Home / ಕವನ / ಕವಿತೆ / ಬಂದು ಬಿಡಬಹುದೇ ಹೀಗೆ?

ಬಂದು ಬಿಡಬಹುದೇ ಹೀಗೆ?

ಕಪ್ಪಡರಿದ ಕಂದೀಲು
ನಾನಿನ್ನೂ
ಉಜ್ಜಿ
ಹೊಳಪೇರಿಸೇ ಇಲ್ಲ!

ದೇವರ ಮುಂದಲ
ನಂದಾದೀಪ
ಯಾವಾಗಲೋ ಆರಿ
ಬತ್ತಿ ಸುಟ್ಟು ಕರಕಾಗಿತ್ತಲ್ಲ!

ಹೀಗೆ ಇದ್ದಕ್ಕಿದ್ದಂತೆ
ಮೋಡ ಮುಸುಕಿ
ಕತ್ತಲಾವರಿಸುತ್ತದೆಂದು
ಯಾರಿಗೆ ಗೊತ್ತಿತ್ತು?

ಗುಟ್ಟಾಗಿ ಬಸಿರಾದ ಮೋಡ
ಯಾವ ಕ್ಷಣದಲ್ಲಾದರೂ
ಹೀಗೆ ಹನಿಯೊಡೆಯಬಹುದೆಂದು
ನನಗೆಲ್ಲಿ ತಿಳಿದಿತ್ತು?

ಹನಿಹನಿಯೂ
ಭುವಿತಾಗಿ
ಈ ನಿಶೀಥದಲ್ಲಿ ಅಬ್ಬಾ!
ಎಂಥ ಕೊರೆವ ಚಳಿ?

ಅಗ್ಗಿಷ್ಟಗೆಗೊಡ್ಡಲು
ಒಂದು ತುಂಡು
ಇದ್ದಿಲೂ
ಉಳಿದಿಲ್ಲ ಇಲ್ಲಿ!

ಒಳಗಿನೆಲ್ಲಾ
ಚಡಪಡಿಕೆ ಮೀರಿ
ಅದೋ ಬಾಗಿಲು ತಟ್ಟುವ
ಸದ್ದು ಅಥವಾ ಭ್ರಾಂತು?

ಈ ನಿಶಿತ ಕತ್ತಲಿನಲ್ಲಿ
ಮುಖಗಳು
ಕಾಣುವುದಾದರೂ
ಎಂತು?

ಕನಸುಗಳಲ್ಲಿ ಪ್ರತ್ಯಕ್ಷವಾಗಿ
ವಾಸ್ತವದಲ್ಲಿ ಕನಸಾದದ್ದು
ಇದ್ದಕ್ಕಿದ್ದಂತೆ ಹೀಗೆ
ಎದುರಾದರೆ ಹೇಗೆ?

ಎಲ್ಲದರ ಕೊನೆಯೋ?
ಹೊಸದರ ಪ್ರಾರಂಭವೋ?
ಅಂತೂ ಯಾವುದೋ ಸಿದ್ಧವಿಲ್ಲದಲ್ಲಿ
ಬಂದುಬಿಡಬಹುದೇ ಹೀಗೆ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...