Home / ಬಾಲ ಚಿಲುಮೆ / ಕವಿತೆ / ಎಷ್ಟೊಂದು ಕಪ್ಪೆ

ಎಷ್ಟೊಂದು ಕಪ್ಪೆ

ಎಷ್ಟೊಂದ್ ಕಪ್ಪೆ ಇಷ್ಟೊಂದ್ ತಪ್ಪೆ
ತರಗತಿ ತುಂಬಾ ತೊಪ್ಪೆ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಮರದಿಂದ ಬಿದ್ದೂ ಬಾವಿಂದ ಎದ್ದೋ
ಪುತ ಪುತ ಬಂದವು ಎಷ್ಟೊಂದ್ ಮುದ್ದೊ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಕೆಲವರು ಐಗಳು ಕಲವರು ಹೈಕಳು
ಚಕ್ಕಳ ಮಕ್ಕಳ ಕುಂತಿವೆ ಇಕ್ಕಳು
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಒಂದೊಂದ್ ಕಪ್ಪೆಗೆ ಒಂದೊಂದ್ ಪುಸ್ತ್‌ಕಾ
ಒಂದೊಂದ್ ಸ್ಲೇಟು ಒಂದೊಂದ್ ಮಸ್ತ್‌ಕಾ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಚೊಂದೆ ಕಪ್ಪೆ ಯಸ್ಸಾರ್ ಯಸ್ಸಾರ್!
ಗುಳ್ಳೆ ಕಪ್ಪೆ ಅವನೂ ಯಸ್ಸಾರ್!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ರಾಜಾ ಕಪ್ಪೆ ಘಾಯಬ್ ಹೋಕರ್
ಗುಂಕುರ ಕಪ್ಪೆ ವಾಚಾಮಗೋಚರ್!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಒಂಭತ್ತೊಂಬಾತ್ಲಿ ಎಷ್ಟೇಳು ಮರೀ
ಬಿಸಿ ಬಿಸಿ ಇದ್ರೆ ಎಷ್ಟಾದ್ರು ಸರೀ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಸೋಮ್ವಾರ ಹೋದರೆ ಯಾವಾರ ಬರತ್ತೆ?
ನಂಗೊತ್ತು ನಂಗೊತ್ತು, ಬರ್‍ತಾ ಬರ್‍ತಾ ಕತ್ತೆಯಾಗತ್ತೆ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ನನ್ನಜ್ಜನಿಗೆ ಸಾವಿರ ಕಣ್ಣು! ಏನದು ಏನದು ಬೇಗನೆ ಹೇಳಿ!
ಜೇನಿನ ಪೋಳೆ ಜೇನಿನ ಪೋಳೆ!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ನನ್ನಪ್ಪನಿಗೆ ಮೂರೇ ಕಣ್ಣು! ಏನದು ಏನದು ಬೇಗನೆ ಹೇಳಿ!
ಅಯ್ಯೋ ದೇವರೆ! ತೆಂಗಿನ ಕಾಯಿ!
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

ಹೋಗೊ ಬೆಪ್ಪಾ ಬಾರಿಸು ಗಂಟೆ
ಆಯಿತು ಇಲ್ಲಿಗೆ ಪಾಠದ ತಂಟೆ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...