Home / ಕವನ / ಕವಿತೆ / ಕವಿತೆಯೆಂದರೇನು?

ಕವಿತೆಯೆಂದರೇನು?

ಕವಿತೆಯಂದರೇನು?
ಕಣ್ಣು, ಕಿವಿ, ಮೂಗು,
ಅಗಲವಾದ ಬಾಯಿ!
ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ!
ಸುಗಂಧ, ಪರಿಮಳ ದ್ರವ್ಯ!
ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ!
ಕಾಮನ ಬಿಲ್ಲಿನ ಸೊಬಗಿನಂತೆ!


ಕವಿತೆಯೆಂದರೇನು?
ಕೈ, ಕಾಲು ಸಣ್ಣ,
ಹೊಟ್ಟೆ ಡುಬ್ಬಾನಲ್ಲ!
ತಗಡು ಡಬ್ಬವಲ್ಲ!
ಕಹಳೆ ಪಾಂಗಿನಂತೆ,
ಶಬ್ದ ದ್ರವ್ಯದಂತೆ,
ಅಭ್ಯಂಜನ ಸ್ನಾನದಂತೆ!
ಮದುವೆ ದಿಬ್ಬಣದಂತೆ!
ವಧು, ವರರ, ಗಂಭೀರ ಹಂಸ ನಡಿಗೆಯಂತೆ.
ಮಂಗಳ ವಾದ್ಯದಂತೆ,
ಗಟ್ಟಿ ಮೇಳದಂತೆ,
ಗುಡಿಯೊಳಗಿನ ಘಂಟೆ ನಾದದಂತೆ,
ಆರತಿ, ಧೂಪದಂತೆ,
ತೀರ್ಥಪ್ರಸಾದ, ಭೋರಿ ಭೋಜನದಂತೆ!
ತಾಂಬೂಲ ಜಗಿದು, ನಾಲಿಗೆ, ತುಟಿ, ಕೆಂಪಾದ ಕಂಪಿನಂತೆ!


ಕವಿತೆಯೆಂದರೇನು?
ಬಡವ ಧನಿಕನ ಅಂತರವಲ್ಲ!
ಊರುಕೇರಿಯ ಅನುಬಂಧದಂತೆ.
ಆಕಾಶ, ಭೂಮಿಯ, ಗುರುತ್ವಾಕರ್ಷಣೆಯಂತೆ.
ಗುಡಿಸಲು ಮಹಡಿಯ ಅಂತರವಲ್ಲ!
ಹೃದಯ ಶ್ರೀಮಂತಿಕೆಯ ಬಾಣ.
ಮಾರಿಗುಡಿಯ ಕೋಣ!
ಜಾಣ ಕವಿಯ ತಾಣ!
ಒಮ್ಮೆ ಬಿಟ್ಟು ಮತ್ತೊಮ್ಮೆ…
ಓದಿ, ಓದಿಸಿ, ಹಾಡಿ, ನಲಿ ನಲಿವ, ಕಾಜಾಣ!
ಸ್ವರ್ಗ ಸುಖದ ತಾಣ!


ಕವಿತೆಯೆಂದರೇನು?
ಹೆಣ್ಣು: ಹೆಣ್ಣಿಗೆ ಎಲ್ಲೆಲ್ಲಿ… ಹೇಗೇಗೆ… ಏನೇನು…
ಎಶ್ಟೆಷ್ಟು… ಇರಬೇಕೋ??…
ಅಶ್ಟೆಷ್ಟಿದ್ದರೆ… ಸಾಲಂಕೃತ ಅಲಂಕಾರ!
ಉಳಿದದ್ದು ಅಹಂಕಾರ!
ಪ್ರತಿಭೆ, ಉತ್ಪತ್ತಿ, ವ್ಯಾಕರಣ, ಛಂದಸ್ಸು, ಲಯ!
ಲಘು, ಗುರು, ಅನುಪ್ರಾಸ, ಅಂತ್ಯಪ್ರಾಸಗಳ ಮೋಡಿ…
ಕೋಡಿ ಬಿದ್ದ ಕೆರೆ, ಕುಂಟೆ, ಜಲಾಶಯಗಳಂತೆ…
ಕೇಶಿರಾಜ, ದಂಡಿ, ವ್ಯಾಸ, ದಾಸ, ಭಾಸರ ಲಾಸ್ಯ ಹಾಸ್ಯದಂತೆ…
ಬ್ರಹ್ಮ ಮೆಚ್ಚಿ, ಜೊಲ್ಲು ಸುರಿಸಿ, ಲಗ್ನವಾದ ಗುಂಗಿನಂತೆ!
ಅಳೆದು, ತೂಗಿ, ಹಾವ, ಭಾವ, ವೈಯಾರ ಹಂಸ ನಡಿಗೆಯಂತೆ!


ಕವಿತೆಯೆಂದರೇನು?
ನವರಸ ಉಕ್ಕಿ, ಮದಗಜ ಸೊಕ್ಕಿ, ಹಕ್ಕಿಯ ಎರಡು ರೆಕ್ಕೆಗಳು!
ನೆರೆ ಹಾವಳಿ ಹೆಚ್ಚಿ, ವೀರ, ಶೂರ, ಧೀರ, ಸೈನಿಕನಂತೆ!!
ನವಗ್ರಹಗಳ ಶಾಂತಿ, ಮಂತ್ರದಂತೆ…
ವ್ಯಾಘ್ರನ ತೀಕ್ಷಣಮತಿ
ಭರದಿ ಪರಿಹಾರ ಕಾರ್‍ಯದಂತೆ…


ಕವಿತೆಯೆಂದರೇನು?
ಮಕ್ಕಳ ಹಾಲು ಹಲ್ಲಿನ ಸಾಲು…
ಪುಟ್ಟ ಕಂದಮ್ಮನ ಕಾಲು!
ಮಗುವಿನ, ಗೋಲಿಯಾಕಾರದ ಕಣ್ಣು!!
ಫಲವತ್ತಾದ ಮಣ್ಣು,
ಮಾಗಿದ ರಸಪುರಿ ಹಣ್ಣು,
ಗಜನಿಂಬೆ ಹೆಣ್ಣು, ಬೆರಗು ಬಿನ್ನಾಣಾಗಿತ್ತಿ!
ಕವಿತೆ, ಕವಿಯ ಕಣ್ಣು! ಕಣ್ಣೀರು! ಪನ್ನೀರು!
ಜಗದ ಹುಣ್ಣು! ವಿಸ್ಮಯದ ಅಭಿವ್ಯಕ್ತಿ…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...