ಪ್ರತಿಮೆಯಾದರು

ಯಾರಿಗೂ ಕೇಳಿಲ್ಲ
ಹೇಳಿಲ್ಲ
ನಿಂತ ನಿಲುವಲಿ
ಎಲ್ಲರಿಗೂ ಕಾಣುವಂತೇ…
ವಿಧಾನಸೌಧದಾ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪ್ರತಿಮೆಗೂ ಮಿಗಿಲು
ಮುಗಿಲು, ಹಗಲು-
ವಿಸ್ಮಯ ಪ್ರತಿಭೆ ಅವರದು!
ಮಲ್ಲಿಗೆ ಮನಸನು, ವಿಶಾಲ ಹೃದಯವನು…
ಕಲ್ಲು ಮಾಡಿ,
ಕೇರಿಗೆ ಸೀಮಿತ ಮಾಡಿ,
ಪ್ರತಿಮೆ ನಿಲ್ಲಿಸಿದವರು ನಾವು!!


ಸ್ವಾರ್ಥಕೆ ನಿತ್ಯ ಎಳೆ ಎಳೆ ತಂದೂ…
ಸುಮ್ಮ ಸುಮ್ಮನೆ ಹಿಗ್ಗಿಸಲೋಗಿ,
ತನ್ನ ಜನ, ತನಗೇ ಮಾನ, ಹರಾಜಾಕಿದ್ದು,
ಕೈ, ಕೈ, ಕಾಲು, ಕಾಲು, ಕನ್ನಡ್ಕ ತೆಗೆವರೆಂದೂ…
ಈ ಮೊದಲು ತಿಳಿದಿದ್ದರೆ,
ಪ್ರತಿಮೆಯಾಗುವದಾ ಬಿಟ್ಟು,
ಸ್ವರ್ಗ ಸೇರುತ್ತಿದ್ದರು…?!


ಸೂರ್‍ಯ ಕೋಟಿನ
ಬೆಳೆಕ್ಹೆಂಚು ಮಾಡಿ,
ಬಲು ಸಣ್ಣರಾದವರು
ಮೆಚ್ಚಿಸಲ್ಹೋಗಿದ್ದ ಕಂಡು-
ಹೌಹಾರಿ ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಜಗದಗಲ
ಮುಗಿಲಗಲವನು!
ಬರೀ ಕೇರಿಗೇ…
ಸೀಮಿತಗೊಳಿಸಿದ್ದಕ್ಕೆ
ಮಮ್ಮಲ ಮರುಗಿ,
ಕೊರಗಿ,
ನಿಂತಲ್ಲೇ…
ವಿಧಾನಸೌಧದಾ ಮುಂದೆ:
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪೂರ್ಣ ಮುಖಿ
ಚಂದ್ರವದನನ-
ಈ ಪುಟ್ಟ ಕನ್ನಡಿಯೊಳಗೆ,
ತೋರಿದ್ದ ಕಂಡು:
ಕೆಂಡಮಂಡಲವಾಗಿ
ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ನಮ್ಮವರು: ಮೇಲಿನವರ ಅಂಜಿಸಲು…
ಹೇಗೆಗೋ ಬಿಂಬಿಸಲ್ಹೋಗಿ…
ಸ್ವಯಂ ಪ್ರಭೆ ಅರಿದೆ,
ಬಿಂಬವ ಪ್ರತಿಬಿಂಬವಾಗಿಸಿದ್ದು ಕಂಡೂ
ಮೌನದಲಿ,
ಪ್ರತಿಮೆಯಾದರು…
ವಿಧಾನಸೌದದ ಎದುರಲ್ಲೇ…
ಈ ನಮ್ಮ ಅಂಬೇಡ್ಕರ್‍.


ಪ್ರತಿ ಹೆಜ್ಜೆ ಹೆಜ್ಜೆಗೂ…
ವಾದ, ಪ್ರತಿವಾದಕೂ…
ಈ ನಮ್ಮ ಅಂಬೇಡ್ಕರ್‍ ಬೇಕು!
ಭಾರತದ ಸಂವಿಧಾನ ಬೇಕೇ ಬೇಕು!
ಬದುಕಿದ್ದಾಗ: ಸವರ್ಣೀಯರ ಕಾಟ…
ಮೀಸಲಾತಿಯ ಪರದಾಟ…
ಬೇಸತ್ತು, ಬೌದ್ಧ ಧರ್ಮ ಸ್ವೀಕಾರ!!
ಸತ್ತಾಗ: ಈಗ ತನ್ನವರ ಕಾದಾಟ!
ಹೊಲೆ, ಮಾದಿಗನೆಂಬ ಜಗ್ಗಾಟ…
ಸಹಿಸಲಾಗದೆ… ಪ್ರತಿಮೆಯಾದರು!!
ಈಗ ಒಡೆಬಾರದಶ್ಟೇ…
ಪ್ರತಿಮೆಯನು…
ಪ್ರತಿಭೆಯನು…
ಭಾಜನು,
ಭುವಿ,
ಬೆಳಕನ್ನುಽಽ…
ಅಶ್ಟೇ…ಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಲ
Next post ನಮ್ಮೂರ ಹೋಳಿ ಹಾಡು – ೭

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…