ದೀಪಾವಳಿ ದಿನ

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ
ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ!
ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?!
ಆದಿಶೇಷನ ತೆರದಿ ಭುಸುಗುಟ್ಟುವೆ!
ಕಣ್ಣು ಗುಡ್ಡೆ… ನಿಗಿ, ನಿಗಿ… ಉರಿವ ಕುಡಿಕೆ, ಬಾಣ!
ಕೈ, ಕಾಲು, ತಲೆ, ಭೂ ಚಕ್ರ…


ಇಲ್ಲ: ಮೊದಲಿಗರು: ಆದಿಗರು: ಮಹಾಧೀರರು:
ಈ ಮಾದಿಗರೇ…
ಈಗ ಇವರು ಕೊಳಗೇರಿಗರು
ಇವರೀಗ-ತಮ್ಮ ತ್ಯಾಗ, ಬಲಿದಾನಕ್ಕೆ, ಬೇಸತ್ತು ಕಣ್ಣೀರಿಡುತ್ತಾ,
ದೀಪಾವಳಿ ಸೂತಕದ ದಿನವಾಗಿದೆ!
ಹೆತ್ತಮ್ಮನ ಭೂಮಿಗೆಪ್ಪು ಕೊಟ್ಟು
ಬಲಿ ಚಿಕ್ರವರ್ತಿನ ಬಲಿಗೊಟ್ಟು
ಹುಟ್ಟು ಹುಟ್ಟಿಸಿದ ತಪ್ಪಿಗೆ,
ಹಟ್ಟಿಲಿರುವ ಪ್ರಾರಬ್ಧ ಕರ್ಮ ನಮ್ಮದು!


ರಾಜ್ಯ ಕಳಕೊಂಡು,
ಬಲಿನ ಮುಂದಿಟ್ಟುಕೊಂಡು,
ತಿರುಬೋಕಿಯಾಗಿ, ದೀಪಾವಳಿ ಹೇಗೆ ಆಚರಿಸುವುದು!?
ಕೊಟ್ಟ ಮಾತಿಗೆ ಕಟ್ಟು ಬಿದ್ದು,
ಪಾತಾಳ ಕಾಣುವುದು ಬಲಿಗೆ ಬೇಕಿತ್ತೇ?
ಬಲಿನ ಕಳಕೊಂಡ ದಿನ,
ನಲಿ ನಲಿದು, ಊರುಕೇರಿ ಕೊಳ್ಳೆ ಹೊಡೆದು,
ಪಟಾಕಿ ಸುಡುವುದು ಯಾರಿಗಾಗಿ?!


ಶಿವದಾರ, ಜನಿವಾರ, ಉಡುದಾರವ
ಹೆಣ್ಣೂ, ಹೊನ್ನು, ಮಣ್ಣು, ಕಣ್ಣು, ಕದ್ದ ಕತೆ ತಿಳೀದೇ?
ಬ್ರಿಟಿಶರ ತಲೆ ಹಿಡಿದು, ತಲೆ ಒಡೆದು, ಗದ್ದುಗೆ ಏರಿದವರೇ,
ಹಳೆದ್ದನ್ನೆಲ್ಲ ತಿರುಚಿ, ಹೊಸದನ್ನು ಗಿಳಿ ಪಾಠವಾಗಿಸಿ,
ವಿಧಾನಸೌಧ, ಪರ್ಲಿಮೆಂಟಲಿ ಕುಂತು,
ಕಣ್ಣೊರೆಸಲು ಮೀಸಲಾತಿ ತಂದವರೇ,
ಜಾತಿ ಜಾತಿಗೆ ಹಿಂದುಳಿಯಲು ಪೈಪೋಟಿ ಮಾಡಿದವರೇ,
ಮಗಳನ್ನಿತ್ತು, ಮಣೆಯನ್ನಿತ್ತರೂ ಮಾದಿಗರಾಗಿ ಉಳಿದದ್ದು ತಿಳಿಯದೇ?!
ಕಾಮಧೇನು ಕೊಟ್ಟು, ನಗಚಕ್ರವಿತ್ತು,
ಸತ್ತ ದನವ ತಿನ್ನುವುದು, ಗೊತ್ತಿಲ್ಲವೇನು??
ಇರುವುದೆಲ್ಲ ನಿಮಗೆ ಕೊಟ್ಟು, ಜೀತಕ್ಕಿರುವುದು ಸುಳ್ಳೇನು?


