Home / ಕವನ / ಕವಿತೆ / ಕವಿತೆಯೆಂದರೆ…

ಕವಿತೆಯೆಂದರೆ…

ಕವಿತೆಯೆಂದರೆ…
ಪದ, ಹದ, ಮುದ, ಮಾತು
ಮಾತಿಗೂ ಮಿಗಿಲು ಮುಗಿಲು.
ನಿಗೂಢ ಬಯಲು
ಬಟ್ಟ ಬಯಲು
ಹೊಳೆ ಹೊಳೆವ
ಶಿವನ ಅಲುಗು.

ಕವಿತೆಯೆಂದರೆ…
ಕಂಬಳದ ಕಸರತ್ತು
ಅಮ್ಮನ ಕೈ ತುತ್ತು
ಮಗುವಿನ ಮುತ್ತು
ಮತ್ತು, ಗಮ್ಮತ್ತು
ಶಬ್ದಗಳ ಕರಾಮತ್ತು
ಉಸ್ತಾದನ ಹಣೆ ಮೇಲಿನ ಬೆವರು!

ಕವಿತೆಯೆಂದರೆ…
ಕವಿಗೆ ಗೊತ್ತು
ಗುಡ್‌ಡೇ ಬಿಸ್ಕತ್ತು!
ಉಟ್ಟು ಬೈಕ್!
ನಾಕ, ನರಕ, ವಿಸ್ಮಯ…
ಶಬ್ದಗಳ ಸರಕು!
ಅಲ್ಪಸ್ವಲ್ಪ
ಕಪೋಲ ಕಲ್ಪಿತ
ಕನಿಕರಕ್ಕೆ ಉದುರಿದ ಫನ್ನೀರು.
ಇಬ್ಬನಿ ಸಾಲೆ
ಬೆವರಿನ ಮಾಲೆ.

ಕವಿತೆಯೆಂದರೆ…
ಹೆಣ್ಣು.
ಜಗದ ಕಣ್ಣು.
ಮಾಗಿದ, ಮಾವಿನ ಹಣ್ಣು.
ಜಗಮಗಿಸುವ ಬೆಂಕಿಚೆಂಡು!
ಹದಿಹರೆಯದ ಗಂಡು.
ಸಿಡಿ ಗುಂಡು.
ಚಂದ್ರ, ಸೂರ್‍ಯ, ಮಳೆ, ಗಾಳಿ, ಆಲಿಕಲ್ಲು,
ಗುಡುಗು, ಸಿಡಿಲು, ಮುಂಗಾರಿನ ಮಿಂಚು!
ಇಂದ್ರಚಾಪ!
ಹೇಳದ, ತಾಳದ ಬೇಗುದಿ!
ಜೀವ ಜಗತ್ತಿನ ಪರಿತಾಪ!

ಕವಿತೆಯೆಂದರೆ…
ಕಂದಮ್ಮನ ಮುಗ್ಧನೋಟ.
ಕೆಂದಾವರೆ ತೋಟ.
ಕನ್ನಡಿಯ ಮೈಮಾಟ.
ವಸಂತ ಕೋಗಿಲೆ ಗಾನಽಽ…
ಈ ನೆಲದ ತಾನಽಽ…
ನಮ್ಮೂರು ಕೇರಿಯ ಸವಿಗಾನ!
ಶ್ರಮದಾನ!
ಸವಿಯ ಸಾಲು!

ಕವಿತೆಯೆಂದರೆ:
ಕವಿಯ ಜಾಣ್ಮೆ, ರಕ್ತ ಮಾಂಸ!
ಅಭಿವ್ಯಕ್ತಿ, ಭಾವನೆ, ಉಸಿರು!
ವಿದ್ವುತ್, ಪ್ರತಿಭೆ, ಉತ್ಪತ್ತಿ, ರಸ!

ಕವಿತೆಯೆಂದರೆ:
ಶಿವನ ಅಲಗು, ಶಂಕು, ಚಕ್ರ, ಮೃದಂಗ!
ಜನರ:
ಪ್ರತಿಬಿಂಬ, ಗತಿಬಿಂಬ, ಅವಿಷ್ಕಾರ,
ಪ್ರೀತಿ ಪ್ರೇಮದ ಅಳವಂಡ, ರಸಾಸ್ವಾದನೆ,
ರಸಗವಳ, ಶಬ್ಧ ಚಮತ್ಕಾರ, ಭಾವತ್ರೀವ್ರತೆ
ಅನುಭವಾಮೃತ, ಸಾರ ಸರ್ವಸ್ವ
ರವಿಕಾಣದ್ದು!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...