ದಾರಿ ಬಿಡಿರೋ

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ
ಹುಲಿಕರಡಿಗಳಂತೆ ಹೆದರಿಸಬೇಡಿ
ಮರಿಗಿಳಿಯಂತಿವನು
ಕತ್ತಿ ಬಡಿಗೆಗಳನಾಡಿಸಬೇಡಿ
ಬಳ್ಳಿ ಚಿಗುರಿನಂತಿವನು
ಮುಳ್ಳು ಕಲ್ಲುಗಳ ಹರವಬೇಡಿ,
ಹೂಪಾದ ಇವನವು
ಕೋಲಾಹಲದಲೆಯಪ್ಪಳಿಸಬೇಡಿ
ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು
ಉರಿಮಾರಿಯ ಮೆರವಣಿಗೆ ಮಾಡಬೇಡಿ,
ಮರಣದಾಚೆ ನೋಡಿ ಬಂದವನಿವನು
ಅಸಂಬದ್ಧ ಪ್ರೇತಕುಣಿತ ಕುಣಿಯಬೇಡಿ
ಸಹಜನಾಟ್ಯದೊಲೆದಾಡಿದ ಮೈ ಇವನದು
ಅಸಂಗತ ಸಂಗೀತವನರಚಬೇಡಿ,
ದಿವ್ಯಗಾನಕೆ ದನಿಗೂಡಿಸಿ ಹದ್ದಾದವನಿವನು
ನೂರಾರು ಹಗ್ಗಗಳಿಂದ ಬಂಧಿಸಬೇಡಿ,
ಸ್ವಚ್ಛಂದ ಲೀಲೆ ಇವನದು
ಮಾತಿನ ಮೋಡಿಯಲ್ಲಿ ಮುಚ್ಚಬೇಡಿ,
ಮೌನದ ಗವಿಯ ಹೊಕ್ಕು ಬಂದವನಿವನು
ಹೆಣ್ಣಕುಣಿಸಿ ನೋಟ ಕೂಟ ಕಟಿಸೂತ್ರಗಳಿಂದ ಕಟ್ಟಬೇಡಿ
ಬೇರಿನ ಬಿಳಿಹೂವ ನೆತ್ತಿಗೇರಿಸಿ ಮೂಸಿ
ಬಳ್ಳಿ ಬಂಧಕೆಡೆಯಾಗದೆ ಬಯಲಾಡುವನಿವನು
ಇವನು ಪರದವನಾದರೂ ಪರಕೀಯನಲ್ಲ
ನಮ್ಮವನೇ, ದಾರಿ ಬಿಡಿ
ನಿಮ್ಮ ಹತ್ತಿಕ್ಕಿ ಭಂಗಿಸಿ ಸ್ವಂತ ದಾರಿ ಬಿಡಿಸಿಕೊಳ್ಳುವವರೆಗೆ
ಬೇಡ ಬಿಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕೀಯ
Next post ಅಮ್ಮ ಹೇಳಿದ್ದು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys