ಗೋಡೆ ಗೋಡೆಗಳಲಿ
ಅಲಂಕಾರಕ್ಕಿದ್ದ
ಕತ್ತಿ ಚೂರಿಗಳಿಗೆಲ್ಲ
ಹೊಳಪೋ, ಹೊಳಪು
ಹರಿತವಹೆಚ್ಚಿಸುವ
ಭಾರಿ ಹುರುಪು
ಮಸೆವ ಕಲ್ಲಿಗೂ
ಬಿಡುವಿಲ್ಲದ ಕೆಲಸ
ಮನಮನದಲೂ
ಕತ್ತಿ ಮಸೆವ ಬಿರುಸು
ಸೈತಾನದ ಶಕ್ತಿಗೂ
ಮತಾಂಧತೆಗೂ
ಗಳಸ್ಯ ಕಂಠಸ್ಯ
ಮಾನವತೆಗೂ ಬಿರುಕು
ಕ್ರೂರತೆಯ ಥಳಕು
ಮನೆ ಮನೆಯಲೂ
ಬೆಂಕಿ ಚೆಂಡು
ಚೆಂಡಾಟದ ರಭಸಕೆ
ಬಿದ್ದವರೆಷ್ಟೊ, ನರಳಿದವರೆಷ್ಟೋ
ಹೇ ರಾಮ, ಯೇ ಅಲ್ಲಾ
ವಿಶ್ವಪ್ರೇಮ ಇಲ್ಲಾ, ಇಲ್ಲಿ
ಎಲ್ಲಾ, ಎಲ್ಲಾ ಬೊಗಳೆ
ಸ್ಥಿತಿಲಯದ ಅತ್ಯಾಚಾರ
ಬಿಡಿಸಿಟ್ಟ ತೊಳೆ
ಹೊಗೆಯಾಡುತ್ತಲೇ ಇರುವ
ಗುಪ್ತಗಾಮಿನಿ ಈ ಬೆಂಕಿ
ಭಗ್ಗನೆ ಉರಿ ಏಳಲು
ಸಾಕಷ್ಟೆ ಒಂದು ನೆಪ
ಬೈಯ್ಯಾ ಬೆಹನ್ ಅಪ್ಪಾ-ಅಮ್ಮ
ಎಲ್ಲರ ಭಸ್ಮಕೆ ಸಾಕು ಒಂದೇ ಕ್ಷಣ
*****
Related Post
ಸಣ್ಣ ಕತೆ
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಬಲಿ
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
-
ಅವಳೇ ಅವಳು
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…