ಕರಗುವ ಇರುಳಿನ ಹಣೆಯಲ್ಲಿ

ಕರಗುವ ಇರುಳಿನ ಹಣೆಯಲ್ಲಿ
ಮೂಡಲ ಗಿರಿಯ ಮಣೆಯಲ್ಲಿ
ಹೂಳೆಯುವ ರತ್ನದ ಹಣತೆಯನು
ಹಚ್ಚುವರಾರು ಮರೆಯಲ್ಲಿ?

ಬೆಟ್ಟವು ಬಾನಿನ ಕಡೆಗೇಕೆ
ತೊರೆಗಳು ತಗ್ಗಿನ ಕಡೆಗೇಕೆ?
ನಭದಲಿ ತೇಲುವ ನೀಲಿ ಹಂಡೆಗಳು
ಮಣ್ಣಿಗೆ ಉರುಳುವುದೇತಕ್ಕೆ?

ಹೂವನು ಚಿಮ್ಮುವ ಮುದವೇನು
ಬಾಡಿಸಿ ಕೊಲ್ಲುವ ಕುದಿ ಏನು?
ಹಗಲಲಿ ಬಿಚ್ಚಿ ಇರುಳಲಿ ಮುಚ್ಚುವ
ಕಣ್ಣುಮುಚ್ಚಾಲೆ ಕಥೆಯೇನು?

ಯಾರು, ಏನು, ಏತಕ್ಕೆ
ತಿಳಿಯದ ಮಾಯಾವ್ಯೂಹಕ್ಕೆ
ಎಲ್ಲಿವೆ ಆದಿ ಅಂತ್ಯಗಳು
ಉತ್ತರ ಸಿಗದಾ ಗೂಢಕ್ಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೪೮
Next post ಹಸಿದವರಿಗೂ ಎರಡು ಎಲೆಯಿರಲಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…