ಪ್ರತಿದಿನ ಬೆಳಗ್ಗೆ
ಕನ್ನಡಿಯೊಳಗೆ ನನ್ನದೆ ದರ್ಶನ
ಹೊರಡುವ ಅವಸರ
ಒಂದಿಷ್ಟು ಕ್ರೀಮುಬಳಿದು
ಲ್ಯಾಕ್ಮೆ ಹಚ್ಚುವಷ್ಟರಲ್ಲಿ
ಸಮಯ ಒಂಬತ್ತು
ಬಿಂದಿ ಇಡುವ ಹೊತ್ತು
ಗಳಿಗೆ ತಟಸ್ಥ ಕೈ
ಬಿಂದಿ ಇಡದೆ
ಮುಗಿಯದು ಸಿಂಗಾರ
ದೊಡ್ಡ ಬಿಂದಿ, ಚಿಕ್ಕ ಬಿಂದಿ
ನಕ್ಷತ್ರ ಬಿಂದಿ, ಉದ್ದ ಬಿಂದಿ
ಚಿತ್ತಚಿತ್ತಾರದ ಬಿಂದಿಗಳ ಕ್ಯೂ
ಯಾವುದಿಡಬೇಕೆನ್ನುವ ದ್ವಂದ್ವ
ಯಾವುದೋ ಒಂದು ಎನುವ
ನಿರ್ಲಿಪ್ತ ಮನ, ಕೊನೆಗೆತ್ತಿ
ಇಟ್ಟದ್ದೆ ದೊಡ್ಡ ಬಿಂದಿ
ಹೆಣ್ತನದ ಸಿಂಬಲ್ಲೆ,
ಗೆಳೆಯರ ಕುಚೋದ್ಯ
ನೆನಪಾಗಿ, ಕಿತ್ತು
ಮತ್ತೊಂದು, ಮಗದೊಂದು
ಮತ್ತೂ ಸ್ಥಾನಪಲ್ಲಟ
ಸ್ತ್ರೀತನದ ಸಂಕೇತವೋ
ದಾಸ್ಯದ ಪ್ರತೀಕವೋ
ಬಂಡೇಳುವ ಮನದ ಪ್ರಶ್ನೆ
ನೊಸಲಿಗಿಡುವ ಬೊಟ್ಟಿಗೇಕೆ
ಇಷ್ಟೆಲ್ಲಾ ವ್ಯಾಖ್ಯೆ
ಛೇ, ಇಂದು ಬಸ್ಸು ಮಿಸ್ಸು
*****
Related Post
ಸಣ್ಣ ಕತೆ
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…