Home / ಕವನ / ಕವಿತೆ / ದೇಶಾವರಿ

ದೇಶಾವರಿ

ಬರ್ರಿ ಹೀಗೇ ದೇಶಾವರಿ, ಮಾತಾಡಾಣ,
ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ
ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ
ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ,
ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು?
ಎಷ್ಟು ಬಣವಿ ಸುಟ್ಟು ಎಷ್ಟು ಪಂಪಸೆಟ್ ಕಳವು ಮಾಡಿಸಿದುವು?
ಎಷ್ಟು ಕಳವು ಮಾಡಿಸಿದುವು, ಎಷ್ಟು ತಾಳಿ ಕಿತ್ತವು?
ಎಷ್ಟು ಮನಿ ದೀಪಾ ತಗದುವು?

ನಿಮ್ಮೂರ ದೇವ್ರುಗಳು ಎಷ್ಟು ಸಾಲಾ ಮಾಡಿಸಿದುವು?
ಹಳೆ ಬಾವಿಗಳಾಗೆಷ್ಟು ಹಳಸು ಗ್ವಾತ ಹಾಕಿದುವು?
ಜಾತಿ ಭೇದದ ಬೇರಿಗೆಷ್ಟು ನೀರು ಹಾಕಿದುವು?
ನಿಮ್ಮೂರ ರಾಕ್ಷಸರು ಎಷ್ಟು ಬಾಳ್ವೆ ಕೆಡಿಸಿದರು?
ಎಷ್ಟು ರಂಡೇರ ಎಷ್ಟು ಗರ್ಭಪಾತ ಮಾಡಿಸಿದುವು?
ಹೊಸಗಾಳಿಗಳಾಗೆ ಎಷ್ಟು ತೂರಿಕೊಂಡು ಗೂಳ್ಯಾಗಿ ಮೆರದರು?
ಹುಚ್ಚು ಮುಂಡೇ ಮದುವ್ಯಾಗೆಷ್ಟು ಜಾಣರುಂಡರು?

ಎಷ್ಟು ಹರೇವುಗಳು ಹದ್ದುಮೀರಿ ಓಡಿದುವು?
ಎಷ್ಟು ಹಾದರಾ ಬಾವ್ಯಾಗೆ ತೇಲಿದುವು? ತಿಪ್ಯಾಗೆ ಹೂಳಿದುವು?
ಎಷ್ಟು ಮಣಕಾ ಹಳೇ ಎತ್ತುಗಳ ಕಾಲಾಗೆ ಬಿದ್ವು?

ಇನ್ನು ದೇಶದ ದೇಶಾವರೀನಾ!
ಊರುಡಾಳರ ಆಡಳಿತಾ, ಕಳ್ಳ ಕದೀಮರ ಮೆರೆತಾ
ಹಸಗೆಟ್ಟ ದೇಶದ ದೇಹಸ್ಥಿತಿಗೆ ಹೊಸ ಕಂತ್ರಿ ಔಷಧ,
ದಿನದಿನಕೆ ರೋಗ ಉಲ್ಬಣ, ದೇಹ ಬರೀ ಮೂಳೆ ತೊಗಲು
ಕೆಲವು ಕಡಿಗೆ ಹಣದುಬ್ಬರದ ಕೀವು ಬಾವು

ಪೊಳ್ಳು ಆಶ್ವಾಸನಗಳ ಗುಳ್ಳೆ ತೇಲ್ತಾವೆ,
ಐದು ವರ್ಷದಾಗೆಷ್ಟು ಬೇಕೋ ಅಷ್ಟು ಕಾರಭಾರ
ಅವರ ಮನೆತನ ಕಳಬಳ್ಳೆಲ್ಲ ನಾಕೈದು ತಲೆಮಾರ ಹಾರಭಾರಾ
ಇವತ್ತು ಕೈಕೈ ಮಿಲಾಪು ನಾಳೆ ಕುತ್ತಿಗೆ ಕುತ್ತಿಗೆ ರೋಪು
ಹೀಂಗೇ ನಾಟಕಾ ನಡದಾದ ಸ್ವಾಮೀ!
ದೇಶದಾಗ ದೇಶ ಉಳಿದಿಲ್ಲ ಬರೀ ದೇಶಾವರೀನೇ ನಡದಾದ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...