Home / ಲೇಖನ / ಇತರೆ / ಜೀವಕ್ಕೆ ಬೆಲೆ ಇದೆಯೆ ?

ಜೀವಕ್ಕೆ ಬೆಲೆ ಇದೆಯೆ ?

ಪ್ರಿಯ ಸಖಿ,
ದೂರದರ್ಶನವೆಂಬ ಮೂರ್ಖರ ಪೆಟ್ಟಿಗೆ ಮನೆಗಳಿಗೆ ಧಾಳಿಯಿಟ್ಟಾಗಿನಿಂದ ಮನೆಮಂದಿಯ ಊಟ, ತಿಂಡಿ ಎಲ್ಲ ಅದರ ಮುಂದೆಯೇ! ಹಲವಾರು ಕಾರಣಗಳಿಗೆ ಅದು ಮೂರ್ಖರ ಪೆಟ್ಟಿಗೆಯೇ ಆದರೂ ಎಲ್ಲೋ ನಡೆದ ಘೋರವನ್ನು, ದುರಂತವನ್ನು ಇದ್ದದ್ದು ಇದ್ದಂತೆ ನಮ್ಮ ಕಣ್ಣ ಮುಂದೆ ಚಿತ್ರಿಸುವ ಅದರ ಹಿರಿಮೆಯನ್ನು ಮೆಚ್ಚಿಕೊಳ್ಳಲೇಬೇಕು. ಮೊನ್ನೆ, ದೂರದ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ಗಳಿಗೆ ವಿಮಾನ ಢಿಕ್ಕಿ ಹೊಡೆದು ಆ ಬೃಹತ್ ಕಟ್ಟಡಗಳು ಹಂತ ಹಂತವಾಗಿ ನೆಲಕಚ್ಚುವುದನ್ನು ಕಂಡು ಬೆದರಿರುವ ಜನ, ಕಟ್ಟಡದೊಳಗಿನಿಂದ ಸಹಾಯಕ್ಕಾಗಿ ಯಾಚಿಸುತ್ತಾ ಕೈಚಾಚಿ ಗಾಬರಿಯಿಂದ ಕಿರುಚಿತ್ತಿರುವ ಮಂದಿ, ಕ್ಷಣಾರ್ಧದಲ್ಲಿ ತಮ್ಮ ತಪ್ಪಿಲ್ಲದೆಯೂ ರುಂಡ, ಮುಂಡ, ಕೈಕಾಲು ಬೇರ್ಪಟ್ಟು ರಕ್ತಸಿಕ್ತ ದೇಹದಲ್ಲಿ ಮುದ್ದೆಯಾಗಿ ಬಿದ್ದ ಪ್ರಾಣವಿರುವ, ಪ್ರಾಣಹೋದ, ಕುಟುಕು ಪ್ರಾಣದ ಸಾವಿರಾರು ದೇಹಗಳನ್ನು ಟಿ.ವಿ. ಪರದೆಯ ಮೇಲೆ ಕಂಡಾಗ ಹೃದಯ ದ್ರವಿಸಿ ಹೊಟ್ಟೆ ಕಿವುಚಿದಂತಾಗಿ ಕಂಗಳಲ್ಲಿ ನೀರು ತಂದುಕೊಂಡವರದೆಷ್ಟೋ ಮಂದಿ ಕೈಯಲ್ಲಿರುವ ತುತ್ತು ಬಾಯಿಗೆ ಹೋಗದೇ ಮುಷ್ಕರ ಹೂಡುತ್ತದೆ. ಏನೋ ತಳಮಳ, ಸಂಕಟ, ಪ್ರಶ್ನೆಗಳ ಸರಮಾಲೆ ಅಯ್ಯೋ ಇದೆಲ್ಲಾ ಏನಾಗುತ್ತಿದೆ? ಅಮೆರಿಕದ ಅಡಳಿತ ನಡೆಸುತ್ತಿರುವ ಕೆಲವೇ ಕೆಲವು ತಲೆಗಳು ತಮ್ಮ ಅಸ್ತಿತ್ವ ಎಲ್ಲೆಡೆ ಸ್ಥಾಪಿಸಿ ಪ್ರತಿಷ್ಠೆ ಮೆರೆಯಲು ಸಲ್ಲದ ಯೋಜನೆಯನ್ನು ಹೂಡಿ ತಪ್ಪು ಹೆಜ್ಜೆ ಇಟ್ಟಿರಬಹುದು. ಅದಕ್ಕೆಂದೇ ಈ ಹಕ್ಕು ಆ ರಾಕ್ಷಸರಿಗೆ ಯಾರು ಕೊಟ್ಟರು ? ಕ್ಷುಲ್ಲಕ ಕಾರಣಗಳಿಗಾಗಿ ಜೀವ ಬಸಿಯುವಷ್ಟು ಮಾನವತ್ವ ತುಂಬಿದವರಾರು ? ಇತ್ಯಾದಿ.

