Home / ಕವನ / ಕವಿತೆ / ಕವಿತೆಯೆಂದರೆ…

ಕವಿತೆಯೆಂದರೆ…

ಕವಿತೆಯೆಂದರೆ…
ಪದ, ಹದ, ಮುದ, ಮಾತು
ಮಾತಿಗೂ ಮಿಗಿಲು ಮುಗಿಲು.
ನಿಗೂಢ ಬಯಲು
ಬಟ್ಟ ಬಯಲು
ಹೊಳೆ ಹೊಳೆವ
ಶಿವನ ಅಲುಗು.

ಕವಿತೆಯೆಂದರೆ…
ಕಂಬಳದ ಕಸರತ್ತು
ಅಮ್ಮನ ಕೈ ತುತ್ತು
ಮಗುವಿನ ಮುತ್ತು
ಮತ್ತು, ಗಮ್ಮತ್ತು
ಶಬ್ದಗಳ ಕರಾಮತ್ತು
ಉಸ್ತಾದನ ಹಣೆ ಮೇಲಿನ ಬೆವರು!

ಕವಿತೆಯೆಂದರೆ…
ಕವಿಗೆ ಗೊತ್ತು
ಗುಡ್‌ಡೇ ಬಿಸ್ಕತ್ತು!
ಉಟ್ಟು ಬೈಕ್!
ನಾಕ, ನರಕ, ವಿಸ್ಮಯ…
ಶಬ್ದಗಳ ಸರಕು!
ಅಲ್ಪಸ್ವಲ್ಪ
ಕಪೋಲ ಕಲ್ಪಿತ
ಕನಿಕರಕ್ಕೆ ಉದುರಿದ ಫನ್ನೀರು.
ಇಬ್ಬನಿ ಸಾಲೆ
ಬೆವರಿನ ಮಾಲೆ.

ಕವಿತೆಯೆಂದರೆ…
ಹೆಣ್ಣು.
ಜಗದ ಕಣ್ಣು.
ಮಾಗಿದ, ಮಾವಿನ ಹಣ್ಣು.
ಜಗಮಗಿಸುವ ಬೆಂಕಿಚೆಂಡು!
ಹದಿಹರೆಯದ ಗಂಡು.
ಸಿಡಿ ಗುಂಡು.
ಚಂದ್ರ, ಸೂರ್‍ಯ, ಮಳೆ, ಗಾಳಿ, ಆಲಿಕಲ್ಲು,
ಗುಡುಗು, ಸಿಡಿಲು, ಮುಂಗಾರಿನ ಮಿಂಚು!
ಇಂದ್ರಚಾಪ!
ಹೇಳದ, ತಾಳದ ಬೇಗುದಿ!
ಜೀವ ಜಗತ್ತಿನ ಪರಿತಾಪ!

ಕವಿತೆಯೆಂದರೆ…
ಕಂದಮ್ಮನ ಮುಗ್ಧನೋಟ.
ಕೆಂದಾವರೆ ತೋಟ.
ಕನ್ನಡಿಯ ಮೈಮಾಟ.
ವಸಂತ ಕೋಗಿಲೆ ಗಾನಽಽ…
ಈ ನೆಲದ ತಾನಽಽ…
ನಮ್ಮೂರು ಕೇರಿಯ ಸವಿಗಾನ!
ಶ್ರಮದಾನ!
ಸವಿಯ ಸಾಲು!

ಕವಿತೆಯೆಂದರೆ:
ಕವಿಯ ಜಾಣ್ಮೆ, ರಕ್ತ ಮಾಂಸ!
ಅಭಿವ್ಯಕ್ತಿ, ಭಾವನೆ, ಉಸಿರು!
ವಿದ್ವುತ್, ಪ್ರತಿಭೆ, ಉತ್ಪತ್ತಿ, ರಸ!

ಕವಿತೆಯೆಂದರೆ:
ಶಿವನ ಅಲಗು, ಶಂಕು, ಚಕ್ರ, ಮೃದಂಗ!
ಜನರ:
ಪ್ರತಿಬಿಂಬ, ಗತಿಬಿಂಬ, ಅವಿಷ್ಕಾರ,
ಪ್ರೀತಿ ಪ್ರೇಮದ ಅಳವಂಡ, ರಸಾಸ್ವಾದನೆ,
ರಸಗವಳ, ಶಬ್ಧ ಚಮತ್ಕಾರ, ಭಾವತ್ರೀವ್ರತೆ
ಅನುಭವಾಮೃತ, ಸಾರ ಸರ್ವಸ್ವ
ರವಿಕಾಣದ್ದು!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...