Home / ಕವನ / ಕವಿತೆ / ಭಗ್ನ ಹೃದಯ

ಭಗ್ನ ಹೃದಯ

ತ್ರಿಪುರ ದಹನವದಾಯ್ತು ಲಂಕೆಯನು ಸುಟ್ಟಾಯ್ತು
ಎನಿತೆನಿತೊ ರಾಜ್ಯಗಳು ಭಷ್ಮವಾದೊ!
ಚಾರಿತ್ರ್‍ಯ ಲೇಖಕನ ಅಂಕೆಸಂಕೆಗಳೆಲ್ಲ
ತೋರುವುವು ಭಸ್ಮಾಸುರ ಮಹತ್ವವ!!

ಯಾರ ಕಾಣಿಪುದೆಂತು, ಯಾರು ನೋಡುವರೆಂತು
ಬೆಂದ ಹೃದಯದ ತಾಪ-ಶೂಲಭೂತ!
ಜೀವಧಾರಣನಾತ ಭವ್ಯಜೀವಿಯು ನೋಡೆ
ಫಲಿತ ಫಲದೊಳಗಿರುವ ಹುಳದ ರೂಪ.

ಘೋರ ಕಾನನದಲ್ಲಿ ಪ್ರಕೃತಿ ದೇವಿಯ ವಾಸ,
ಸೊಗಸಿನಾಗರ, ಹಸುರು ಬೀಡು ಕಾಡು
ಕಾನನದ ನಡುದಾರಿ ಸರ್ಪಗಳ ಆವಾಸ
ಸೊಗಸು ಬನ ಹೃದಯದಾ ರೀತಿ ಎಂತೊ!

ರಾಜ ಬೀದಿಯು ನೋಡೆ, ಭವ್ಯ ಮಂದಿರ ಸಾಲು
ನಾಗರಿಕರಾಂತಂತ ದಳಿತ ಜನವೊ!
ಆದರೊಂದು ನಡುವಲ್ಲಿ ವಿಟಜನರ ವ್ಯವಹಾರ
ಕಟುಕರಲ್ಲಲ್ಲಿ ನೋಡೆ-ಸುಖವಿದೆಂತೊ!

ಮುಗುಳುನಗೆ ಮುಖದಲ್ಲಿ ಒಯ್ಯಾರ ತನುವಿನಲಿ
ಅಟ್ಟಹಾಸದ ನಡೆಯು, ತೇಜ ಪೂಜ್ಯ-
ತನ್ನೊಂದು ಭಗ್ನತೆಯ ಆತನಲ್ಲದೆ ಯಾರು
ಅಳೆದು ನೋಡಲು ಸಾಧ್ಯ-ತಿಳಿಯೆ ನಿಜವ!

ಎಲ್ಲೆರೆಲ್ಲರ ನೆಚ್ಚಿ ತನ್ನ ತನ್ನವರೆಂದು
ನಿರಾಶೆ ಜಾಲದ ಜಾಡ್ಯದೊಳ ನುಗ್ಗಿ ಬಗ್ಗಿ;
ಭಗ್ನ ಹೃದಯದ ತಾಪ ಬೆಂದ ದೇಹದ ರೂಪ
ಯಾರೊಡನೆ ಪೇಳಲದೊ, ಕೇಳ್ವರಾರೊ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...