Home / ಕವನ / ಕವಿತೆ / ಕ್ಷಿತಿಜದೆಡೆಗೆ

ಕ್ಷಿತಿಜದೆಡೆಗೆ

ಮುಗಿದುಹೋಯ್ತು ಬಂದ ಕೆಲಸ
ಇನ್ನು ಹೊರಡಬೇಕು
ದಿಗಂತದೆಡೆಗೆ ಪಯಣ
ಮುಗಿದು ಹೋದ
ಬಾಳಿಗರ್ಥ ಹುಡುಕಿ
ವ್ಯರ್ಥವಾದ ಮೇಲೆ
ಹೋಗಿ ಸೇರುವ ಕಡಲ ತಡಿಯ

ಕ್ಷಿತಿಜದಂಚಿನ ಬೆಳ್ಳಿ ರೇಖೆಯ
ಮೇಲೆ ಬಾನಿರಬಹುದು ಶೂನ್ಯ
ಶೂನ್ಯ ಶೂನ್ಯವ ಮೀರಿ ನಿಲ್ಲುವ
ಕೆಚ್ಚೆದೆ ಬಂದಿದೆ,
ಬೆಚ್ಚದೇ ನಡೆಯಬೇಕೀಗ

ಕಳೆದು ಹೋಗಿಹ
ಅನಂತ ಸಂಬಂಧಗಳ ಮೇಲೆ
ಎಳೆಯಬೇಕೀಗ ಕಲ್ಲಿನಾಗೋಡೆ
ನೆನೆವೂ ಬರದಂತೆ
ಅನುಭವವೂ ಇರದಂತೆ
ಕಪ್ಪಾಗಬೇಕು ಎಲ್ಲಾ ಹಿಂದಿನ ಚಿತ್ರ!

ಹೊರಟಿಹ ಕಾರ್ಯ ಹಿರಿದೇನಲ್ಲಾ
ಆದರೆ ಮಾಡಲಿರುವುದೆಲ್ಲಾ ದೊಡ್ಡದೇ
ಬಾನಿನಾಚೆಯಲಿ ಬೆಳಕಿದೆಯೋ?
ಕತ್ತಲಿದೆಯೋ?
ಬರಿಯ ಬೆತ್ತಲಿದೆಯೋ? ನಮಗೆ ತಿಳಿದಿಲ್ಲ.

ಹೊರಟಿರುವೆವು ನಿರಾಶ್ರಿತರಾಗಿ
ಭುವಿಯಿಂದ ಕ್ಷಿತಿಜದೆಡೆಗೆ
ನಾವಾರೂ ಸ್ವಾರ್ಥಿಗಳಲ್ಲ
ಕ್ಷಿತಿಜ ನಮ್ಮದೂ ಅಲ್ಲ
ಬೇರಾರದೂ ಆಗಿರಲಿಲ್ಲ!

ತಲುಪಬೇಕಿರುವ ಗುರಿ ಒಂದೇ ಈಗ
ತಲುಪುವುದೂ ಮುಖ್ಯವಲ್ಲ
ದಾರಿ ಸಾಗುವುದೇ ಮುಂದೆ?
ಎಂಬುದೇ ಮೊದಲ ಪ್ರಶ್ನೆ-

ಹೆಚ್ಚಾಗೇ ಇರಲಿ ಎಂದು
ಬುತ್ತಿ ತಂದಿದ್ದೇವೆ ಜಾಸ್ತಿಯೇ
ಅದು ಮುಗಿದು ಹೋಗುವ ಮುನ್ನ
ಸೇರಬೇಕು ದಿಗಂತವನ್ನ
ಆಸೆ ಹಿರಿದೇನಲ್ಲಾ
ಆದರೆ ಗುರಿ ಮಾತ್ರ ಹಿರಿದೇ
ಸಾಗುತಿರುವೆವು ನಾವು ಕ್ಷಿತಿಜದೆಡೆಗೆ
ನಿರಂತರ ಯಾತ್ರಿಕರು ನಾವು
ಗುರಿ ಸೇರಬಲ್ಲೆವೇ?
ಇಲ್ಲ ನಮ್ಮ ಗುರಿಯೇ ಮರೀಚಿಕೆಯೇ?
ಎಂಬುದೇ ಉಳಿದ ಪ್ರಶ್ನೆ ಈಗ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...