ಹೊನ್ನಹೊಳೆಯ ಸೂಜಿಗಲ್ಲು

ಸುರಿವ ಧಾರಾಕಾರ ಮಳೆಯೊಳಗೆ
ತೊಯ್ಸಿಕೊಂಡು ನೆನೆದು ನಡುಗಿದ್ದು-
ಬಿಸಿನೀರಿನ ಶವರ್ ಕೆಳಗೆ ಕುಳಿತು
ಬೆಚ್ಚಗಾಗಿ ಹೊರಬಿದ್ದರೂ
ಕಾಫಿ ಸಿಪ್‌ಗೆ ದೌಡಾಯಿಸಿದ
ಸೂಜಿಗಲ್ಲು ಕೊರೆವ ಚಳಿ ಮಳೆ.

ವರುಷ ವರುಷ ವಸಂತೋನ್ಮಾದದ
ಚಿಗುರು ಹೂವುಗಳ ದಾಂಗುಡಿ
ಗುಡುಗು ಸದ್ದಡಗಿಸಿ ಕಾರ್ಮುಗಿಲು ಹಗುರಾಗಿ
ಹಳ್ಳ ಕೆರೆ ತು೦ಬಿಸುವ ತಹತಹಿಕೆ
ನಿರಮ್ಮಳ ಹೊನ್ನ ಹೊಳೆಯ ಸೂಜಿಗಲ್ಲು

ಕರೆದಾಗ ಬರದೆ ಪೀಡಿಸಿ
ನೂಕಿದಾಗ ಬರುವನೆನ್ನುವ
ಕೊಡ ತುಂಬಿ ಮೊಗೆ ಮೊಗೆದಷ್ಟು
ದಿನದಿನವೂ ಚಿಲುಮೆ ಮುಗುಳುನಗು
ಹೊನ್ನ ಹೊಳೆಯ ರಮ್ಯ ಬಳುಕಾಟ
ತುಳುಕಾಟ ಸೂಜಿಗಲ್ಲು ಕವಿತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗದ್ದೆಯಲ್ಲಿರುವ ಒಂದು ಕಪ್ಪೆ
Next post ಸಂಬೋಧನೆ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…