Home / ಲೇಖನ / ಇತರೆ / ಧನಾತ್ಮಕ ನಿಲುವು

ಧನಾತ್ಮಕ ನಿಲುವು

ಪ್ರಿಯ ಸಖಿ,

ಬ್ರಿಟೀಷರೊಡನೆ ಭಾರತದ ಪರವಾಗಿ ವಾದ ಮಾಡಿ ಸ್ವಾತಂತ್ರ್ಯ ಪಡೆಯಲೆಂದು ದುಂಡು ಮೇಜಿನ ಗೋಷ್ಠಿಗಾಗಿ ಗಾಂಧೀಜಿ, ಹಡಗಿನಲ್ಲಿ ಅವರ ನಾಡಿಗೆ ಹೊರಟಾಗ, ಅವರ ಜೊತೆಗೆ ಹಡಗಿನಲ್ಲಿದ್ದ ಕೆಲವು ಬ್ರಿಟೀಷ್ ಜನರು ಗಾಂಧೀಜಿಯೊಡನೆ ಬೆಳಗು ರಾತ್ರಿ ಚರ್ಚಿಸುತ್ತಿದ್ದರು. ನಾವು ಭಾರತವನ್ನು ಬಿಟ್ಟು ಹೋದರೆ ಭಾರತಕ್ಕೆ ದುರ್ಗತಿ ತಪ್ಪಿದ್ದಲ್ಲ. ಆದ್ದರಿಂದ ನಾವು ನಿಮ್ಮನ್ನು ಆಳುವುದೇ ಕ್ಷೇಮ ಇತ್ಯಾದಿ ಮಾತನಾಡುತ್ತಿದ್ದರು. ಗಾಂಧೀಜಿಯವರೂ ನಮ್ಮ ದೇಶದ ಪರವಾಗಿ ನಿರಂತರವಾಗಿ ವಾದ ಮಾಡುತ್ತಿದ್ದರು.

ಕೊನೆಗೊಮ್ಮೆ ತಮ್ಮ ಪರವಾದವನ್ನೆಲ್ಲಾ ೪-೫ ಪುಟಗಳಷ್ಟು ನೋಟ್ಸ್‌ ಬರೆದು ಅದಕ್ಕೊಂದು ಗುಂಡುಸೂಜಿ ಚುಚ್ಚಿ ಆ ಆಂಗ್ಲ ಜನರು ಗಾಂಧೀಜಿಗೆ ನೀಡಿ ನಮ್ಮ
ವಾದವನ್ನೆಲ್ಲಾ ಇದರಲ್ಲಿ ಮಂಡಿಸಿದ್ದೇವೆ. ನಿಮಗೆ ಇದರಿಂದ ನಮ್ಮ ನಿಲುವು ಸ್ಪಷ್ಟವಾಗಬಹುದು. ಹಾಗೇ ಅದರಿಂದ ನಿಮ್ಮ ಮನಪರಿವರ್ತನೆಯಾಗಲು ಉಪಯೋಗ
ವಾಗಬಹುದು ಎಂದರು.

ಗಾಂಧೀಜಿ ಆ ನೋಟ್ಸನ್ನು ತೆಗೆದುಕೊಂಡರು. ಮಾರನೆಯ ದಿನ ಅವರಿದ್ದಲ್ಲಿಗೆ ಆಗಮಿಸಿದ ಆಂಗ್ಲರು ನಮ್ಮ ನೋಟ್ಸ್‌ ಓದಿದಿರಾ? ಎಂದರು. ಗಾಂಧೀಜಿ ಓದಿದೆ ಎಂದರು. ಅದಕ್ಕವರು ಹಾಗಿದ್ದರೆ ಅದರಲ್ಲಿ ನಿಮಗೆ ಏನಾದರೂ ಬೆಲೆಯುಳ್ಳದ್ದು ಇದೆ ಎನಿಸಿತೇ? ಎಂದು ಕೇಳಿದರು. ನಾನಾಗಲೇ ಬೆಲೆಯುಳ್ಳದ್ದನ್ನು  ತೆಗೆದಿರಿಸಿಕೊಂಡಿದ್ದೇನೆ ಎಂದು ಆ ನೋಟ್ಸಿಗೆ ಚುಚ್ಚಿದ್ದ ಹೊಸ ಗುಂಡು ಸೂಜಿಯನ್ನು ತೋರಿಸಿ ನಕ್ಕರು ಗಾಂಧೀಜಿ.

ಈ ಒಂದು ಪ್ರಸಂಗದಿಂದ ಗಾಂಧೀಜಿಯವರು ಎಷ್ಟೊಂದು ನಿಷ್ಟುರವಾದಿಗಳೂ, ದೇಶಪ್ರೇಮಿಗಳೂ ಆಗಿದ್ದರು ಎಂದು ತಿಳಿಯುವ ಹಾಗೆ ತಮಗೆ ಇಷ್ಟವಿಲ್ಲವೆನಿಸಿದ
ಸಂಗತಿಗಳಿಂದಲೂ ತಮಗೆ ಉಪಯೋಗಿಯಾಗುವಂತಹುದನ್ನು ತೆಗೆದುಕೊಳ್ಳುವ ಧನಾತ್ಮಕ ನಿಲುವು (Positive thinking) ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಸಖಿ, ನಮ್ಮ ಬದುಕಿನಲ್ಲೂ ನಮಗೆ ಬೇಡವಾದ ಎಷ್ಟೊಂದು ಸಂಗತಿಗಳು ನಡೆಯುತ್ತಿರುತ್ತವೆ. ಬೇಡದ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆಗೆಲ್ಲಾ ಮನಸ್ಸು ಕಹಿಯಾಗುತ್ತದೆ.  ಅದರೆ ಅಂತಹ ಕೆಡುಕಿನಲ್ಲೂ ಒಳಿತನ್ನು, ಧನಾತ್ಮಕ ನಿಲುವನ್ನು ನಾವು ಬೆಳೆಸಿಕೊಂಡರೆ ನಿಜಕ್ಕೂ ಬದುಕು ಸುಂದರವಾಗುತ್ತದೆ. ಕೆಟ್ಟದ್ದರಲ್ಲಿಯೂ ನಮಗೆ ಉಪಯೋಗವಾಗಬಲ್ಲ ಒಳಿತನ್ನು ಆರಿಸಿಕೊಳ್ಳುವುದೇ ನಿಜವಾದ ಜಾಣತನವಲ್ಲವೆ ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...