ಕಾಶ್ಮೀರ ಕಣಿವೆಯಲ್ಲಿ ನಿತ್ಯವೂ ನಡೆಯತ್ತಿರುವ ನರಮೇಧ, ಜಮ್ಮು ಕಾಶ್ಮೀರದ ವಿಧಾನ ಸೌಧದ ಬಳಿ ಮೊನ್ನೆಯಷ್ಟೇ ನಡೆದ ಹತ್ಯಾಕಾಂಡ, ಬಾಂಬ್ ಧಾಳಿಗಳಿಂದ ನಿರಂತರ ಸಾವು ನೋವಿಗೀಡಾಗುತ್ತಿರುವ ಮುಗ್ಧ ಜನರು ಪ್ರತಿಷ್ಠೆ ಮೆರೆಯಲು ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಅಸಂಖ್ಯಾತ ಸಾವು, ನಮ್ಮ ಸುತ್ತಮುತ್ತಲೂ ನಿತ್ಯವೂ ನಡೆಯುತ್ತಿರುವ ಕೊಲೆ, ಇಂತಹವುಗಳನ್ನು ಕಂಡಾಗ ನಾವಿರುವುದು, ಬಾಳುತ್ತಿರುವುದು ಮನುಷ್ಯರ ಮಧ್ಯೆಯೇ? ಸ್ವಾರ್ಥ, ಸ್ವಹಿತಗಳ ಮುಂದೆ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ದಿಗಿಲಾಗುತ್ತದೆ.

ಸಖಿ, ಮಾನವ ಏನೆಲ್ಲವನ್ನು ಕಲಿತಿರಬಹುದು, ತಿಳಿದಿರಬಹುದು, ಏನೇನೆಲ್ಲವನ್ನೂ ಸೃಷ್ಟಿಸಿರಬಹುದು, ವಿನಾಶ ಮಾಡಬಹುದು. ಅದರೆ ಸತ್ತು ಮಲಗಿರುವವನಿಗೆ ಮತ್ತೆ ಜೀವ ತುಂಬುವ ಕಲೆ ಅವನಿಗೆ ಗೊತ್ತಿಲ್ಲ. ಹೀಗಿದ್ದಾಗ ಅಮೂಲ್ಯವಾದ ಜೀವವೊಂದುನ್ನು ತೆಗೆಯುವ ಹಕ್ಕು ಅವನಿಗಿಲ್ಲ. ಈ ಸೃಷ್ಟಿಯಲ್ಲಿ ಎಷ್ಟೊಂದು ಅಸಮಾನತೆ, ನ್ಯೂನ್ಯತೆ, ಘೋರಗಳು ಇವೆ. ಆದರೆ ಮಾನವರಿಗೆ ದೊರಕಿರುವ ಈ ಜೀವ ತೆಗೆಯುವ ಕ್ರೂರತೆ ಮಾತ್ರ ಎಲ್ಲಕ್ಕಿಂತಾ ಘೋರವಾದುದು. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...