Home / ಕವನ / ಕವಿತೆ / ಪ್ರತಿಮೆಯಾದರು

ಪ್ರತಿಮೆಯಾದರು

ಯಾರಿಗೂ ಕೇಳಿಲ್ಲ
ಹೇಳಿಲ್ಲ
ನಿಂತ ನಿಲುವಲಿ
ಎಲ್ಲರಿಗೂ ಕಾಣುವಂತೇ…
ವಿಧಾನಸೌಧದಾ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪ್ರತಿಮೆಗೂ ಮಿಗಿಲು
ಮುಗಿಲು, ಹಗಲು-
ವಿಸ್ಮಯ ಪ್ರತಿಭೆ ಅವರದು!
ಮಲ್ಲಿಗೆ ಮನಸನು, ವಿಶಾಲ ಹೃದಯವನು…
ಕಲ್ಲು ಮಾಡಿ,
ಕೇರಿಗೆ ಸೀಮಿತ ಮಾಡಿ,
ಪ್ರತಿಮೆ ನಿಲ್ಲಿಸಿದವರು ನಾವು!!


ಸ್ವಾರ್ಥಕೆ ನಿತ್ಯ ಎಳೆ ಎಳೆ ತಂದೂ…
ಸುಮ್ಮ ಸುಮ್ಮನೆ ಹಿಗ್ಗಿಸಲೋಗಿ,
ತನ್ನ ಜನ, ತನಗೇ ಮಾನ, ಹರಾಜಾಕಿದ್ದು,
ಕೈ, ಕೈ, ಕಾಲು, ಕಾಲು, ಕನ್ನಡ್ಕ ತೆಗೆವರೆಂದೂ…
ಈ ಮೊದಲು ತಿಳಿದಿದ್ದರೆ,
ಪ್ರತಿಮೆಯಾಗುವದಾ ಬಿಟ್ಟು,
ಸ್ವರ್ಗ ಸೇರುತ್ತಿದ್ದರು…?!


ಸೂರ್‍ಯ ಕೋಟಿನ
ಬೆಳೆಕ್ಹೆಂಚು ಮಾಡಿ,
ಬಲು ಸಣ್ಣರಾದವರು
ಮೆಚ್ಚಿಸಲ್ಹೋಗಿದ್ದ ಕಂಡು-
ಹೌಹಾರಿ ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಜಗದಗಲ
ಮುಗಿಲಗಲವನು!
ಬರೀ ಕೇರಿಗೇ…
ಸೀಮಿತಗೊಳಿಸಿದ್ದಕ್ಕೆ
ಮಮ್ಮಲ ಮರುಗಿ,
ಕೊರಗಿ,
ನಿಂತಲ್ಲೇ…
ವಿಧಾನಸೌಧದಾ ಮುಂದೆ:
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪೂರ್ಣ ಮುಖಿ
ಚಂದ್ರವದನನ-
ಈ ಪುಟ್ಟ ಕನ್ನಡಿಯೊಳಗೆ,
ತೋರಿದ್ದ ಕಂಡು:
ಕೆಂಡಮಂಡಲವಾಗಿ
ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ನಮ್ಮವರು: ಮೇಲಿನವರ ಅಂಜಿಸಲು…
ಹೇಗೆಗೋ ಬಿಂಬಿಸಲ್ಹೋಗಿ…
ಸ್ವಯಂ ಪ್ರಭೆ ಅರಿದೆ,
ಬಿಂಬವ ಪ್ರತಿಬಿಂಬವಾಗಿಸಿದ್ದು ಕಂಡೂ
ಮೌನದಲಿ,
ಪ್ರತಿಮೆಯಾದರು…
ವಿಧಾನಸೌದದ ಎದುರಲ್ಲೇ…
ಈ ನಮ್ಮ ಅಂಬೇಡ್ಕರ್‍.


ಪ್ರತಿ ಹೆಜ್ಜೆ ಹೆಜ್ಜೆಗೂ…
ವಾದ, ಪ್ರತಿವಾದಕೂ…
ಈ ನಮ್ಮ ಅಂಬೇಡ್ಕರ್‍ ಬೇಕು!
ಭಾರತದ ಸಂವಿಧಾನ ಬೇಕೇ ಬೇಕು!
ಬದುಕಿದ್ದಾಗ: ಸವರ್ಣೀಯರ ಕಾಟ…
ಮೀಸಲಾತಿಯ ಪರದಾಟ…
ಬೇಸತ್ತು, ಬೌದ್ಧ ಧರ್ಮ ಸ್ವೀಕಾರ!!
ಸತ್ತಾಗ: ಈಗ ತನ್ನವರ ಕಾದಾಟ!
ಹೊಲೆ, ಮಾದಿಗನೆಂಬ ಜಗ್ಗಾಟ…
ಸಹಿಸಲಾಗದೆ… ಪ್ರತಿಮೆಯಾದರು!!
ಈಗ ಒಡೆಬಾರದಶ್ಟೇ…
ಪ್ರತಿಮೆಯನು…
ಪ್ರತಿಭೆಯನು…
ಭಾಜನು,
ಭುವಿ,
ಬೆಳಕನ್ನುಽಽ…
ಅಶ್ಟೇ…ಽಽ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...