Home / ಕವನ / ಕವಿತೆ / ರೊಕ್ಕದ ರೇಸು

ರೊಕ್ಕದ ರೇಸು

ರೊಕ್ಕದ ರೇಸು ಹೊಂಟೈತೆ ತಗೊ
ಸಿಕ್ಕಿದ ದಾರಿಯೆ ಹಿಡಿದೈತೆ

ನನಗೇ ತನಗೇ ಎನ್ನುತ ನುಗ್ಗಿದೆ
ಬಾಚುತ ದೋಚುತ ಗಳಿಸುತ ಬಲಿಯುತ
ಓಡಲಾಗದೇ ಕಂಗೆಟ್ಟವರನು
ತೊತ್ತಳ ತುಳಿಯುತ ಸಾಗೈತೆ

ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ
ಗೂಡು ಇಲ್ಲದೆ ಪಾಡು ಇಲ್ಲದೆ
ನರಳುವ ಮಂದಿ ಹೊರಳಾಡೈತೆ
ತುಳಿಯುವ ಕಾಲಾಗೆ ಬಿದ್ದೈತೆ

ರೊಕ್ಕದ ದಾರ್ಯಾಗೆ ಕರುಣೆಯು ಬತ್ತೈತೆ
ಹೃದಯವು ಕೊರಡೇ ಆಗೈತೆ
ಮಾನವೀಯತೆಯು ಕೊಳಚೆಯ ಸೇರಿದೆ
ಸವಕಲು ನಾಣ್ಯ ಆಗೈತೆ

ನ್ಯಾಯ ನೀತಿಗಳು ಪ್ರೀತಿ ಮಮತೆಗಳು
ಭಾವುಕ ಭ್ರಮೆಗಳ ಗೊಣಗಾಟ
ದೇಶ ಭಕ್ತಿಯೋ ಕವಿಗಳ ರೋಗ
ರೊಕ್ಕದ ಮುಂದೇ ಹುಡುಗಾಟ

ತಾಯಿಯೆ ಆಗಲಿ ತಂದೆಯೆ ಆಗಲಿ
ರೊಕ್ಕದ ಮುಂದೇ ಮುದಿಹದ್ದು
ಅಣ್ಣ ತಮ್ಮಂದಿರು ಅಕ್ಕ ತಂಗಿಯರು
ಮಾತಾಡಿಸಿದರೆ ವಿಷಮದ್ದು

ಸುತ್ತಲ ಜಗತ್ತು ಕಾಣದ ಹಾಂಗೆ
ಕುರುಡನ ಮಾಡುವುದೀ ರೊಕ್ಕ
ದೀನ ವಾಣಿಗಳು ಕೇಳಿಸದ್ಹಾಂಗೆ
ಕಿವುಡನ ಮಾಡುವುದೀ ರೊಕ್ಕ

ಕೋಮಲ ಭಾವನೆ ಮುಟ್ಟದ ಹಾಂಗೆ
ಕೊರಡುಗಟ್ಟಸುವುದೀ ರೂಕ್ಕ
ಎಲ್ಲರ ಸೌಖ್ಯದ ಆದರ್ಶಗಳನು
ತರಗೆಲೆ ಮಾಡುವುದೀ ರೊಕ್ಕ

ನೆಲೆಯೇ ಇಲ್ಲದವರೆಷ್ಟೇ ಇರಲಿ
ನನ್ನ ಸೈಟುಗಳೂರೂರಲ್ಲಿ
ಕಾಲಲ್ಲಿ ನಡೆವರ ಖರ್ಮಗಳಿರಲಿ
ಹಾರುವೆ ನಾ ಕಾರುಗಳಲ್ಲಿ

ಕಾಸಿಗು ಗತಿಯಿಲ್ಲದ ಕೋಟಿ ಜನ
ಕೋಟಿ ಕೋಟಿಗಳು ನನಗಿರಲಿ
ಚಳಿ ಬಿಸಿಲುಗಳಲ್ಲಿ ಒದ್ದಾಡುವ ಜನ
ಏರ್ ಕಂಡಿಷನ್ನು ಮನೆಯಿರಲಿ

ನೌಕರಿಗಾಗಿ ಲಕ್ಷ ಲಕ್ಷಗಳು
ಕೊಡುವೆನು ನನಗೇನಿಲ್ಲ ಭಯ
ವರದಕ್ಷಣೆಗೋ ಎಷ್ಟು ಲಕ್ಷಗಳು
ಕೇಳಲು ನಾಚಿಕೆ ಏಕಯ್ಯ

ಹರಕು ಬಟ್ಟೆಗಳ ಮಕ್ಕಳ ಮುಂದೆ
ನನ್ನ ಮಗಳ ಬರ್ಥ್‌ಡೇ ಪಾರ್ಟಿ
ವಿಧವಿಧ ತಿಂಡಿ ಷೋಕೀ ಮಂದೀ
ಕಣ್ಣುಕುಕ್ಕುಬೇಕು ಈಪಾಟಿ

ಊರಿಗೇ ಊರೇ ನಿಂತು ನೋಡುವುದು
ರೊಕ್ಕುಳ್ಳ ನಮ್ಮ ಮದುವೆಗಳ
ಸಾವಿರಗಟ್ಟಲೆ ತಿಂದೆಂಜಲದೆಲೆ
ಮುತ್ತಬೇಕು ತಿರುಕರ ಜಗಳ

ರೊಕ್ಕ ಮಾಡುವುದು ಒಂದೇ ಮಂತ್ರ
ರೊಕ್ಕ ಗಳಿಸುವುದೆ ನಮ ತಂತ್ರ
ರೊಕ್ಕವಿದ್ದವನೆ ಮನುಷ್ಯ ಲೋಕದಿ
ಇಲ್ಲದವನೆ ಹೆಣ ಅತಂತ್ರ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...