ಪ್ರತಿಮೆಯಾದರು

ಯಾರಿಗೂ ಕೇಳಿಲ್ಲ
ಹೇಳಿಲ್ಲ
ನಿಂತ ನಿಲುವಲಿ
ಎಲ್ಲರಿಗೂ ಕಾಣುವಂತೇ…
ವಿಧಾನಸೌಧದಾ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪ್ರತಿಮೆಗೂ ಮಿಗಿಲು
ಮುಗಿಲು, ಹಗಲು-
ವಿಸ್ಮಯ ಪ್ರತಿಭೆ ಅವರದು!
ಮಲ್ಲಿಗೆ ಮನಸನು, ವಿಶಾಲ ಹೃದಯವನು…
ಕಲ್ಲು ಮಾಡಿ,
ಕೇರಿಗೆ ಸೀಮಿತ ಮಾಡಿ,
ಪ್ರತಿಮೆ ನಿಲ್ಲಿಸಿದವರು ನಾವು!!


ಸ್ವಾರ್ಥಕೆ ನಿತ್ಯ ಎಳೆ ಎಳೆ ತಂದೂ…
ಸುಮ್ಮ ಸುಮ್ಮನೆ ಹಿಗ್ಗಿಸಲೋಗಿ,
ತನ್ನ ಜನ, ತನಗೇ ಮಾನ, ಹರಾಜಾಕಿದ್ದು,
ಕೈ, ಕೈ, ಕಾಲು, ಕಾಲು, ಕನ್ನಡ್ಕ ತೆಗೆವರೆಂದೂ…
ಈ ಮೊದಲು ತಿಳಿದಿದ್ದರೆ,
ಪ್ರತಿಮೆಯಾಗುವದಾ ಬಿಟ್ಟು,
ಸ್ವರ್ಗ ಸೇರುತ್ತಿದ್ದರು…?!


ಸೂರ್‍ಯ ಕೋಟಿನ
ಬೆಳೆಕ್ಹೆಂಚು ಮಾಡಿ,
ಬಲು ಸಣ್ಣರಾದವರು
ಮೆಚ್ಚಿಸಲ್ಹೋಗಿದ್ದ ಕಂಡು-
ಹೌಹಾರಿ ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಜಗದಗಲ
ಮುಗಿಲಗಲವನು!
ಬರೀ ಕೇರಿಗೇ…
ಸೀಮಿತಗೊಳಿಸಿದ್ದಕ್ಕೆ
ಮಮ್ಮಲ ಮರುಗಿ,
ಕೊರಗಿ,
ನಿಂತಲ್ಲೇ…
ವಿಧಾನಸೌಧದಾ ಮುಂದೆ:
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪೂರ್ಣ ಮುಖಿ
ಚಂದ್ರವದನನ-
ಈ ಪುಟ್ಟ ಕನ್ನಡಿಯೊಳಗೆ,
ತೋರಿದ್ದ ಕಂಡು:
ಕೆಂಡಮಂಡಲವಾಗಿ
ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ನಮ್ಮವರು: ಮೇಲಿನವರ ಅಂಜಿಸಲು…
ಹೇಗೆಗೋ ಬಿಂಬಿಸಲ್ಹೋಗಿ…
ಸ್ವಯಂ ಪ್ರಭೆ ಅರಿದೆ,
ಬಿಂಬವ ಪ್ರತಿಬಿಂಬವಾಗಿಸಿದ್ದು ಕಂಡೂ
ಮೌನದಲಿ,
ಪ್ರತಿಮೆಯಾದರು…
ವಿಧಾನಸೌದದ ಎದುರಲ್ಲೇ…
ಈ ನಮ್ಮ ಅಂಬೇಡ್ಕರ್‍.


ಪ್ರತಿ ಹೆಜ್ಜೆ ಹೆಜ್ಜೆಗೂ…
ವಾದ, ಪ್ರತಿವಾದಕೂ…
ಈ ನಮ್ಮ ಅಂಬೇಡ್ಕರ್‍ ಬೇಕು!
ಭಾರತದ ಸಂವಿಧಾನ ಬೇಕೇ ಬೇಕು!
ಬದುಕಿದ್ದಾಗ: ಸವರ್ಣೀಯರ ಕಾಟ…
ಮೀಸಲಾತಿಯ ಪರದಾಟ…
ಬೇಸತ್ತು, ಬೌದ್ಧ ಧರ್ಮ ಸ್ವೀಕಾರ!!
ಸತ್ತಾಗ: ಈಗ ತನ್ನವರ ಕಾದಾಟ!
ಹೊಲೆ, ಮಾದಿಗನೆಂಬ ಜಗ್ಗಾಟ…
ಸಹಿಸಲಾಗದೆ… ಪ್ರತಿಮೆಯಾದರು!!
ಈಗ ಒಡೆಬಾರದಶ್ಟೇ…
ಪ್ರತಿಮೆಯನು…
ಪ್ರತಿಭೆಯನು…
ಭಾಜನು,
ಭುವಿ,
ಬೆಳಕನ್ನುಽಽ…
ಅಶ್ಟೇ…ಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಲ
Next post ನಮ್ಮೂರ ಹೋಳಿ ಹಾಡು – ೭

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…