Home / ಕವನ / ಜನಪದ / ನಮ್ಮೂರ ಹೋಳಿ ಹಾಡು – ೭

ನಮ್ಮೂರ ಹೋಳಿ ಹಾಡು – ೭

ಪತಿಯು ಮಡಿದ ಸುದ್ದಿಯು
ತಾ ರತಿಯು ಕೇಳಿದಳೋ
ಅಯ್ಯೋ ತಾ ರತಿಯು ಕೇಳಿದಳೋ
ಕ್ಷಿತಿಯೋಳು ಹೊರಳ್ವಳೋ ||ಪ||

ಅಯ್ಯೋ ಎನ್ನ ಪ್ರಾಣ ಪತಿಯೆ
ಪ್ರಾಣ ನೀಗಿದೆಯಾ
ಅಯ್ಯೋ ಪ್ರಾಣ ನೀಗಿದೆಯಾ
ಎನ್ನ ಕೈಯನಗಲಿದೆಯಾ ||೧||

ನಾ ಪ್ರೇಮದಿಂದ ಕೂಡಿದಂತೆ
ಪ್ರೀತಿ ಹೋಯಿತೆ
ಅಯ್ಯೋ ಪ್ರೀತಿ ಹೋಯಿತೆ
ರತಿ ಸುಖವು ತೀರಿತೆ ||೨||

ನಿನ್ನ ಪೋಲ್ವ ಪುರುಷರ
ಜಗದೊಳು ಇನ್ನ ಕಾಣೆನು
ಅಯ್ಯೋ ಇನ್ನೆಂತು ಕಾಂಬೆನೋ
ಎಂದಿಗೆ ಮರೆವೆನೋ ||೩||

ಲೇಸೆಂದು ತಿಳಿದು ಸಾರಿದೆತ್ತ
ಕಂಬನಿ ಮುಖವ ತೋರು
ಆ ನಿನ್ನ ಚೆಲುವ ರೂಪವಽ
ಬಾರೋ ರೂಪವ ||೪||

ಚಿತ್ರದಲ್ಲಿ ಬಾರದಿನ್ನೂ
ಮುತ್ತೈದೆ ತನವ
ಅಯ್ಯೋ ಎನ್ನ ಮುತ್ತೈದೆ ತನವ
ಉಳಿದೀತೆ ಇನ್ನೇನುವಽ ||೫||

ಈ ನತ್ತು ಮೂಗಿನೊಳಗೆ
ಮುರಿದು ಬಿತ್ತು ಭೂಮಿಗೆ
ಅಯ್ಯೋ ಬಿತ್ತಿಲ್ಲೋ ಭೂಮಿಗೆ
ಸುಳ್ಳೆಲ್ಲೋ ಕನಸಿಗೆ ||೬||

ಕಟ್ಟಿದ ಕರಿಮಣಿಯು
ತಾಳೀಯಿಟ್ಟ ವಸ್ತುವು
ಅಯ್ಯೋ ಆಯಿತು ವ್ಯರ್ಥವು
ಇನ್ನಾಯಿತು ವೃರ್ಥವೋ ||೭||

ಛೀ! ಸುಟ್ಟುಹೋಗಲಿನ್ನು
ಜನ್ಮ ಹುಟ್ಟಬಾರದು
ಇನ್ನೆಂದು ಹುಟ್ಟು ಬಾರದು ಅಯ್ಯೋ
ಎಂದಿಽಗೆ ಹೆಣ್ಣೆಂದು ||೮||

ಪ್ರಾಣ ಸಖನೆ ಹೋದೆ ಎತ್ತ
ಬಾರೋ ಎನ್ನು ತಾ
ಬಾ ಬಾರೋ
ಓಡೋಡಿ ಹುಡುಕುತಾ ||೯||

ರತಿ ರಾಣಿ ಹುಡಿಯೊಳ್ಹೊರಳಿ
ಹರಣ ಕಳೆವೆನೆನ್ನುತ
ತನ್ನ ಹರಣ ಕಳೆವೆನೆನ್ನುತ
ಬಾಯ್ಬಾಯ ಬಡಿಯುತ ||೧೦||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...