Home / ಕವನ / ಕವಿತೆ / ಭಗ್ನ ಹೃದಯ

ಭಗ್ನ ಹೃದಯ

ತ್ರಿಪುರ ದಹನವದಾಯ್ತು ಲಂಕೆಯನು ಸುಟ್ಟಾಯ್ತು
ಎನಿತೆನಿತೊ ರಾಜ್ಯಗಳು ಭಷ್ಮವಾದೊ!
ಚಾರಿತ್ರ್‍ಯ ಲೇಖಕನ ಅಂಕೆಸಂಕೆಗಳೆಲ್ಲ
ತೋರುವುವು ಭಸ್ಮಾಸುರ ಮಹತ್ವವ!!

ಯಾರ ಕಾಣಿಪುದೆಂತು, ಯಾರು ನೋಡುವರೆಂತು
ಬೆಂದ ಹೃದಯದ ತಾಪ-ಶೂಲಭೂತ!
ಜೀವಧಾರಣನಾತ ಭವ್ಯಜೀವಿಯು ನೋಡೆ
ಫಲಿತ ಫಲದೊಳಗಿರುವ ಹುಳದ ರೂಪ.

ಘೋರ ಕಾನನದಲ್ಲಿ ಪ್ರಕೃತಿ ದೇವಿಯ ವಾಸ,
ಸೊಗಸಿನಾಗರ, ಹಸುರು ಬೀಡು ಕಾಡು
ಕಾನನದ ನಡುದಾರಿ ಸರ್ಪಗಳ ಆವಾಸ
ಸೊಗಸು ಬನ ಹೃದಯದಾ ರೀತಿ ಎಂತೊ!

ರಾಜ ಬೀದಿಯು ನೋಡೆ, ಭವ್ಯ ಮಂದಿರ ಸಾಲು
ನಾಗರಿಕರಾಂತಂತ ದಳಿತ ಜನವೊ!
ಆದರೊಂದು ನಡುವಲ್ಲಿ ವಿಟಜನರ ವ್ಯವಹಾರ
ಕಟುಕರಲ್ಲಲ್ಲಿ ನೋಡೆ-ಸುಖವಿದೆಂತೊ!

ಮುಗುಳುನಗೆ ಮುಖದಲ್ಲಿ ಒಯ್ಯಾರ ತನುವಿನಲಿ
ಅಟ್ಟಹಾಸದ ನಡೆಯು, ತೇಜ ಪೂಜ್ಯ-
ತನ್ನೊಂದು ಭಗ್ನತೆಯ ಆತನಲ್ಲದೆ ಯಾರು
ಅಳೆದು ನೋಡಲು ಸಾಧ್ಯ-ತಿಳಿಯೆ ನಿಜವ!

ಎಲ್ಲೆರೆಲ್ಲರ ನೆಚ್ಚಿ ತನ್ನ ತನ್ನವರೆಂದು
ನಿರಾಶೆ ಜಾಲದ ಜಾಡ್ಯದೊಳ ನುಗ್ಗಿ ಬಗ್ಗಿ;
ಭಗ್ನ ಹೃದಯದ ತಾಪ ಬೆಂದ ದೇಹದ ರೂಪ
ಯಾರೊಡನೆ ಪೇಳಲದೊ, ಕೇಳ್ವರಾರೊ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