Home / ಕವನ / ಕವಿತೆ / ಕ್ಷಿತಿಜದೆಡೆಗೆ

ಕ್ಷಿತಿಜದೆಡೆಗೆ

ಮುಗಿದುಹೋಯ್ತು ಬಂದ ಕೆಲಸ
ಇನ್ನು ಹೊರಡಬೇಕು
ದಿಗಂತದೆಡೆಗೆ ಪಯಣ
ಮುಗಿದು ಹೋದ
ಬಾಳಿಗರ್ಥ ಹುಡುಕಿ
ವ್ಯರ್ಥವಾದ ಮೇಲೆ
ಹೋಗಿ ಸೇರುವ ಕಡಲ ತಡಿಯ

ಕ್ಷಿತಿಜದಂಚಿನ ಬೆಳ್ಳಿ ರೇಖೆಯ
ಮೇಲೆ ಬಾನಿರಬಹುದು ಶೂನ್ಯ
ಶೂನ್ಯ ಶೂನ್ಯವ ಮೀರಿ ನಿಲ್ಲುವ
ಕೆಚ್ಚೆದೆ ಬಂದಿದೆ,
ಬೆಚ್ಚದೇ ನಡೆಯಬೇಕೀಗ

ಕಳೆದು ಹೋಗಿಹ
ಅನಂತ ಸಂಬಂಧಗಳ ಮೇಲೆ
ಎಳೆಯಬೇಕೀಗ ಕಲ್ಲಿನಾಗೋಡೆ
ನೆನೆವೂ ಬರದಂತೆ
ಅನುಭವವೂ ಇರದಂತೆ
ಕಪ್ಪಾಗಬೇಕು ಎಲ್ಲಾ ಹಿಂದಿನ ಚಿತ್ರ!

ಹೊರಟಿಹ ಕಾರ್ಯ ಹಿರಿದೇನಲ್ಲಾ
ಆದರೆ ಮಾಡಲಿರುವುದೆಲ್ಲಾ ದೊಡ್ಡದೇ
ಬಾನಿನಾಚೆಯಲಿ ಬೆಳಕಿದೆಯೋ?
ಕತ್ತಲಿದೆಯೋ?
ಬರಿಯ ಬೆತ್ತಲಿದೆಯೋ? ನಮಗೆ ತಿಳಿದಿಲ್ಲ.

ಹೊರಟಿರುವೆವು ನಿರಾಶ್ರಿತರಾಗಿ
ಭುವಿಯಿಂದ ಕ್ಷಿತಿಜದೆಡೆಗೆ
ನಾವಾರೂ ಸ್ವಾರ್ಥಿಗಳಲ್ಲ
ಕ್ಷಿತಿಜ ನಮ್ಮದೂ ಅಲ್ಲ
ಬೇರಾರದೂ ಆಗಿರಲಿಲ್ಲ!

ತಲುಪಬೇಕಿರುವ ಗುರಿ ಒಂದೇ ಈಗ
ತಲುಪುವುದೂ ಮುಖ್ಯವಲ್ಲ
ದಾರಿ ಸಾಗುವುದೇ ಮುಂದೆ?
ಎಂಬುದೇ ಮೊದಲ ಪ್ರಶ್ನೆ-

ಹೆಚ್ಚಾಗೇ ಇರಲಿ ಎಂದು
ಬುತ್ತಿ ತಂದಿದ್ದೇವೆ ಜಾಸ್ತಿಯೇ
ಅದು ಮುಗಿದು ಹೋಗುವ ಮುನ್ನ
ಸೇರಬೇಕು ದಿಗಂತವನ್ನ
ಆಸೆ ಹಿರಿದೇನಲ್ಲಾ
ಆದರೆ ಗುರಿ ಮಾತ್ರ ಹಿರಿದೇ
ಸಾಗುತಿರುವೆವು ನಾವು ಕ್ಷಿತಿಜದೆಡೆಗೆ
ನಿರಂತರ ಯಾತ್ರಿಕರು ನಾವು
ಗುರಿ ಸೇರಬಲ್ಲೆವೇ?
ಇಲ್ಲ ನಮ್ಮ ಗುರಿಯೇ ಮರೀಚಿಕೆಯೇ?
ಎಂಬುದೇ ಉಳಿದ ಪ್ರಶ್ನೆ ಈಗ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...