ಸಂಚಲನ

ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ
ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ?
ಈ ಗಿಡಗಳು ಬಾಡಿ ಬರಲಾಗಿವೆ
ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ
ಸಫಲವಾಗುವುದು ಹೇಗೆ?

ಮಾನವರ ನಡುವೆ ಗೋಡೆ ಗೋಡೆಗಳು
ಸಂದುಗೊಂದುಗಳಲ್ಲೇ ನೋಟಗಳು
ಇವನೆಲ್ಲ ಕೆಡವಿ ಎಲ್ಲರೂ ಒಂದೇ
ಆಕಾಶ ನೋಡುತ್ತ ಬಯಲಲ್ಲಿ ಹಾಡುತ್ತ
ಕುಣಿಯುವಂತೆ ಮಾಡುವುದು ಹೇಗೆ?

ಈ ಬಂಡಿ ಮುಂದೆ ಹೋಗಲೇ ಒಲ್ಲದು
ಎತ್ತುಗಳು ನೆಲಕಚ್ಚಿ ಬಿದ್ದಿದೆ
ಇವುಗಳ ಬಾಲ ತಿರುವಿ ಮೇಲಕ್ಕೆಬ್ಬಿಸಿ
ಬಂಡಿ ಮುಂದೆ ಹೋಗಲು
ಎಳೆಯುವಂತೆ ಮಾಡುವುದು ಹೇಗೆ?

ಈ ಕಣ್ಣುಗಳು ಮತ ಧರ್ಮಗಳ
ಬಣ್ಣ ಗಾಜುಗಳಿಂದ ಅಲಂಕೃತವಾಗಿವೆ
ನೋಡಿದ್ದೆಲ್ಲ ಬಣ್ಣ ಬಣ್ಣ
ಗಾಜುಗಳ ಒಡೆದು ವರ್ಣರಹಿತವಾದ
ನಿಜ ಮಾನವನ ಎದೆಯಾಗಸವ
ನೋಡುವಂತೆ ಮಾಡುವುದು ಹೇಗೆ?

ಈ ಬಳ್ಳಿಗಳು ಅಲ್ಲಲ್ಲಿಗೆ ಅಲ್ಲಲ್ಲಿಗೆ
ಮುರುಟಿಕೊಂಡು ಸಂದುಗೊಂದುಗಳಲ್ಲಿ
ತೂರಿಕೊಳ್ಳುತ್ತಿವೆ ಕತ್ತಲಲ್ಲೇ ಸುತ್ತುತ್ತಿವೆ
ಇವು ಗಾಳಿ ಬೆಳಕುಗಳಿಗೆ
ಚಾಚಿಕೊಂಡು ಅಗಲ ಉದ್ದವಾಗಿ
ಹಬ್ಬುವಂತೆ ಮಾಡುವುದು ಹೇಗೆ?

ಈ ಹುಳುಗಳು ತಮ್ಮ ಸುತ್ತಲೇ ಸುತ್ತುತ್ತ
ತಮ್ಮ ಬಾಲಗಳ ತಾವೇ ನುಂಗುತ್ತ
ಒದ್ದಾಡುವುದ ಬಿಡಿಸಿ
ಮೈಸೆಟಸಿ ನೆಟ್ಟಗೆ ಮುಂದಕ್ಕೆ
ಸಾಗುವಂತೆ ಮಾಡುವುದು ಹೇಗೆ?

ಬಕಪಕ್ಷಿಗಳು ತೇಲುಗಣ್ಣು ಮಾಡಿಕೊಂಡು
ಗದ್ದುಗೆಯೇರಿ ಕುಳಿತುಕೊಂಡು
ಮೇಲುಮೇಲಕ್ಕೆ ಕೈ ಮಾಡಿ ಗುಂಡಿಗಳಲ್ಲಿ
ಎಲ್ಲ ಮೀನುಗಳ ಬಳಿಗೆ ಸೇರಿಸಿಕೊಂಡು
ತೇಲಾಡುವಂತೆ ಮಾಡುತ್ತಿವೆ
ಅವುಗಳನ್ನು ಬಿಡಿಸಿ ಹಾಯಾಗಿ
ಸಾಗರದಪಾರ ತಿಳಿ ಜಲದ ಮೇಲೆ
ಲೀಲಾಜಾಲವಾಗಿ ಈಜಾಡುವಂತೆ
ಮಾಡುವುದು ಹೇಗೆ?

ಕಟ್ಟಿದ ಸಂಕೋಲೆಗಳಿಂದ
ಕೆಸರೂಳಗೆ ಕಾಲುಗಳ ಕೀಳಲಾರದೆ
ಕೀಳಲು ಸೆಣಸಾಡುತ್ತ ಎಳೆದಾಡುವ
ಈ ಪ್ರಾಣಿಗಳ ಬೇಡಿಗಳ ಬಿಡಿಸಿ
ಗಟ್ಟಿ ನೆಲದ ಮೇಲೆ
ಓಡಾಡುವಂತೆ ಮಾಡುವುದು ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಂಚ
Next post ವೈದೇಹಿ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys