ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ
ಅಂದು, ಅಂತೆಯೇ ಮಾರಿದನೊಬ್ಬ
ತನ್ನ ಸತಿಯ ನಡುಬೀದಿಯಲಿ
ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು
ಬಿಕರಿಗಿಟ್ಟ ವಸ್ತುವಿನಂತೆ
ಕೊಟ್ಟಮಾತ ಉಳಿಸಿಕೊಳ್ಳಲು
ಸತ್ಯದ ಕೀರ್ತಿಗಾಗಿ
ಸತಿಯ ಮಾರಿ, ತನ್ನ ತಾ
ಮಾರಿಕೊಂಡ ಹುಂಬ ಗಂಡ
ಇವನಿಗಿಂತ ಕಡೆಯಾದನೊಬ್ಬ
ಪಣಕ್ಕಿಟ್ಟ ತನ್ನ ಸತಿಯ
ಲತ್ತೆಯಾಟದಲಿ ಸೋತು
ಪರರಿಗೊಪ್ಪಿಸಿದ ಧನದಂತೆ
ಗೆದ್ದವರು ಪೌರುಷದಲಿ
ಗೆದ್ದೆವೆಂಬ ಹಮ್ಮಿನಲಿ
ಕಣ್ಣೆದುರೇ ಸತಿಯ ಎಳೆದಾಡಿ
ಸೊಂಟಕ್ಕೆ ಕೈ ಇಕ್ಕಿದರೂ
ಬಗ್ಗಿಸಿದ ತಲೆ ಎತ್ತಲಾರದೆ
ಷಂಡರಾದರು ಗಂಡಂದಿರೈವರು
ನಡುದಾರಿಯಲಿ ಕೈಕೊಟ್ಟು
ಸತಿ ಉಟ್ಟ ಅರ್ಧ ಸೀರೆ ಹರಿದುಟ್ಟು
ನಿರ್ಧಯನಾಗಿ ಹೊರಟೆ ಬಿಟ್ಟ
ಕಗ್ಗಾಡಿನಲಿ ನಿದ್ರೆ ಹೋದ
ಅರ್ಧಾಂಗಿನಿಯ ಬಿಟ್ಟು!
ಅಲ್ಪನ ಮಾತಿಗೆ
ಕಲ್ಪನೆಯ ತಾವಿಗೆ
ಫಲಹೊತ್ತ ಮಡದಿಯ
ಕಾಡಟ್ಟಿ ಜನಮೆಚ್ಚಿದ
ದೊರೆಯಾದ ಅಗ್ನಿಗೆ
ತಳ್ಳಿದ್ದ ದೊರೆಯೊಬ್ಬ
*****
Related Post
ಸಣ್ಣ ಕತೆ
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…