ಕವಿತೆಯೆಂದರೆ…

ಕವಿತೆಯೆಂದರೆ…
ಪದ, ಹದ, ಮುದ, ಮಾತು
ಮಾತಿಗೂ ಮಿಗಿಲು ಮುಗಿಲು.
ನಿಗೂಢ ಬಯಲು
ಬಟ್ಟ ಬಯಲು
ಹೊಳೆ ಹೊಳೆವ
ಶಿವನ ಅಲುಗು.

ಕವಿತೆಯೆಂದರೆ…
ಕಂಬಳದ ಕಸರತ್ತು
ಅಮ್ಮನ ಕೈ ತುತ್ತು
ಮಗುವಿನ ಮುತ್ತು
ಮತ್ತು, ಗಮ್ಮತ್ತು
ಶಬ್ದಗಳ ಕರಾಮತ್ತು
ಉಸ್ತಾದನ ಹಣೆ ಮೇಲಿನ ಬೆವರು!

ಕವಿತೆಯೆಂದರೆ…
ಕವಿಗೆ ಗೊತ್ತು
ಗುಡ್‌ಡೇ ಬಿಸ್ಕತ್ತು!
ಉಟ್ಟು ಬೈಕ್!
ನಾಕ, ನರಕ, ವಿಸ್ಮಯ…
ಶಬ್ದಗಳ ಸರಕು!
ಅಲ್ಪಸ್ವಲ್ಪ
ಕಪೋಲ ಕಲ್ಪಿತ
ಕನಿಕರಕ್ಕೆ ಉದುರಿದ ಫನ್ನೀರು.
ಇಬ್ಬನಿ ಸಾಲೆ
ಬೆವರಿನ ಮಾಲೆ.

ಕವಿತೆಯೆಂದರೆ…
ಹೆಣ್ಣು.
ಜಗದ ಕಣ್ಣು.
ಮಾಗಿದ, ಮಾವಿನ ಹಣ್ಣು.
ಜಗಮಗಿಸುವ ಬೆಂಕಿಚೆಂಡು!
ಹದಿಹರೆಯದ ಗಂಡು.
ಸಿಡಿ ಗುಂಡು.
ಚಂದ್ರ, ಸೂರ್‍ಯ, ಮಳೆ, ಗಾಳಿ, ಆಲಿಕಲ್ಲು,
ಗುಡುಗು, ಸಿಡಿಲು, ಮುಂಗಾರಿನ ಮಿಂಚು!
ಇಂದ್ರಚಾಪ!
ಹೇಳದ, ತಾಳದ ಬೇಗುದಿ!
ಜೀವ ಜಗತ್ತಿನ ಪರಿತಾಪ!

ಕವಿತೆಯೆಂದರೆ…
ಕಂದಮ್ಮನ ಮುಗ್ಧನೋಟ.
ಕೆಂದಾವರೆ ತೋಟ.
ಕನ್ನಡಿಯ ಮೈಮಾಟ.
ವಸಂತ ಕೋಗಿಲೆ ಗಾನಽಽ…
ಈ ನೆಲದ ತಾನಽಽ…
ನಮ್ಮೂರು ಕೇರಿಯ ಸವಿಗಾನ!
ಶ್ರಮದಾನ!
ಸವಿಯ ಸಾಲು!

ಕವಿತೆಯೆಂದರೆ:
ಕವಿಯ ಜಾಣ್ಮೆ, ರಕ್ತ ಮಾಂಸ!
ಅಭಿವ್ಯಕ್ತಿ, ಭಾವನೆ, ಉಸಿರು!
ವಿದ್ವುತ್, ಪ್ರತಿಭೆ, ಉತ್ಪತ್ತಿ, ರಸ!

ಕವಿತೆಯೆಂದರೆ:
ಶಿವನ ಅಲಗು, ಶಂಕು, ಚಕ್ರ, ಮೃದಂಗ!
ಜನರ:
ಪ್ರತಿಬಿಂಬ, ಗತಿಬಿಂಬ, ಅವಿಷ್ಕಾರ,
ಪ್ರೀತಿ ಪ್ರೇಮದ ಅಳವಂಡ, ರಸಾಸ್ವಾದನೆ,
ರಸಗವಳ, ಶಬ್ಧ ಚಮತ್ಕಾರ, ಭಾವತ್ರೀವ್ರತೆ
ಅನುಭವಾಮೃತ, ಸಾರ ಸರ್ವಸ್ವ
ರವಿಕಾಣದ್ದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಬುದ್ಧಿ ಹಿಡಿಸೋದಿಲ್ಲ
Next post ಸುಮ್ಮನಿರು ಸಾಕು

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…