Home / ಕವನ / ಕವಿತೆ / ಸಾಮಾನ್ಯ

ಸಾಮಾನ್ಯ

ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ!
ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ,
ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು,
ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ
ಒಂದೊಂದೇ ಕಂಡಿ, ಒಂದೊಂದೇ ಗುಳ್ಳೆ, ಒಂದೊಂದೇ ಹುಳುಕು,
ಈಟೀಟಗಲ ಬೆಳೆದು ಕಣ್ಬಿಡುತಾವೆ
ಬೆಳ್ಳಗಿದ್ದ ಬೆಳದಿಂಗಳ ಮೈಮನಸೆಲ್ಲಾ
ಕರೀ ನೆಳ್ಳು ತ್ಯಾಪಿ ಹಚಿಗೆಂಡು ಮುಚಿಗೆಂಡು
ಎಂಥೆಂಥದೋ ಮಾಡರ್ನ್ ಆರ್ಟಾಗಿ ಅರ್ಥಹೀನಾಗ್ತಾವೆ
ಯಾವ್ಯಾವೊ ಹಗ್ಗಾ ಅತ್ತಾಗಿತ್ತಾಗ ಜಗ್ಗಿ
ಈ ಗೊಂಬೀನ ಅಷ್ಟಾವಕ್ರ ಮಾಡ್ತಾವೆ
ಸುತ್ತು ನೂರೆಂಟು ಸೆಳೆದಾರಗಳ ಮಧ್ಯದ ಗೂಟದಂಗೆ
ಕೆಸರಾಗಿನ ಮಣ್ಣಿನಗೊಂಬಿ ಅತ್ತಾಗೆ ಇತ್ತಾಗೆ ಅಂತ
ಪರಿಣಾಮದ ಕಲೆಗಳನ್ನ ಹೊಸದಾಗಿ ಜೋಡಿಸಿಕೊಂತಾತೆ
ಉಬ್ತದೆ, ಕುಗ್ತದೆ, ಹಬ್ತದೆ, ಆದರೂ
ತಂದೇ ಒಂದ ರೀತಿ ಮಕಾ ಮಾಡಿಕೆಂಡು ನಿಲ್ತದೆ
ನಿಂತೇ ಇರ್ತದೆ ಬೀಳೋವರೆಗೆ
ಆ ತಾಯಿ ಈ ತಾಯಿ ಮುತ್ತೈದೇರ ಮಗಾ
ಅನ್ನದೆಲ್ಲಾ ಸುಳ್ಳಾಗಿ ಎಷ್ಟೆಷ್ಟ ಮಂದಿ ಹಾದರದಾಗ
(ಆಹಾರದಾಗ), ಒಂದು ಅಶ್ಲೀಲ ಮುದ್ಯಾಗಿ
ಕರಗಿ ಹೋಗ್ತದೆ, ಎಂದೆಂದಿಗೊ ಬಂದ
ಈ ಕೊಚ್ಚೆ ರೊಚ್ಚೆ ಹೊಳಿಯಾಗೆ
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...