ಎಚ್ಚರ

ಯಾರೋ ಒದ್ದು
ಚೆಲ್ಲಾಪಿಲ್ಲಿ ಹರಡಿದ ತನ್ನ
ಕನಸುಗಳನೆಲ್ಲಾ ಬಾಚಿ
ಗುಡ್ಡೆ ಹಾಕಿ ಗಂಟು ಕಟ್ಟಿ
ಬೆನ್ನಿಗೇರಿಸಿ
ಹೊರಟುಬಿಡುತ್ತಾಳೆ ಎಲ್ಲಾ ಧಿಕ್ಕರಿಸಿ!

ಕಾಡು, ಕಂದರ, ಪರ್ವತ
ಸಮುದ್ರ, ನದೀ ತಟ
ಬಿಚ್ಚಿದ ಆಕಾಶ
ಮುಚ್ಚಿದ ಭೂತಟ
ಎಲ್ಲ ಎಲ್ಲವ ದಾಟಿ
ನಡೆಯುತ್ತಾಳೆ ನಿರಂತರ!

ಆಣೆಗಳ ಇಟ್ಟಿದ್ದು
ಮಾತುಗಳ ಕೊಟ್ಟಿದ್ದು
ಎಲ್ಲೋ ಕಳೆದು ಹೋಗಿದ್ದು
ಎತ್ತರಗಳ ಬಗೆಗೆ ಭಯ ಪಟ್ಟಿದ್ದು
ಕಂದರದಲಿ ಬಿದ್ದಾಗ ಅತ್ತಿದ್ದು
ಎಲ್ಲಾ ಮರೆತು
ನಾಳೆಗಳಲ್ಲಿ ಕಣ್ಣು ಹೂತು,
ಹಿಂದೆಂದೋ ಒಮ್ಮೆ
ರಾಜಕುಮಾರನದಾಗಿದ್ದ
ಹಾರುವ ಕುದುರೆಯನೇರಿ
ಹೊರಡುತ್ತಾಳೆ ಶಿಕಾರಿಗೆ!
ಬೆನ್ನಿನ ಮೇಲೆ ಇವಳದೇ
ಮುರಿದ ಕನಸುಗಳು
ನಾಳೆಗೆ ಸರಿಪಡಿಸಲು!
ಹಿಂದೆ ಕುದುರೆ ಯಾರದೋ
ಆಗಿದ್ದರೇನು?
ಈಗ ಅವಳೇ ನಿರ್ಮಿಸಿದ
ದಾರಿಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಸಣ್ಣ ತಪ್ಪು
Next post ಬೆಂಕಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys