Home / ಕವನ / ಕವಿತೆ / ಸಾಮಾನ್ಯ

ಸಾಮಾನ್ಯ

ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ!
ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ,
ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು,
ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ
ಒಂದೊಂದೇ ಕಂಡಿ, ಒಂದೊಂದೇ ಗುಳ್ಳೆ, ಒಂದೊಂದೇ ಹುಳುಕು,
ಈಟೀಟಗಲ ಬೆಳೆದು ಕಣ್ಬಿಡುತಾವೆ
ಬೆಳ್ಳಗಿದ್ದ ಬೆಳದಿಂಗಳ ಮೈಮನಸೆಲ್ಲಾ
ಕರೀ ನೆಳ್ಳು ತ್ಯಾಪಿ ಹಚಿಗೆಂಡು ಮುಚಿಗೆಂಡು
ಎಂಥೆಂಥದೋ ಮಾಡರ್ನ್ ಆರ್ಟಾಗಿ ಅರ್ಥಹೀನಾಗ್ತಾವೆ
ಯಾವ್ಯಾವೊ ಹಗ್ಗಾ ಅತ್ತಾಗಿತ್ತಾಗ ಜಗ್ಗಿ
ಈ ಗೊಂಬೀನ ಅಷ್ಟಾವಕ್ರ ಮಾಡ್ತಾವೆ
ಸುತ್ತು ನೂರೆಂಟು ಸೆಳೆದಾರಗಳ ಮಧ್ಯದ ಗೂಟದಂಗೆ
ಕೆಸರಾಗಿನ ಮಣ್ಣಿನಗೊಂಬಿ ಅತ್ತಾಗೆ ಇತ್ತಾಗೆ ಅಂತ
ಪರಿಣಾಮದ ಕಲೆಗಳನ್ನ ಹೊಸದಾಗಿ ಜೋಡಿಸಿಕೊಂತಾತೆ
ಉಬ್ತದೆ, ಕುಗ್ತದೆ, ಹಬ್ತದೆ, ಆದರೂ
ತಂದೇ ಒಂದ ರೀತಿ ಮಕಾ ಮಾಡಿಕೆಂಡು ನಿಲ್ತದೆ
ನಿಂತೇ ಇರ್ತದೆ ಬೀಳೋವರೆಗೆ
ಆ ತಾಯಿ ಈ ತಾಯಿ ಮುತ್ತೈದೇರ ಮಗಾ
ಅನ್ನದೆಲ್ಲಾ ಸುಳ್ಳಾಗಿ ಎಷ್ಟೆಷ್ಟ ಮಂದಿ ಹಾದರದಾಗ
(ಆಹಾರದಾಗ), ಒಂದು ಅಶ್ಲೀಲ ಮುದ್ಯಾಗಿ
ಕರಗಿ ಹೋಗ್ತದೆ, ಎಂದೆಂದಿಗೊ ಬಂದ
ಈ ಕೊಚ್ಚೆ ರೊಚ್ಚೆ ಹೊಳಿಯಾಗೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...