Home / ಕವನ / ಕವಿತೆ / ನಂದಿಬೆಟ್ಟದ ಮಂಜಿನೊಳಗೆ

ನಂದಿಬೆಟ್ಟದ ಮಂಜಿನೊಳಗೆ

ಅಂದುಕೊಂಡಷ್ಟು ಚಳಿ ಏನಲ್ಲ! ಗಾಳಿ ಬಿರುಸು
ನೆಪಕ್ಕೆ ಮಧ್ಯಾಹ್ನ ಆದರೆ ಅಡ್ಡಮಳೆ
ಬೆಟ್ಟದ ಹಸಿರುವಾಸನೆಯೊಳಗೆ
ಪುಕ್ಕಟೆ ಸಿಗುವ ಆಕ್ಸಿಜನ್, ಕುಣಿವ ಸಂಭ್ರಮ
ಆ ಬೆಟ್ಟ ಈ ಬೆಟ್ಟ ಮತ್ತೊಂದು ಬೆಟ್ಟ
ಅವರ ಬಿಟ್ಟು ಇವರ ಬಿಟ್ಟು ನೀನ್ಯಾರು?

ಬೀಡುಬಿಟ್ಟ ಮುಸ್ಸಂಜೆಗೆ
ಕಾಫಿಯದೋ ಕಿಂಗ್‍ಫಿಶರದ್ದೋ ನಗು
ಬೆಟ್ಟದಿಳಿಜಾರಿನ ಮಿನಿ ಮಿನಿ
ಮಿನುಗುವ ದೀಪಗಳ ಕಣ್ಣುಮುಚ್ಚಾಲೆ
ಮೇಲೆಲ್ಲ ಮಂಜುಹೊಗೆಯ
ಓಟದ ಸ್ಪರ್ಧೆಯೇನೋ!
ಶಾಲು ಕೋಟುಗಳೊಳಗೂ ಚಳಿ
ಹುರಿದಕಾಳು ಕುರುಕಲ ಹಪ್ಪಳದ ಶಬ್ದ
ಅದೆಂತಹ ಮೃದು ಅದೆಂತಹ ಹಗುರು
ಅದೆಂತಹ ಸ್ಪರ್ಶ ಅದೆಷ್ಟು ಸೊಗಸು ಈ ಮಾದಕ ಮಂಜು!

ಟೇಬಲ್‌ಮೇಲೆ ಚಿಕನ್‌ಕರಿ
ಬಿಸಿಚಪಾತಿ ತಂದಿಟ್ಟ ಮಾಣಿಗೆ
ಟಿಪ್ಸ್ ಎಷ್ಟಿಡಬಹುದೆನ್ನುವ ಕಾತುರ
ಕಿಟಕಿ ಗ್ಲಾಸಿನ ಹೊರಗೆ ಬೆಕ್ಕು
ಎಲುಬಿಗೆ ತಿಣುಕಾಡುವ
ಮೆತ್ತೆನೆಯ ಕಳ್ಳ ಧ್ವನಿ

ಮಂಜುಕವಿದ ಮುಂಜಾವಿಗೆ
ಸೂರ್ಯ ತೆವಳುತ್ತ ಮೇಲೆದ್ದದ್ದು
ಕಿಟಕಿಯಾಚೆ ಗರಿಕೆ ಹೂವುಗಳಿಗೆ
ಸ್ಫಟಿಕ ಹರಳುಗಳ ಕೂಡಿಡುವಿಕೆಯ ಆಟ
ತುಂಬಿನಿಂತ ಕೆರೆಯೊಳಗೆ
ಸ್ನಾನಕ್ಕಿಳಿದು ಹುಡುಗಿಯರ ಛೇಡಿಸುವ ಸೂರ್ಯ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...