Home / ಕವನ / ಕವಿತೆ / ಹುಡುಕಾಟ

ಹುಡುಕಾಟ

ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ
ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ
ನಾನು ಮರುಳಾಗಿ ಕೊಳ್ಳುವವನೇ ಅಲ್ಲ

ಮನೆಯಂಗಳದ ಹೂವು, ಹೂದೋಟದ ಹೂವು
ಬೆಟ್ಟದ ಹೂವು, ಕೊಳ್ಳದ ಹೂವು,
ಏರ್ ಕಂಡೀಶನ್ ಹೂವು, ಬಣ್ಣವಾಸನೆಗಳ ಹೂವು,
ಎಷ್ಟೊಂದು ಹೂವುಗಳು- ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ-

ಸುಳಿ ಸುಳಿಗೆ ಸಿಕ್ಕು ಅರಳದೇ ಉಳಿದ
ಬಿಸಿ ಬಿಸಿಲಿಗೆ ಸುಟ್ಟು ಹೂವಾಗಲು ಹಂಬಲಿಸಿದ
ನೀರು ಬೆಳಕಿಲ್ಲದೆ ಗಾಳಿ ಮೋಡಗಳೊಡನೆ
ಹನಿ ಮುತ್ತು ಚೆಲ್ಲಿ ಮಾತಾಡಿ ತತ್ತರಿಸಿದ
ತಲ್ಲಣಿಸಿದ ಹೂವು ಇಲ್ಲೆಲ್ಲಾದರೂ ಇದೆಯೇ
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ.

ನನ್ನೊಲುವಿನ ಹೂವು ಎಲ್ಲೋ ಇದೆ
ಸರಿ ಸಾಟಿಯಾಗಬಲ್ಲ ಹೆಸರೊಂದೂ ಗೊತ್ತಿಲ್ಲ
ನೋವು ನಲಿವಿನಲಿ, ದುಃಖ ದುಮ್ಮಾನಗಳಲಿ
ಮುಳ್ಳುಗಳನೆಲ್ಲ ಕಳಚಿ ನಗುತ ಬೆರೆವ
ನನ್ನೆದೆಯ ಗೂಡಿನ ಹೂವು ಎಲ್ಲಾದರೂ ಇದೆಯೇ!
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ.

ಸುತ್ತೆಲ್ಲ ಮುಳ್ಳುತುಂಬಿದ ಹೆಸರು ಬಣ್ಣಿಲ್ಲದ
ಹೂವಿಗೆ ಕಾತರಿಸಿ ಬಯಸಿ ಕಾದಿರುವೆ
ಅದರೊಂದಿಗೆ ಸೇರಿ ಉಸಿರು ಬೆರೆಸಿ
ಮಿಂಚು ಹರಿಸಿ ಮೋಡ  ಸುರಿಸಿ
ಬಣ್ಣ ಸುಗಂಧ ತುಂಬಿ ನನ್ನೆದೆಯ
ತುಡಿತಕೆ ರಾಣಿಯಾಗುವ ಹೂವ
ಹುಡುಕಿ ಹುಡುಕಿ ಹೊರಟಿದ್ದೇನೆ ಅಲ್ಲಲ್ಲಿ-
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಸಿಗಲಿಲ್ಲ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್