Home / ಕವನ / ಜನಪದ / ನಮ್ಮೂರ ಹೋಳಿ ಹಾಡು – ೭

ನಮ್ಮೂರ ಹೋಳಿ ಹಾಡು – ೭

ಪತಿಯು ಮಡಿದ ಸುದ್ದಿಯು
ತಾ ರತಿಯು ಕೇಳಿದಳೋ
ಅಯ್ಯೋ ತಾ ರತಿಯು ಕೇಳಿದಳೋ
ಕ್ಷಿತಿಯೋಳು ಹೊರಳ್ವಳೋ ||ಪ||

ಅಯ್ಯೋ ಎನ್ನ ಪ್ರಾಣ ಪತಿಯೆ
ಪ್ರಾಣ ನೀಗಿದೆಯಾ
ಅಯ್ಯೋ ಪ್ರಾಣ ನೀಗಿದೆಯಾ
ಎನ್ನ ಕೈಯನಗಲಿದೆಯಾ ||೧||

ನಾ ಪ್ರೇಮದಿಂದ ಕೂಡಿದಂತೆ
ಪ್ರೀತಿ ಹೋಯಿತೆ
ಅಯ್ಯೋ ಪ್ರೀತಿ ಹೋಯಿತೆ
ರತಿ ಸುಖವು ತೀರಿತೆ ||೨||

ನಿನ್ನ ಪೋಲ್ವ ಪುರುಷರ
ಜಗದೊಳು ಇನ್ನ ಕಾಣೆನು
ಅಯ್ಯೋ ಇನ್ನೆಂತು ಕಾಂಬೆನೋ
ಎಂದಿಗೆ ಮರೆವೆನೋ ||೩||

ಲೇಸೆಂದು ತಿಳಿದು ಸಾರಿದೆತ್ತ
ಕಂಬನಿ ಮುಖವ ತೋರು
ಆ ನಿನ್ನ ಚೆಲುವ ರೂಪವಽ
ಬಾರೋ ರೂಪವ ||೪||

ಚಿತ್ರದಲ್ಲಿ ಬಾರದಿನ್ನೂ
ಮುತ್ತೈದೆ ತನವ
ಅಯ್ಯೋ ಎನ್ನ ಮುತ್ತೈದೆ ತನವ
ಉಳಿದೀತೆ ಇನ್ನೇನುವಽ ||೫||

ಈ ನತ್ತು ಮೂಗಿನೊಳಗೆ
ಮುರಿದು ಬಿತ್ತು ಭೂಮಿಗೆ
ಅಯ್ಯೋ ಬಿತ್ತಿಲ್ಲೋ ಭೂಮಿಗೆ
ಸುಳ್ಳೆಲ್ಲೋ ಕನಸಿಗೆ ||೬||

ಕಟ್ಟಿದ ಕರಿಮಣಿಯು
ತಾಳೀಯಿಟ್ಟ ವಸ್ತುವು
ಅಯ್ಯೋ ಆಯಿತು ವ್ಯರ್ಥವು
ಇನ್ನಾಯಿತು ವೃರ್ಥವೋ ||೭||

ಛೀ! ಸುಟ್ಟುಹೋಗಲಿನ್ನು
ಜನ್ಮ ಹುಟ್ಟಬಾರದು
ಇನ್ನೆಂದು ಹುಟ್ಟು ಬಾರದು ಅಯ್ಯೋ
ಎಂದಿಽಗೆ ಹೆಣ್ಣೆಂದು ||೮||

ಪ್ರಾಣ ಸಖನೆ ಹೋದೆ ಎತ್ತ
ಬಾರೋ ಎನ್ನು ತಾ
ಬಾ ಬಾರೋ
ಓಡೋಡಿ ಹುಡುಕುತಾ ||೯||

ರತಿ ರಾಣಿ ಹುಡಿಯೊಳ್ಹೊರಳಿ
ಹರಣ ಕಳೆವೆನೆನ್ನುತ
ತನ್ನ ಹರಣ ಕಳೆವೆನೆನ್ನುತ
ಬಾಯ್ಬಾಯ ಬಡಿಯುತ ||೧೦||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...