ಧನಾತ್ಮಕ ನಿಲುವು

ಪ್ರಿಯ ಸಖಿ,

ಬ್ರಿಟೀಷರೊಡನೆ ಭಾರತದ ಪರವಾಗಿ ವಾದ ಮಾಡಿ ಸ್ವಾತಂತ್ರ್ಯ ಪಡೆಯಲೆಂದು ದುಂಡು ಮೇಜಿನ ಗೋಷ್ಠಿಗಾಗಿ ಗಾಂಧೀಜಿ, ಹಡಗಿನಲ್ಲಿ ಅವರ ನಾಡಿಗೆ ಹೊರಟಾಗ, ಅವರ ಜೊತೆಗೆ ಹಡಗಿನಲ್ಲಿದ್ದ ಕೆಲವು ಬ್ರಿಟೀಷ್ ಜನರು ಗಾಂಧೀಜಿಯೊಡನೆ ಬೆಳಗು ರಾತ್ರಿ ಚರ್ಚಿಸುತ್ತಿದ್ದರು. ನಾವು ಭಾರತವನ್ನು ಬಿಟ್ಟು ಹೋದರೆ ಭಾರತಕ್ಕೆ ದುರ್ಗತಿ ತಪ್ಪಿದ್ದಲ್ಲ. ಆದ್ದರಿಂದ ನಾವು ನಿಮ್ಮನ್ನು ಆಳುವುದೇ ಕ್ಷೇಮ ಇತ್ಯಾದಿ ಮಾತನಾಡುತ್ತಿದ್ದರು. ಗಾಂಧೀಜಿಯವರೂ ನಮ್ಮ ದೇಶದ ಪರವಾಗಿ ನಿರಂತರವಾಗಿ ವಾದ ಮಾಡುತ್ತಿದ್ದರು.

ಕೊನೆಗೊಮ್ಮೆ ತಮ್ಮ ಪರವಾದವನ್ನೆಲ್ಲಾ ೪-೫ ಪುಟಗಳಷ್ಟು ನೋಟ್ಸ್‌ ಬರೆದು ಅದಕ್ಕೊಂದು ಗುಂಡುಸೂಜಿ ಚುಚ್ಚಿ ಆ ಆಂಗ್ಲ ಜನರು ಗಾಂಧೀಜಿಗೆ ನೀಡಿ ನಮ್ಮ
ವಾದವನ್ನೆಲ್ಲಾ ಇದರಲ್ಲಿ ಮಂಡಿಸಿದ್ದೇವೆ. ನಿಮಗೆ ಇದರಿಂದ ನಮ್ಮ ನಿಲುವು ಸ್ಪಷ್ಟವಾಗಬಹುದು. ಹಾಗೇ ಅದರಿಂದ ನಿಮ್ಮ ಮನಪರಿವರ್ತನೆಯಾಗಲು ಉಪಯೋಗ
ವಾಗಬಹುದು ಎಂದರು.

ಗಾಂಧೀಜಿ ಆ ನೋಟ್ಸನ್ನು ತೆಗೆದುಕೊಂಡರು. ಮಾರನೆಯ ದಿನ ಅವರಿದ್ದಲ್ಲಿಗೆ ಆಗಮಿಸಿದ ಆಂಗ್ಲರು ನಮ್ಮ ನೋಟ್ಸ್‌ ಓದಿದಿರಾ? ಎಂದರು. ಗಾಂಧೀಜಿ ಓದಿದೆ ಎಂದರು. ಅದಕ್ಕವರು ಹಾಗಿದ್ದರೆ ಅದರಲ್ಲಿ ನಿಮಗೆ ಏನಾದರೂ ಬೆಲೆಯುಳ್ಳದ್ದು ಇದೆ ಎನಿಸಿತೇ? ಎಂದು ಕೇಳಿದರು. ನಾನಾಗಲೇ ಬೆಲೆಯುಳ್ಳದ್ದನ್ನು  ತೆಗೆದಿರಿಸಿಕೊಂಡಿದ್ದೇನೆ ಎಂದು ಆ ನೋಟ್ಸಿಗೆ ಚುಚ್ಚಿದ್ದ ಹೊಸ ಗುಂಡು ಸೂಜಿಯನ್ನು ತೋರಿಸಿ ನಕ್ಕರು ಗಾಂಧೀಜಿ.

ಈ ಒಂದು ಪ್ರಸಂಗದಿಂದ ಗಾಂಧೀಜಿಯವರು ಎಷ್ಟೊಂದು ನಿಷ್ಟುರವಾದಿಗಳೂ, ದೇಶಪ್ರೇಮಿಗಳೂ ಆಗಿದ್ದರು ಎಂದು ತಿಳಿಯುವ ಹಾಗೆ ತಮಗೆ ಇಷ್ಟವಿಲ್ಲವೆನಿಸಿದ
ಸಂಗತಿಗಳಿಂದಲೂ ತಮಗೆ ಉಪಯೋಗಿಯಾಗುವಂತಹುದನ್ನು ತೆಗೆದುಕೊಳ್ಳುವ ಧನಾತ್ಮಕ ನಿಲುವು (Positive thinking) ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಸಖಿ, ನಮ್ಮ ಬದುಕಿನಲ್ಲೂ ನಮಗೆ ಬೇಡವಾದ ಎಷ್ಟೊಂದು ಸಂಗತಿಗಳು ನಡೆಯುತ್ತಿರುತ್ತವೆ. ಬೇಡದ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆಗೆಲ್ಲಾ ಮನಸ್ಸು ಕಹಿಯಾಗುತ್ತದೆ.  ಅದರೆ ಅಂತಹ ಕೆಡುಕಿನಲ್ಲೂ ಒಳಿತನ್ನು, ಧನಾತ್ಮಕ ನಿಲುವನ್ನು ನಾವು ಬೆಳೆಸಿಕೊಂಡರೆ ನಿಜಕ್ಕೂ ಬದುಕು ಸುಂದರವಾಗುತ್ತದೆ. ಕೆಟ್ಟದ್ದರಲ್ಲಿಯೂ ನಮಗೆ ಉಪಯೋಗವಾಗಬಲ್ಲ ಒಳಿತನ್ನು ಆರಿಸಿಕೊಳ್ಳುವುದೇ ನಿಜವಾದ ಜಾಣತನವಲ್ಲವೆ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಚಾಮೃತ
Next post ದೇಶಾವರಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys