ನಮ್ಮೂರ ಹೋಳಿ ಹಾಡು – ೭

ಪತಿಯು ಮಡಿದ ಸುದ್ದಿಯು
ತಾ ರತಿಯು ಕೇಳಿದಳೋ
ಅಯ್ಯೋ ತಾ ರತಿಯು ಕೇಳಿದಳೋ
ಕ್ಷಿತಿಯೋಳು ಹೊರಳ್ವಳೋ ||ಪ||

ಅಯ್ಯೋ ಎನ್ನ ಪ್ರಾಣ ಪತಿಯೆ
ಪ್ರಾಣ ನೀಗಿದೆಯಾ
ಅಯ್ಯೋ ಪ್ರಾಣ ನೀಗಿದೆಯಾ
ಎನ್ನ ಕೈಯನಗಲಿದೆಯಾ ||೧||

ನಾ ಪ್ರೇಮದಿಂದ ಕೂಡಿದಂತೆ
ಪ್ರೀತಿ ಹೋಯಿತೆ
ಅಯ್ಯೋ ಪ್ರೀತಿ ಹೋಯಿತೆ
ರತಿ ಸುಖವು ತೀರಿತೆ ||೨||

ನಿನ್ನ ಪೋಲ್ವ ಪುರುಷರ
ಜಗದೊಳು ಇನ್ನ ಕಾಣೆನು
ಅಯ್ಯೋ ಇನ್ನೆಂತು ಕಾಂಬೆನೋ
ಎಂದಿಗೆ ಮರೆವೆನೋ ||೩||

ಲೇಸೆಂದು ತಿಳಿದು ಸಾರಿದೆತ್ತ
ಕಂಬನಿ ಮುಖವ ತೋರು
ಆ ನಿನ್ನ ಚೆಲುವ ರೂಪವಽ
ಬಾರೋ ರೂಪವ ||೪||

ಚಿತ್ರದಲ್ಲಿ ಬಾರದಿನ್ನೂ
ಮುತ್ತೈದೆ ತನವ
ಅಯ್ಯೋ ಎನ್ನ ಮುತ್ತೈದೆ ತನವ
ಉಳಿದೀತೆ ಇನ್ನೇನುವಽ ||೫||

ಈ ನತ್ತು ಮೂಗಿನೊಳಗೆ
ಮುರಿದು ಬಿತ್ತು ಭೂಮಿಗೆ
ಅಯ್ಯೋ ಬಿತ್ತಿಲ್ಲೋ ಭೂಮಿಗೆ
ಸುಳ್ಳೆಲ್ಲೋ ಕನಸಿಗೆ ||೬||

ಕಟ್ಟಿದ ಕರಿಮಣಿಯು
ತಾಳೀಯಿಟ್ಟ ವಸ್ತುವು
ಅಯ್ಯೋ ಆಯಿತು ವ್ಯರ್ಥವು
ಇನ್ನಾಯಿತು ವೃರ್ಥವೋ ||೭||

ಛೀ! ಸುಟ್ಟುಹೋಗಲಿನ್ನು
ಜನ್ಮ ಹುಟ್ಟಬಾರದು
ಇನ್ನೆಂದು ಹುಟ್ಟು ಬಾರದು ಅಯ್ಯೋ
ಎಂದಿಽಗೆ ಹೆಣ್ಣೆಂದು ||೮||

ಪ್ರಾಣ ಸಖನೆ ಹೋದೆ ಎತ್ತ
ಬಾರೋ ಎನ್ನು ತಾ
ಬಾ ಬಾರೋ
ಓಡೋಡಿ ಹುಡುಕುತಾ ||೯||

ರತಿ ರಾಣಿ ಹುಡಿಯೊಳ್ಹೊರಳಿ
ಹರಣ ಕಳೆವೆನೆನ್ನುತ
ತನ್ನ ಹರಣ ಕಳೆವೆನೆನ್ನುತ
ಬಾಯ್ಬಾಯ ಬಡಿಯುತ ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಮೆಯಾದರು
Next post ಮೇಕೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…