ನಮ್ಮೆಲ್ಲ ನೋವು, ಆ ಅಲ್ಲನೊಬ್ಬನೇ ಬಲ್ಲ
ಬೆಲ್ಲದಾ ಮಾತುಗಳಿಗೆಲ್ಲ ಹಲ್ಲು ಕಳ್ಕೊಂಬರಿಲ್ಲ!
ಹರ… ಹರಾಽ.. ಬೆಳೆಯಿತಲ್ಲಾ ಹುಲ್ಲು, ಈ ನಿಮ್ಮ ನಾಲಿಗೆ ಮೇಲೆಲ್ಲ…
ತಲೆ ತುಂಬಾ ಜಾತಿ, ಮತದಾ ಭೀತಿ! ಕೋತಿ ನಿಮ್ಮ ಬುದ್ಧಿ…
ಮೈತುಂಬಾ ವಿಭೂತಿ ಪಟ್ಟೆ ಖ್ಯಾತಿ,
ಅಣ್ಣ ಬಸವಣ್ಣನ ಹೆಸರು ಮುಂದಿಟ್ಟುಕೊಂಡು,
ಖಾದಿ, ಖಾಕಿ, ಖಾವಿ ತೊಟ್ಟುಕೊಂಡು,
ದನ, ಜನರ ಕತ್ತು ಕೊಯ್ಯುವಾ ಕಸರತ್ತು ನಿಂತಿಲ್ಲವೇಕೇ?
ಇರುಳು ಕಂಡ ಬಾವಿಗೆ, ಹಗಲು ಬೀಳಿಸಿದ ಕೀರ್ತಿ, ನಿಮ್ಮದಲ್ಲವೇ?!


ಬದುಕ ಕಲಿಸಿದ, ಗುರು ಜಾಂಬವಗೆ, ಕೇರೀಲಿ ಬಿಟ್ಟ ಗುಟ್ಟೇನು?
ಕೆಂಡು ಉಂಡು, ಕೆಂಡ ಉಗುಳುವ ನಮಗೆ, ಭಸ್ಮಾದುಂಡೆ ಯಾಕೇ?
ಶಕ್ತಿವಂತರು ಮೋಸ್ದಾಟಲಿ, ಬಲಿ ತೆಗೆದ ದಿನವೇ, ದೀಪಾವಳಿಯೇಕೇ?
ಮೈಚರ್ಮ ಸುಲಿಸಿಕೊಂಡು, ಮೈಲಾರ ಸೇರಿಕೊಂಡು,
ಮೆಟ್ಟು ತುಳಿದ ತಪ್ಪಿಗೆ, ಕರೆಬಾನಿಲಿ ಬಿದ್ದದ್ದು, ಮರೆತ್ತಿರೇನು?
ಏಳುಕೋಟಿ ನುಂಗಿ, ಏಳು ಬೆಟ್ಟದಲಿ, ಅಡಗಿದ್ದೇ ಪವಾಡವೇನು?
ಸೃಷ್ಠಿಕರ್ತನ ಸೃಷ್ಠಿಸಿ, ಕೇರೀಲುಳಿದವರ ಗೋಳು, ಕೇಳದೇನು?
ಈ ನೆಲ, ಜಲ, ಜನ, ಮನೆ, ಮಠ, ಯುಕ್ತಿ, ಶಕ್ತಿ ಜಾಂಬುವನದಲ್ಲವೇ?
ಶಿವಗೆ ಮದುವೆ ಮಾಡಿ, ಶವ ಹೊತ್ತು, ತಿರುಗಿದ ಕತೆ, ನೆಪ್ಪಿಲ್ಲವೇ?
ಏನೆಲ್ಲ ತಿದ್ದಿ, ಕೋಟೆ, ಮಠ, ಮಾನ್ಯಗಳ ಕೆಡಿವಿ…
ಅಟ್ಟ ಹಾಸದಿ, ಮೆಟ್ಟಿ ಮೆರೆದ ತಪ್ಪಿಗೆ, ಬಲಿಗೆ ಬಲಿ ಸಿದ್ಧ…
ಜೋಕಾಲೀಲಿ, ಇನ್ನೆಶ್ಟು ದಿನವಿಲ್ಲಿ, ಜೀಕುವಿರಿ?!
ಗಡಿಗೆ ಬಾಣದಿ, ಸಿಡಿವ ದಿನವಿಲ್ಲಿ, ದೀಪಾವಳಿ.


