ದಾರಿತಪ್ಪಿ ನಡೆದರೂ

ದಾರಿತಪ್ಪಿ ನಡೆದರೂ

ಮಾನತಪ್ಪಿ ನುಡಿದರೂ
ತಾಯಿಯಂತೆ ಕ್ಷಮಿಸಿ ನಮ್ಮ
ಕಾಯುತಿರುವ ಪ್ರೀತಿಯೇ, ಋತು ರೂಪದ ನೀತಿಯೆ

ಯಾರ ಆಜ್ಞೆಸಲಿಸಲೆಂದು
ರಾಶಿ ಚಿಗುರ ತರುವೆ?
ಯಾರ ಬರವ ಹಾರೈಸಿ
ನೆಲಕೆ ಹಸಿರ ಸುರಿವೆ?
ಯಾರ ಒಲುಮೆ ಉಕ್ಕಿ ಪತ್ರ ಮರಮರದಲು ಬರೆವೆ?

ಹಿಮದ ಹಸ್ತ ಅಳಿಸಿ ತೆಗೆದ
ಜಗದ ಬಾಳ ತಿಲಕವ
ಮತ್ತೆ ಇರಿಸಿ ರತಿಗೆ ಸಲಿಸಿ,
ಜೀವಮೊಳಸುವಾಟವ
ತಿರುಗಿ ತಿರುಗಿ ತೋರುತಿರುವೆ ಕಾಮನೊಂದು ಬೇಟವ!

ಕಾಣದಂತೆ ಮರೆಗೆ ನಿಂತು
ಕಾಯ್ದ ಒಂದು ತತ್ವವ,
ಲೀಲೆಯಲ್ಲಿ ತನ್ನ ಹೀಗೆ
ಮರೆಸಿ ನುಡಿವ ಸತ್ಯವ
ಧ್ವನಿಸುವೆಯೋ ಹೇಗೆ ನೀನು ಸಾವಿಲ್ಲದ ನಿತ್ಯವ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೨೪
Next post ಕಾವ್ಯ ಕನ್ನಿಕೆ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys