ಪ್ರತಿದಿನ ಬೆಳಗ್ಗೆ
ಕನ್ನಡಿಯೊಳಗೆ ನನ್ನದೆ ದರ್ಶನ
ಹೊರಡುವ ಅವಸರ
ಒಂದಿಷ್ಟು ಕ್ರೀಮುಬಳಿದು
ಲ್ಯಾಕ್ಮೆ ಹಚ್ಚುವಷ್ಟರಲ್ಲಿ
ಸಮಯ ಒಂಬತ್ತು
ಬಿಂದಿ ಇಡುವ ಹೊತ್ತು
ಗಳಿಗೆ ತಟಸ್ಥ ಕೈ
ಬಿಂದಿ ಇಡದೆ
ಮುಗಿಯದು ಸಿಂಗಾರ
ದೊಡ್ಡ ಬಿಂದಿ, ಚಿಕ್ಕ ಬಿಂದಿ
ನಕ್ಷತ್ರ ಬಿಂದಿ, ಉದ್ದ ಬಿಂದಿ
ಚಿತ್ತಚಿತ್ತಾರದ ಬಿಂದಿಗಳ ಕ್ಯೂ
ಯಾವುದಿಡಬೇಕೆನ್ನುವ ದ್ವಂದ್ವ
ಯಾವುದೋ ಒಂದು ಎನುವ
ನಿರ್ಲಿಪ್ತ ಮನ, ಕೊನೆಗೆತ್ತಿ
ಇಟ್ಟದ್ದೆ ದೊಡ್ಡ ಬಿಂದಿ
ಹೆಣ್ತನದ ಸಿಂಬಲ್ಲೆ,
ಗೆಳೆಯರ ಕುಚೋದ್ಯ
ನೆನಪಾಗಿ, ಕಿತ್ತು
ಮತ್ತೊಂದು, ಮಗದೊಂದು
ಮತ್ತೂ ಸ್ಥಾನಪಲ್ಲಟ
ಸ್ತ್ರೀತನದ ಸಂಕೇತವೋ
ದಾಸ್ಯದ ಪ್ರತೀಕವೋ
ಬಂಡೇಳುವ ಮನದ ಪ್ರಶ್ನೆ
ನೊಸಲಿಗಿಡುವ ಬೊಟ್ಟಿಗೇಕೆ
ಇಷ್ಟೆಲ್ಲಾ ವ್ಯಾಖ್ಯೆ
ಛೇ, ಇಂದು ಬಸ್ಸು ಮಿಸ್ಸು
*****
Related Post
ಸಣ್ಣ ಕತೆ
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಕನಸು ದಿಟವಾಯಿತು
ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…