Home / ಕವನ / ಕವಿತೆ / ದೇಶಾವರಿ

ದೇಶಾವರಿ

ಬರ್ರಿ ಹೀಗೇ ದೇಶಾವರಿ, ಮಾತಾಡಾಣ,
ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ
ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ
ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ,
ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು?
ಎಷ್ಟು ಬಣವಿ ಸುಟ್ಟು ಎಷ್ಟು ಪಂಪಸೆಟ್ ಕಳವು ಮಾಡಿಸಿದುವು?
ಎಷ್ಟು ಕಳವು ಮಾಡಿಸಿದುವು, ಎಷ್ಟು ತಾಳಿ ಕಿತ್ತವು?
ಎಷ್ಟು ಮನಿ ದೀಪಾ ತಗದುವು?

ನಿಮ್ಮೂರ ದೇವ್ರುಗಳು ಎಷ್ಟು ಸಾಲಾ ಮಾಡಿಸಿದುವು?
ಹಳೆ ಬಾವಿಗಳಾಗೆಷ್ಟು ಹಳಸು ಗ್ವಾತ ಹಾಕಿದುವು?
ಜಾತಿ ಭೇದದ ಬೇರಿಗೆಷ್ಟು ನೀರು ಹಾಕಿದುವು?
ನಿಮ್ಮೂರ ರಾಕ್ಷಸರು ಎಷ್ಟು ಬಾಳ್ವೆ ಕೆಡಿಸಿದರು?
ಎಷ್ಟು ರಂಡೇರ ಎಷ್ಟು ಗರ್ಭಪಾತ ಮಾಡಿಸಿದುವು?
ಹೊಸಗಾಳಿಗಳಾಗೆ ಎಷ್ಟು ತೂರಿಕೊಂಡು ಗೂಳ್ಯಾಗಿ ಮೆರದರು?
ಹುಚ್ಚು ಮುಂಡೇ ಮದುವ್ಯಾಗೆಷ್ಟು ಜಾಣರುಂಡರು?

ಎಷ್ಟು ಹರೇವುಗಳು ಹದ್ದುಮೀರಿ ಓಡಿದುವು?
ಎಷ್ಟು ಹಾದರಾ ಬಾವ್ಯಾಗೆ ತೇಲಿದುವು? ತಿಪ್ಯಾಗೆ ಹೂಳಿದುವು?
ಎಷ್ಟು ಮಣಕಾ ಹಳೇ ಎತ್ತುಗಳ ಕಾಲಾಗೆ ಬಿದ್ವು?

ಇನ್ನು ದೇಶದ ದೇಶಾವರೀನಾ!
ಊರುಡಾಳರ ಆಡಳಿತಾ, ಕಳ್ಳ ಕದೀಮರ ಮೆರೆತಾ
ಹಸಗೆಟ್ಟ ದೇಶದ ದೇಹಸ್ಥಿತಿಗೆ ಹೊಸ ಕಂತ್ರಿ ಔಷಧ,
ದಿನದಿನಕೆ ರೋಗ ಉಲ್ಬಣ, ದೇಹ ಬರೀ ಮೂಳೆ ತೊಗಲು
ಕೆಲವು ಕಡಿಗೆ ಹಣದುಬ್ಬರದ ಕೀವು ಬಾವು

ಪೊಳ್ಳು ಆಶ್ವಾಸನಗಳ ಗುಳ್ಳೆ ತೇಲ್ತಾವೆ,
ಐದು ವರ್ಷದಾಗೆಷ್ಟು ಬೇಕೋ ಅಷ್ಟು ಕಾರಭಾರ
ಅವರ ಮನೆತನ ಕಳಬಳ್ಳೆಲ್ಲ ನಾಕೈದು ತಲೆಮಾರ ಹಾರಭಾರಾ
ಇವತ್ತು ಕೈಕೈ ಮಿಲಾಪು ನಾಳೆ ಕುತ್ತಿಗೆ ಕುತ್ತಿಗೆ ರೋಪು
ಹೀಂಗೇ ನಾಟಕಾ ನಡದಾದ ಸ್ವಾಮೀ!
ದೇಶದಾಗ ದೇಶ ಉಳಿದಿಲ್ಲ ಬರೀ ದೇಶಾವರೀನೇ ನಡದಾದ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...