ರೆಕ್ಕೆ ಬಿಚ್ಚಿದ ಹಕ್ಕಿ

ಎಡಬಿಡದೆ ಸುರಿದ
ಮಹಾ ಮಾರಿ ಮಳೆಗೆ
ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ
ನೆಲಕ್ಕೆ ಕವುಚಿಬಿದ್ದ
ಮರಿ ಹಕ್ಕಿ
ಛಳಿಗೋ, ತೇವಕ್ಕೋ
ಗಡಗಡನೆ ನಡುಗುತ್ತಾ
ರೆಕ್ಕೆ ಬಿಚ್ಚಲಾಗದೇ
ಮತ್ತಷ್ಟು ಮುದುಡುತ್ತಾ
ತನ್ನ ಅಸಹಾಯಕತೆಗೆ ಬಿಕ್ಕುತ್ತಾ

ಮನದೊಳಗೆ ಒಂದೇ ಪ್ರಶ್ನೆ
ಷೇಕ್ಸ್‌ಪಿಯರ್‌ನ ಸೃಷ್ಟಿ
ಹ್ಯಾಮ್ಲೆಟ್‌ನಂತೆ
ಬದುಕಲೋ? ಬದುಕದಿರಲೋ?

ಇದ್ದಕ್ಕಿದ್ದಂತೆ, ಕತ್ತಲು
ಅಮರಿದ ರಾತ್ರಿಯಲ್ಲೂ
ನಿಶಾಂತದ ಮಿಂಚು
‘ಬಾಂದಳವಿನ್ನೂ ಮಿಕ್ಕಿದೆ ಗೆಳತಿ’
ಎನುವ ಮೋಡದಂಚಿನ
ಕೋಲ್ಮಿಂಚು!

ಮುದುರಿ ನಡುಗುವ
ಮರಿಹಕ್ಕಿ
ಕಣ್ಣೆತ್ತಿ ಬಾಂದಳ ದಿಟ್ಟಿಸಿತ್ತು
ಮೋಡ ಸರಿಸಿ
ಮೆಲ್ಲಗೆ ನಗುವ ಶಶಿಯ ಕಂಡಿತ್ತು

‘ಹಿಪ್, ಹಿಪ್, ಹುರ್‍ರೆ’
ಸಂಭ್ರಮದಿ ಕಿರುಚಿತ್ತು
ಮೆಲ್ಲಗೆ ರೆಕ್ಕೆ ಕೊಡವಿ ಬಿಚ್ಚಿತ್ತು
ಕಣ್ಣಂಚಿನ ನೀರೊರೆಸಿ
ಗೆಲುವಿನ ನಗೆ ನಕ್ಕಿತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಯಾಸೆಟ್ ಕವನ
Next post ಸೃಷ್ಟಿಕ್ರಿಯೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…