Home / ಕವನ / ಕವಿತೆ / ಕ್ಲಿಂಟನ್

ಕ್ಲಿಂಟನ್

“ಪಾಪ! ಅಂವ ಮಾಡಬಾರದ್ದ
ತಪ್ಪೇಽನ ಮಾಡ್ಯಾನ
ಮನುಷ್ಯಾ ಮಾಡ್ದ ಏನ್
ಹೆಣಾ ಮಾಡ್ತತಿ”
“ಮೋನಿ ಅಷ್ಟ ಮೋಡೀಽನ ಮಾಡ್ಯಾಳ
ಅಂದ ಮ್ಯಾಲ ಅವಂದಽ ತಪ್ಪಂತ
ಹೆಂಗಂತೀರಿ, – ಆಕಿಂದನೂ ತಪ್ಪಽ
ಹೌದಲ್ಲೋ ಮತ್ತಽ”

“ಅಂವ ಪ್ರೆಸಿಡೆಂಟ್ ಆದ್ರ ಏನಾಽತು
ಮನಷ್ಯಾನ ಹೌದಲ್ಲೋ ಮತ್ತಽಽ”
“ಆಗಿದ್ದಾಗಿ ಹೋತ್ರಪಾ
ಅದನಽ ದೊಡ್ದದ ಮಾಡಬಾರದ
ನಿಮಗಽ ಬ್ಯಾರೆ ಕೆಲಸ – ಬಗಸಿ ಇಲ್ಲೇನು,
ಟಿ.ವಿ. ದಾಗ ಅವ್ರು ಹೇಳಿದ್ರು
ಪೇಪರದಾಗ ನೀವು ಓದಿದ್ರಿ –
ದೊಽಡ್ಡ ಮಾತಾಡಕ್ಹತ್ತಾರ”

“ನಿಮಗ ಏನಽರ ಗೊತ್ತತ್ತೇನ
ಲವ್ವ ಗಿವ್ವು ( love, give)
ಅಂದರ ಏನಂತ –
‘ಹೆಂಡತಿ ಅದಾಽಳಲ್ಲ’
ಆಕಿಽ ಕಿಮ್ಮತ್ತು ಆಕೀಗೆ ಇದ್ದ ಇರ್‍ತತಿ
ಈ ಮೋನಿ ಇದ್ರ ಇರವಳ್ಯಾಕ
ಅದರ ಕಿಮ್ಮತ್ತು ಅದಕ ಇದ್ದಽ ಇರತತಿ
ಇಂವ ಆಟಽ ತುಡುಗು ಬೆಣ್ಣಿ
ತಿಣ್ಣಾಕ ಹೋಗಿ ಸಿಗಬಾರ್‍ದಿತ್ತು, ಸಿಕ್ಕ
ಇನ್ನೇನ ಮಾಡಕ ಆಗ್ತತಿ
ಇಂವು ಆಟಽ ಸುದ್ದಿ ಆಗೋದಕ್ಕಿಂತ
ಮೊದಲ ಹೇಳಬೇಕಾಗಿತ್ತು ಹೇಳಲಿಲ್ಲ
ಆಮೇಲರೆಽ ಆಟ ‘ಹೂಂ’ ಅಂದೀಽರ
ಮುಗಿತಿತ್ತು”

“ಅಬರು ಉಳಿಸಿಕೊಳ್ಯಾಕ ಹೋಗ್ಯಾನ
ಖರೇ ಆಕಿ ಬಿಡತಾಳೇಽನ
ಅರವಿ ಅಂಚಡಿ ಸಹಿತ ಧಾಖಲ ಮಾಡಿ
ಅಂವ ಹ್ಯಾಂಗ ಪ್ರೀತಿಸ್ತಿದ್ದ ಅನ್ನೋದು
ಎದಿ ಉಬ್ಬುಬ್ಬಿಸಿ ಹೇಳಿ
ತನ್ನ ಹಳೇಽ ಸೇಡ ಏನೇನೋ
ಇರಬೇಕಽ ತೀರಿಸಿಕೊಂಡಬಿಟ್ಲ.
ಈಗ ಇಂವನ ಮುಖಾ
ಇಂಗ ತಿಂದ ಮಂಗ್ಯಾನ ಹಂಗ ಆಗೇತಿ
ನೋಡಿದ್ರಿಲ್ಲೋ ಟಿ.ವಿ.ದಾಗ”

“ಹಿಂಗಽ ಮನಿ ವಿಷಯ
ಬೀದಿಗೆ ಎಳಿಬಾರ್‍ದಿತ್ತು’
“ಆಗಿದ್ದಾಗಿಹೋತು ಬಿಡ್ರಪ್ಪ ಇನ್ನ
ಹೊಳ್ಳಿಽ ಹೊಳ್ಳಿಽ ಅದಽ ಮಾತಾಡವ್ರು
ಅಂವ ದೇಶಕ್ಕೆ ಏನೇನ
ಸಾಧನಾ ಮಾಡ್ಯಾನಽ ಬಿಟ್ಟಾನಽ
ಆನ್ನೋದಟ ಮಾತಾಡ್ರಿ”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...