Home / ಕವನ / ಕವಿತೆ / ಹುಡುಕಾಟ

ಹುಡುಕಾಟ

ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ
ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ
ನಾನು ಮರುಳಾಗಿ ಕೊಳ್ಳುವವನೇ ಅಲ್ಲ

ಮನೆಯಂಗಳದ ಹೂವು, ಹೂದೋಟದ ಹೂವು
ಬೆಟ್ಟದ ಹೂವು, ಕೊಳ್ಳದ ಹೂವು,
ಏರ್ ಕಂಡೀಶನ್ ಹೂವು, ಬಣ್ಣವಾಸನೆಗಳ ಹೂವು,
ಎಷ್ಟೊಂದು ಹೂವುಗಳು- ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ-

ಸುಳಿ ಸುಳಿಗೆ ಸಿಕ್ಕು ಅರಳದೇ ಉಳಿದ
ಬಿಸಿ ಬಿಸಿಲಿಗೆ ಸುಟ್ಟು ಹೂವಾಗಲು ಹಂಬಲಿಸಿದ
ನೀರು ಬೆಳಕಿಲ್ಲದೆ ಗಾಳಿ ಮೋಡಗಳೊಡನೆ
ಹನಿ ಮುತ್ತು ಚೆಲ್ಲಿ ಮಾತಾಡಿ ತತ್ತರಿಸಿದ
ತಲ್ಲಣಿಸಿದ ಹೂವು ಇಲ್ಲೆಲ್ಲಾದರೂ ಇದೆಯೇ
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ.

ನನ್ನೊಲುವಿನ ಹೂವು ಎಲ್ಲೋ ಇದೆ
ಸರಿ ಸಾಟಿಯಾಗಬಲ್ಲ ಹೆಸರೊಂದೂ ಗೊತ್ತಿಲ್ಲ
ನೋವು ನಲಿವಿನಲಿ, ದುಃಖ ದುಮ್ಮಾನಗಳಲಿ
ಮುಳ್ಳುಗಳನೆಲ್ಲ ಕಳಚಿ ನಗುತ ಬೆರೆವ
ನನ್ನೆದೆಯ ಗೂಡಿನ ಹೂವು ಎಲ್ಲಾದರೂ ಇದೆಯೇ!
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ.

ಸುತ್ತೆಲ್ಲ ಮುಳ್ಳುತುಂಬಿದ ಹೆಸರು ಬಣ್ಣಿಲ್ಲದ
ಹೂವಿಗೆ ಕಾತರಿಸಿ ಬಯಸಿ ಕಾದಿರುವೆ
ಅದರೊಂದಿಗೆ ಸೇರಿ ಉಸಿರು ಬೆರೆಸಿ
ಮಿಂಚು ಹರಿಸಿ ಮೋಡ  ಸುರಿಸಿ
ಬಣ್ಣ ಸುಗಂಧ ತುಂಬಿ ನನ್ನೆದೆಯ
ತುಡಿತಕೆ ರಾಣಿಯಾಗುವ ಹೂವ
ಹುಡುಕಿ ಹುಡುಕಿ ಹೊರಟಿದ್ದೇನೆ ಅಲ್ಲಲ್ಲಿ-
ಎಷ್ಟೊಂದು ಹೂವುಗಳು ಈ ಪೇಟೆಯಲಿ
ಆದರೂ ನನಗೆ ಬೇಕಾದ ಹೂವು ಸಿಗಲಿಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...