Home / ಕವನ / ಕವಿತೆ / ಕವಿತೆಯೆಂದರೆ…

ಕವಿತೆಯೆಂದರೆ…

ಕವಿತೆಯೆಂದರೆ…
ಪದ, ಹದ, ಮುದ, ಮಾತು
ಮಾತಿಗೂ ಮಿಗಿಲು ಮುಗಿಲು.
ನಿಗೂಢ ಬಯಲು
ಬಟ್ಟ ಬಯಲು
ಹೊಳೆ ಹೊಳೆವ
ಶಿವನ ಅಲುಗು.

ಕವಿತೆಯೆಂದರೆ…
ಕಂಬಳದ ಕಸರತ್ತು
ಅಮ್ಮನ ಕೈ ತುತ್ತು
ಮಗುವಿನ ಮುತ್ತು
ಮತ್ತು, ಗಮ್ಮತ್ತು
ಶಬ್ದಗಳ ಕರಾಮತ್ತು
ಉಸ್ತಾದನ ಹಣೆ ಮೇಲಿನ ಬೆವರು!

ಕವಿತೆಯೆಂದರೆ…
ಕವಿಗೆ ಗೊತ್ತು
ಗುಡ್‌ಡೇ ಬಿಸ್ಕತ್ತು!
ಉಟ್ಟು ಬೈಕ್!
ನಾಕ, ನರಕ, ವಿಸ್ಮಯ…
ಶಬ್ದಗಳ ಸರಕು!
ಅಲ್ಪಸ್ವಲ್ಪ
ಕಪೋಲ ಕಲ್ಪಿತ
ಕನಿಕರಕ್ಕೆ ಉದುರಿದ ಫನ್ನೀರು.
ಇಬ್ಬನಿ ಸಾಲೆ
ಬೆವರಿನ ಮಾಲೆ.

ಕವಿತೆಯೆಂದರೆ…
ಹೆಣ್ಣು.
ಜಗದ ಕಣ್ಣು.
ಮಾಗಿದ, ಮಾವಿನ ಹಣ್ಣು.
ಜಗಮಗಿಸುವ ಬೆಂಕಿಚೆಂಡು!
ಹದಿಹರೆಯದ ಗಂಡು.
ಸಿಡಿ ಗುಂಡು.
ಚಂದ್ರ, ಸೂರ್‍ಯ, ಮಳೆ, ಗಾಳಿ, ಆಲಿಕಲ್ಲು,
ಗುಡುಗು, ಸಿಡಿಲು, ಮುಂಗಾರಿನ ಮಿಂಚು!
ಇಂದ್ರಚಾಪ!
ಹೇಳದ, ತಾಳದ ಬೇಗುದಿ!
ಜೀವ ಜಗತ್ತಿನ ಪರಿತಾಪ!

ಕವಿತೆಯೆಂದರೆ…
ಕಂದಮ್ಮನ ಮುಗ್ಧನೋಟ.
ಕೆಂದಾವರೆ ತೋಟ.
ಕನ್ನಡಿಯ ಮೈಮಾಟ.
ವಸಂತ ಕೋಗಿಲೆ ಗಾನಽಽ…
ಈ ನೆಲದ ತಾನಽಽ…
ನಮ್ಮೂರು ಕೇರಿಯ ಸವಿಗಾನ!
ಶ್ರಮದಾನ!
ಸವಿಯ ಸಾಲು!

ಕವಿತೆಯೆಂದರೆ:
ಕವಿಯ ಜಾಣ್ಮೆ, ರಕ್ತ ಮಾಂಸ!
ಅಭಿವ್ಯಕ್ತಿ, ಭಾವನೆ, ಉಸಿರು!
ವಿದ್ವುತ್, ಪ್ರತಿಭೆ, ಉತ್ಪತ್ತಿ, ರಸ!

ಕವಿತೆಯೆಂದರೆ:
ಶಿವನ ಅಲಗು, ಶಂಕು, ಚಕ್ರ, ಮೃದಂಗ!
ಜನರ:
ಪ್ರತಿಬಿಂಬ, ಗತಿಬಿಂಬ, ಅವಿಷ್ಕಾರ,
ಪ್ರೀತಿ ಪ್ರೇಮದ ಅಳವಂಡ, ರಸಾಸ್ವಾದನೆ,
ರಸಗವಳ, ಶಬ್ಧ ಚಮತ್ಕಾರ, ಭಾವತ್ರೀವ್ರತೆ
ಅನುಭವಾಮೃತ, ಸಾರ ಸರ್ವಸ್ವ
ರವಿಕಾಣದ್ದು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...