Home / ಕವನ / ಜನಪದ / ನಮ್ಮೂರ ಹೋಳಿ ಹಾಡು – ೭

ನಮ್ಮೂರ ಹೋಳಿ ಹಾಡು – ೭

ಪತಿಯು ಮಡಿದ ಸುದ್ದಿಯು
ತಾ ರತಿಯು ಕೇಳಿದಳೋ
ಅಯ್ಯೋ ತಾ ರತಿಯು ಕೇಳಿದಳೋ
ಕ್ಷಿತಿಯೋಳು ಹೊರಳ್ವಳೋ ||ಪ||

ಅಯ್ಯೋ ಎನ್ನ ಪ್ರಾಣ ಪತಿಯೆ
ಪ್ರಾಣ ನೀಗಿದೆಯಾ
ಅಯ್ಯೋ ಪ್ರಾಣ ನೀಗಿದೆಯಾ
ಎನ್ನ ಕೈಯನಗಲಿದೆಯಾ ||೧||

ನಾ ಪ್ರೇಮದಿಂದ ಕೂಡಿದಂತೆ
ಪ್ರೀತಿ ಹೋಯಿತೆ
ಅಯ್ಯೋ ಪ್ರೀತಿ ಹೋಯಿತೆ
ರತಿ ಸುಖವು ತೀರಿತೆ ||೨||

ನಿನ್ನ ಪೋಲ್ವ ಪುರುಷರ
ಜಗದೊಳು ಇನ್ನ ಕಾಣೆನು
ಅಯ್ಯೋ ಇನ್ನೆಂತು ಕಾಂಬೆನೋ
ಎಂದಿಗೆ ಮರೆವೆನೋ ||೩||

ಲೇಸೆಂದು ತಿಳಿದು ಸಾರಿದೆತ್ತ
ಕಂಬನಿ ಮುಖವ ತೋರು
ಆ ನಿನ್ನ ಚೆಲುವ ರೂಪವಽ
ಬಾರೋ ರೂಪವ ||೪||

ಚಿತ್ರದಲ್ಲಿ ಬಾರದಿನ್ನೂ
ಮುತ್ತೈದೆ ತನವ
ಅಯ್ಯೋ ಎನ್ನ ಮುತ್ತೈದೆ ತನವ
ಉಳಿದೀತೆ ಇನ್ನೇನುವಽ ||೫||

ಈ ನತ್ತು ಮೂಗಿನೊಳಗೆ
ಮುರಿದು ಬಿತ್ತು ಭೂಮಿಗೆ
ಅಯ್ಯೋ ಬಿತ್ತಿಲ್ಲೋ ಭೂಮಿಗೆ
ಸುಳ್ಳೆಲ್ಲೋ ಕನಸಿಗೆ ||೬||

ಕಟ್ಟಿದ ಕರಿಮಣಿಯು
ತಾಳೀಯಿಟ್ಟ ವಸ್ತುವು
ಅಯ್ಯೋ ಆಯಿತು ವ್ಯರ್ಥವು
ಇನ್ನಾಯಿತು ವೃರ್ಥವೋ ||೭||

ಛೀ! ಸುಟ್ಟುಹೋಗಲಿನ್ನು
ಜನ್ಮ ಹುಟ್ಟಬಾರದು
ಇನ್ನೆಂದು ಹುಟ್ಟು ಬಾರದು ಅಯ್ಯೋ
ಎಂದಿಽಗೆ ಹೆಣ್ಣೆಂದು ||೮||

ಪ್ರಾಣ ಸಖನೆ ಹೋದೆ ಎತ್ತ
ಬಾರೋ ಎನ್ನು ತಾ
ಬಾ ಬಾರೋ
ಓಡೋಡಿ ಹುಡುಕುತಾ ||೯||

ರತಿ ರಾಣಿ ಹುಡಿಯೊಳ್ಹೊರಳಿ
ಹರಣ ಕಳೆವೆನೆನ್ನುತ
ತನ್ನ ಹರಣ ಕಳೆವೆನೆನ್ನುತ
ಬಾಯ್ಬಾಯ ಬಡಿಯುತ ||೧೦||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...