಆದರೆ ಆಗಸನು ತನ್ನನ್ನು ಅಪಮಾನಗೊಳಿಸಿದನೆಂದು ಸಾಹೇಬರು ತಿಳಿದು, ತನ್ನ ಮುಷ್ಟಿಯಿಂದ ಎರಡು ಮೂರು ಪ್ರಹಾರಗಳನ್ನು ಕೊಟ್ಟು ಹೇಳಿದೇನೆಂದರೆ, “ಸೇ, ಯು ಇನ್‌ಫರ್‌ನಲ್ ಆಸ್ಫ಼್!-ಸೇ, ಲೆಫ್ಟನಂಟ್ ಸಾಹೆ ಗದ್ಧಾ, ಅಲ್‍ಬತ್ ಗದ್ಧಾ, ಒಲ್‍ವೆಸ್ ಗದ್ಧಾ” “ಬೊಲೋ, ಹಂ ಗದ್ಧಾ ಹೈ, ಅದರ್ ವಾಯಸ್ ಅ ವಿಲ್ ಕಿಲ್ ಯು.”

ಲೆಫ್ಟನೆಂಟ್ ಸಾಹೇಬರೂಡನೆ ಚರ್ಚಿಸುವುದು ವ್ಯರ್ಥವೆಂದು ತಿಳಿದು ಆಗಸನು “ಆವ್ರ್ ಖುದಾ ವಂದ್ ಜಬ್ತೊ ಜೈಸಿ, ಆಪ್ ಕೀ ಮರ್ಜಿ, ಆಪ್ ಬಹುತ್ ಬಡಾ ಗದ್ಧಾ” ಎಂದನು.

ಈ ಸಂಗತಿಯನ್ನು ಸಾಹೇಬರು ತನ್ನ ಹಿಂದೂಸ್ಥಾನೀ ಮುನ್ಶಿಗೆ ಹೇಳಿದರು. ಮುನ್ಶಿಯು ಇದರ ಯಥಾರ್ಥ ಸ್ಥಿತಿಯನ್ನು ತಿಳಿಸುತ್ತಲೇ ಸಾಹೇಬರಿಗೆ ಅದ ನಾಚೆಕೆಯನ್ನು ವಾಚಿಸುವುದಕ್ಕಿಂತಲೂ ನೀವು ಯೋಚಿಸುವುದೇ ಲೇಸು. ಹೇಗೂ ಅದು ಮುನ್ಶಿಯ ಸಂಬಳವನ್ನು ಹೆಚ್ಚಿಸುವಂತೆ ಪರಿಣಮಿಸಿತು. ದೇಶ ಭಾಷೆಯ ಅಭ್ಯಾಸಕ್ಕೆ ಸ್ವಲ್ಪ ಹೆಚ್ಚು ಗಮನವನ್ನು ಕೊಡುವುದಕ್ಕೆ ಸಾಹೇಬರು ತೊಡಗಿದರು; ಮತ್ತು ತಾನು ಚೆನ್ನಾಗಿ ದೇಶ ಭಾಷೆಯನ್ನು ತಿಳಿದ ಹೊರತು ಅದರಿಂದ ಒಂದೇ ಒಂದು ಅಕ್ಷರವನ್ನು ಉಚ್ಚರಿಸಲಾರೆನೆಂದು ನಿಶ್ಚೈಸಿದರು.
*****
(ಸುವಾಸಿನಿ – ೧೯೦೨)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...