ವಾಮನ ರೂಪದಿ, ತುಳಿದ ಕಾಲ ಕೋಪದಿ ಹುಡುಕುವೆ,
ಕರಾ ಕರಾ ರಂಪಿಗೆ ಕೈಯೊಳ್ ಈಗೋ ಕುಳಿತ್ತಿರುವೆ,
ಪಾಲೀಶ್ ಮಾಡುತಾ, ಕಾಲನು ಕೊಯ್ದೆ ಇಕ್ಕುವೆ!
ಕಟುಕನು ನಾ! ಪ್ರಾಣಿಗಳ ತಲೆಗಳ ತರಿವೆ ದಿನ ನಾ
ತುಳಿದ ಕಾಲ ತರಿವೆ ಸುಲಭದೀ ಬಿಡೆ ನಾ!
ದರ್ಜಿಯಾಗಿ ಗರ್ಜಿಸುವೆ! ನವರಂಧ್ರಗಳ ಹೊಲಿವೆ
ಬಲಿ ತುಳಿದ ಕಾಲನು! ಬಿಡದೆ ಕತ್ತರಿಸುವೆ!
ಗಂಟೆ, ಜಾಗಟೆ, ವಾಲಗ, ಆರತಿ, ತೀರ್ಥಪ್ರಸಾದಗಳೇಕೆ?
ತ್ರಿಶೂಲದಿ ಬಲಿಯ ತುಳಿದ ಕಾಲ ಇರಿವೆ!
ಗಡ್ಡ, ಮೀಸೆ, ತಲೆಗಳಾ, ಬೋಳಿಸಿ, ಬೋಳಿಸಿ,
ಬಲಿ ತುಳಿದಾ…
ಪಾದ ಹುಡುಕಿ ತೆಗೆವೆ, ರುಂಡ ಮುಂಡವಾ ಕರಕರನೇ…
ನೇಗಿಲಯೋಗಿ, ಬಲಿಯ ತುಳಿದವನ ಹುಡುಕಿ, ಮಾಡುವೆ…
ನೇಗಿಲ ಕುಳಕೇ ಬಲಿ!
ಬಟ್ಟೆ ಒಗೆವೆ ಬಲಿ ತುಳಿದ ಪಾದವ
ಸಿಕ್ಕರೆ ಬಟ್ಟೆ ತೆರದಿ ಒಗೆವೆ ಕಾಲಿಡಿದು!
ಅಡಿಗೆ ಭಟ್ಟನು ಹುಡುಕುತಲಿರುವೆ… ತುಳಿದ ಕಾಲ,
ಸಿಕ್ಕರೆ ಹಚ್ಚುವೆ ತರಕಾರಿಯಂದದಿ!
ಬೇಯಿಸಿ ಬಿಡುವೆ ಪಾಯಸದಿ!
ವೈದ್ಯನಾಗಿ ಮೃತ್ಯುರೂಪವ ತಾಳುವೆನೀಗಲೇ…
ಶಿಕ್ಷಕನಾಗಿ ಹುಡುಕುವೆ ಕಾಲ!
ದಶಾವತಾರವೇ ನಾಡಿಗೆ, ಸಿಡಿಮದ್ದೀಗ
ವರ್ಷ ವರ್ಷದಿ, ಚರಮಗೀತೆ ಹಾಡಿರಿ ನೀವೆಲ್ಲ
ಬಲಿಗೆ ಬಲಿ, ಆದ ದಿನವೇ, ದೀಪಾವಳಿ ನಮಗೆಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊದಿಕೆ ಹೊದಿಸೋಕೆ
Next post ಜಾಣ-ಕೋಣ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys