Home / ಕವನ / ಕವಿತೆ / ಹೆದ್ದಾರಿಗುಂಟ

ಹೆದ್ದಾರಿಗುಂಟ

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು
ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’
safe ಆಗಿ ನನ್ನೂರು ತಲುಪಲು”

ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು
ವಿಶಾಲ ವಿಹಂಗಮ ನಿಸರ್ಗಕಾಣಲು
ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ
ಸ್ವಲ್ಪ ನೆಮ್ಮದಿಯಾಗಿ ಮಲಗಲೂ ಎಂದು
ಮುಂದಿನ ಸೀಟಿನಲ್ಲಿಯೇ ಕುಳಿತದ್ದು
ಗೊತ್ತಲ್ಲ ನಿಮಗೂ
ಹಿಂದಿನ ಸೀಟು ಎಬ್ಬೆಬ್ಬಿಸಿ ಒಗೆಯುವದೆಂದು

ನಮ್ಮ ಡ್ರೈವರು ತುಂಬಾ ತಲೆಹಿಡುಕ
Private Luxury bus ಬೇರೆ ನೋಡಿ
ಚಹಾದ ಅಂಗಡಿ ಬೀಡಿ ಅಂಗಡಿ
ಗಬ್ಬೆದ್ದಿರುವ ನೊಣಗಳ ಡಾಬ
ಕಳ್ಳಿನ ಹಳಸುನಾತಿನ ಹೊಟೇಲುಗಳ ಈ ಹೆದ್ದಾರಿಗುಂಟೆಲ್ಲ
ಇವನಿಗೆ ಜಿಗರಿದೋಸ್ತಗಳ ಸರಮಾಲೆ
ಇವನಿಗೆ ಅವರೋ, ಅವರಿಗಾಗಿ ಇವನೋ ಎಂಬಂತೆ.
ಓಡುವ ಬಸ್ಸು ಹಾರ್ನು ತಕ್ಷಣದ ಬ್ರೇಕು
ಅಬ್ಬಬ್ಬಾ ಬಸ್ಸಪ್ಪಾ, ಏ ಬಸಪ್ಪಾ
ಕಿರುಚಾಡುವಂತಾಗುತ್ತಿತ್ತು ಮನಸ್ಸು.

ಟೊಂಗೆ ಟೊಂಗೆಗಳ ಮೇಲಿನ ಮಂಗಗಳಂತೆ
ಡ್ರೈವರ್ರನ ಅಕ್ಕಪಕ್ಕದಲ್ಲೆಲ್ಲಾ Extra ಸೀಟುಗಳು
ಬಸಪ್ಪನ ಜೇಬು ತುಂಬುವ ಅರ್ಜೆಂಟದವರು.

ರಣರಣ ಮಧ್ಯಾಹ್ನ ಬಿಸಿಲು
ಎಳೆನೀರು ಬಾಳೆಹಣ್ಣುಗಳಿದ್ದರೂ
ಪ್ರಯಾಣಿಕರಿಗೆಲ್ಲ ಬೇಕು Fancy cococolaಗಳು
ಚಳಿಹತ್ತಿ ನಡಗುವ ವಿದೇಶಿಮೂಲದವರಂತೆ
ಇಳಿದಾಗೊಮ್ಮೆ ಎಳೆಯಲು ಬ್ರಾಂಡೇಡ್ ಸಿಗರೇಟುಗಳು.
ಹೆದ್ದಾರಿಗುಂಟ ಓಡುವ ಎದುರಾಗುವ
ಚಿತ್ರವಿಚಿತ್ರ ಹೆಸರಿನ ಲಾರಿ ಬಸ್ಸು ಟೆಂಪೋಗಳು
ಬೆಟ್ಟದಹಾವು, ತಾಯಿಯಮಗ, ನಿಮ್ಮಪ್ಪನ ಮಗ,
ಅಣ್ಣಯ್ಯನ ತಮ್ಮ, ಹೆದ್ದಾರಿಬಕ ಹೀಗೆ –
ಯಕ್ಷಕನ್ನಿಕೆಯರ ಸಿನೇಮದವುಗಳ
ಮಿನಿ ಮಿಡಿ ಚಿತ್ರಗಳು ನೋಡುತ್ತ ಓದುತ್ತ
ಡ್ರೈವರ್ ಹೇಗೆ ಓಡಿಸುತ್ತಾನಪ್ಪ ಬಸ್ಸು
ಆಕ್ಸಿಡೆಂಟ್ ಮಾಡದೆಯೆ?
ಹೆದರಿ ಹಿಂದೊರಗಿ ಕಣ್ಣುಮುಚ್ಚಿದ್ದೆ-

ಸುರುವಾಯಿತು ನೋಡಿ
ಒಂದು ಜೊಂಪು ನಿದ್ದೆ ಮಾಡಿ ಎದ್ದವರ ಹರಟೆ
ಮದುವೆ ದಿಬ್ಬಣದವರಿರಬೇಕೇನೊ
ಅವರಪ್ಪನ ಮನೆಯ ಬಸ್ಸು ಎನ್ನುವಂತೆ
ಹುಡುಗ ಹುಡುಗಿ ಬಂಗಾರು ಅಂತಸ್ತುಗಳನ್ನೆಲ್ಲ
ಇಲ್ಲಿ ಕಿತಾಪತಿಸುತ್ತ
ಸಂಬಂಧಿಕರನ್ನೆಲ್ಲಾ ಮಾತಿನಲ್ಲಿ ಥಳಿಸುತ್ತಾ ಹಗುರಾಗುತ್ತಿದ್ದರು.

ನನಗೋ ಕಣ್ಣು ಮುಚ್ಚದೆಯೋ ತೆರಯದೆಯೋ
ಒಳಗೊಳಗೇ ಕಿರಿಕಿರಿಯ ಒದ್ದಾಟ.
ಬರುತ್ತಿದೆ ನನ್ನೂರು ಹತ್ತಿರ ಹತ್ತಿರ
ಸಂಜೆಯಸೂರ್ಯ ಗಲ್ಲಕ್ಕೆ ಮುದ್ದಿಟ್ಟು ಎಬ್ಬಿಸಿದ್ದ
ಹಕ್ಕಿಪಕ್ಕಿ ದನಕರುಗಳೆಲ್ಲಾ ಗೂಡು ಸೇರಲು
ಓಡುತ್ತಿರುವಾಗ ಗಕ್ಕನೆ ಬ್ರೇಕ್ ಹಾಕಿದ ಬಸ್ಸಪ್ಪಾ
ಕ್ಷಣಾರ್ಧದಲ್ಲಿಯೇ ಇಳಿದು
ಅಡ್ಡಬಂದ ಚಕ್ಕಡಿಯವನೆದೆ ಎಳೆದು ಥಳಿಸಿ
ನೂರೆಂಟು ಹಲ್ಕಾ ಬೈಗುಳಗಳನ್ನೆಲ್ಲಾ ಸುರಿದು
ಎತ್ತೂಗಳೂ ನಡುಗುವಂತೆ ಮಾಡಿದ್ದ ನಮ್ಮ ಡ್ರೈವರ್ರು
ಹೆದ್ದಾರಿಗುಂಟ ಎರಡೂ ಕಡೆಗೂ
ಅರ್ಧ ಗಂಟೆ ರಸ್ತೆ ಬ್ಲಾಕು.
ಪ್ರಯಾಣಿಕರೆಲ್ಲ ಎರಡೂ ಕಡೆಗೂ ಬಾಲಬಡಿದು
ಡ್ರೈವರ್ರನ್ನ ತಂದು ಕೂರಿಸಿ
ನಡೆಯಪ್ಪ ಬೇಗ ಊರು ಸೇರೋಣ ಬೆಳಕಿನಲ್ಲಿಯೇ
ಅಂದರೂ
ಮುಂದಿನ ಊರಿನ ಹೊಟೆಲ್ ಮುಂದೆ ನಿಲ್ಲಿಸಿಯೇಬಿಟ್ಟ.

Coffee ಸಮಯ ಪ್ರಯಾಣಿಕರ ಪರಿಚಯ ವಿಳಾಸ
ಮಾತುಕತೆಗಳಲಿ ಸಂಬಂಧಿಗಳು, ಸ್ನೇಹಿತರು, ಆಗೇಬಿಡುವದೆ!!
“ಮುಂದಿನ ಸಲ ಬೆಂಗಳೂರಿಗೆ ಬಂದರೆ ನಿಮ್ಮಲ್ಲೇ ವಸ್ತಿ
ಇನ್ನೇನೂ ತೊಂದರೆ ಇಲ್ಲ ಬಿಡಿ”
ನನ್ನ ಪರಮೀಷನ್ ಇಲ್ಲದೆ ಬುಕ್ ಮಾಡಿಕೊಂಡೇ ಬಿಟ್ಟರು.

ಅಬ್ಬಬ್ಬಾ ಯಾಕಾದರೂ ಹಗಲಿನಲ್ಲಿಯೇ ಹೊರಟೆನಪ್ಪ ಊರಿಗೆ
ಸುದೈವಕೆ ಗಾಡಿ ಪಂಕ್ಚರ್ ಆಗದೇ
ಊರು ಸೇರಿದಾಗ ಅಗಿತ್ತು ರಾತ್ರಿ ಹತ್ತು.

“ಈಗೀಗ ತೀರ್ಮಾನಿಸಿದ್ದೇನೆ
ಹೆದ್ದಾರಿಗುಂಟ ರಾತ್ರಿ
ದರೋಡೆಯಾಗಲಿ ಕೊಲೆಸುಲಿಗೆ
ಅಕ್ಸಿಡೆಂಟೇ ಆಗಲಿ
ಮತ್ತಷ್ಟು ಊಟ ಮಾಡಿ ಬೇಕಿದ್ದರೆ
ಒಂದು ನಿದ್ದೆ ಗುಳಿಗೆಯೂ ನುಂಗಿ
ನೀರು ಕುಡಿದು ಆರಾಮವಾಗಿ
ಸೀಟಿಗೊರಗಿ ಗಪ್‌ಚುಪ್‌ ನಿದ್ದೆ ಮಾಡುತ್ತ
“ರಾತ್ರಿ ಪ್ರಯಾಣ ಮಾಡಲು”!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...